ಪುಟ:ನವೋದಯ.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಾಸುಗೆ, ಟ್ರಂಕು_ಎರಡೂ ದೊಡ್ಡವೇ. ಜತೆಯಲ್ಲೆ, ಸಾಮಾನುಗಳನ್ನು
ತುಂಬಿದ್ದೊಂದು ಗೋಣಿಚೀಲ. ಆ ಚೀಲವನ್ನು ಮೆಲ್ಲನೆ ಮುಟ್ಟಿದರೂ ಸಾಕು,
ಒಳಗಿನ ಡಬ್ಬ ಪಾತ್ರೆಗಳು ಕುಯ್ಯೋ ಮುರ್ರೋ ಎನ್ನುತ್ತಿದ್ದುವು. ರೈಲುಗಾಡಿಯಿಂದ
ಅವುಗಳನ್ನೆಲ್ಲ ಕೆಳಗಿಳಿಸಿದ ಕೂಲಿಯಾಳು, ದಂಪತಿಯತ್ತ ನೋಡಿ ಕೇಳಿದ:
"ಬಸ್ಗೋಗ್ತೀರಾ ಬುದ್ಧಿ?"
ಜಯದೇವ ನಿಂತಲ್ಲಿಂದಲೆ ನಿತ್ಯಾನಂದ ಮೋಟಾರನ್ನು ಹುಡುಕುತ್ತ ನಿಲ್ದಾಣ
ದಾಚೆಗೆ ದೃಷ್ಟಿಹರಿಸಿದ್ದ. ಅದು ಮೂರು ವರ್ಷಗಳಿಗೆ ಹಿಂದೆ ಆತ ಪ್ರಯಾಣ ಮಾಡಿದ್ದ
ವಾಹನ.
ಆಳಿನ ಮಾತು ಕೇಳಿಸಿ ಆತನೆಂದ:
"ಏನಪ್ಪ?... ಹೂಂ. ಬಸ್ಗೇ ಕಣಯ್ಯ."
"ನಡೀರಿ ಬುದ್ಧಿ. ಎತ್ಕೊಂಬತ್ತೀನಿ."
ಮುಖ್ಯವಾದ ವಿಷಯವನ್ನೇ ಜಯದೇವ ಮರೆತುದನ್ನು ಗಮನಿಸಿ ಸುನಂದಾ
ಅಂದಳು:
"ಎಷ್ಟಪ್ಪಾ ಕೂಲಿ?"
ಅಮ್ಮನವರೂ ಮುಖ್ಯರಾದವರೆಂಬುದನ್ನರಿತು,ಅವರೆಡೆಗೆ ತಿರುಗಿದ ಆಳು.
"ನೀವು ಕೊಟ್ಟಿದ್ದು ಇಸಕೋತೀನ್ರವ್ವಾ."
ಸುನಂದೆಯ ಮುಂಜಾಗರೂಕತೆಯನ್ನು ಕoಡು, ನಸುನಕ್ಕು ಜಯದೇವನೆಂದ:
"ಇಲ್ಲಿಯವರು ಬೆಂಗಳೂರಿನ ಕೂಲಿಗಳ ಹಾಗಲ್ಲ ಕಣೇ. ಇವರು ಜಗಳಾಡೊಲ್ಲ:
ತುಂಬಾ ಸಂಭಾವಿತರು."
"ಬುದ್ಧಿಯೋರಿಗೆ ತಿಳೀದಾ..." ಎಂದ ಆಳು, ಹಲ್ಲುಕಿಸಿದು.
ರೈಲುಗಾಡಿ ಶಿಳ್ಳು ಹಾಕಿ ನಿಲ್ದಾಣ ಬಿಟ್ಟು ಮುಂದಕ್ಕೆ ತೆರಳಿತು. ಜನರು
ಹೊರಹೋಗುತ್ತಲೇ ಇದ್ದರು.
ಮೋಟಾರಿನಲ್ಲಿ ಸೀಟಿಗೋಸ್ಕರ ಹಿಂದೆ ನಡೆಸಿದ್ದ ಪರದಾಟದ ನೆನಪಾಗಿ ಜಯ
ದೇವ, ಆಳನ್ನು ಅವಸರಪಡಿಸುತ್ತ ಹೇಳಿದ:
"ಬೇಗ್ಬೇಗ್ನೆ ಎತ್ಕೊ೦ಡು ನಡೀಪ್ಪಾ."
“ಇನ್ನೂ ಬಸ್ಸು ಬ೦ದಿಲ್ರಾ...."
"ಇಲ್ಲಿಂದಲೇ ಅಲ್ವೇನಯ್ಯ ಬಸ್ಸು ಹೊರಡೋದು?"
“ನೀವ್ಹೇಳೋದು ಯಾವತ್ತಿನ್ಮಾತು? ಈಗಿರೋದು ಸರ್ಕಾರಿ ಬಸ್ಸು. ಬೆಳಗಿನ