ಪುಟ:ನವೋದಯ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

337

ಅದೂ ಮುಕ್ತಾಯವಾಗಲಿ ಅಂತಿಯೇನು? ನಾಳೆ ಈ ಕೆಲಸ ಮಾಡೋರು ಯಾರು?
ಜಮೀನು ನೋಡ್ಕೊಳ್ಳೋರು ಯಾರು? ಈ ಮನೇಲಿ ಇರೋರು ಯಾರು?"
"ಮಾಧೂ ಇದಾನಲ್ಲ."
"ಮಾಧೂ ಈ ಕೆಲಸ ಮಾಡೋದು ನಿಮ್ಮಮ್ಮನಿಗೆ ಇಷ್ಟವಿಲ್ಲ."
'ನಿಮ್ಮಮ್ಮ! ಎಂದರೆ ಜಯದೇವನ ಚಿಕ್ಕಮ್ಮ.
ತಂದೆಯ ಮನಸ್ಸನ್ನು ನೋಯಿಸಬೇಕಾದ ಪ್ರಮೇಯ ಬಂತೆಂದು ಜಯದೇವನಿಗೆ
ಸಂಕಟವಾಯಿತು. ಸ್ಪಷ್ಟವಾಗಿ ಹೇಳದೆ ಇರುವುದೂ ಕಷ್ಟವೇ.
ಆಡಬೇಕಾದ ಮಾತುಗಳನ್ನು ಆರಿಸುತ್ತ ಸ್ವಲ್ಪ ಹೊತ್ತು ಕಳೆದು ಆತನೆಂದ:
"ಉಪಾಧ್ಯಾಯ ವೃತ್ತೀಲೆ ಇರಬೇಕೂಂತ ನಾನು ಯಾವತ್ತೋ ನಿರ್ಧಾರ
ಮಾಡಿದೀನಿ, ಅಪ್ಪಯ್ಯ."
ನಿರಾಶರಾದ ತಂದೆ ಬೀದಿಯನ್ನೆ ದಿಟ್ಟಿಸಿ ನೋಡುತ್ತ ಅಂದರು;
"ಇಷ್ಟು ವರ್ಷವೆಲ್ಲ ನಿನ್ನ ನಿರ್ಧಾರ ನೀನೇ ಮಾಡಿದೋನು. ಈಗ ನಾನು
ಹೇಳೋದೇನಿದೆ?"
"ನಾನೇನು ಮಾಡ್ಲಿ ಅಪ್ಪಯ್ಯ?"
ಅಂತಹ ಕರಿ ಮೋಡದೆಡೆಯಲ್ಲೂ ಸೂರ್ಯರಶ್ಮಿ ಬರಲು ಅವಕಾಶವಿತ್ತು.
"ಈ ಊರಲ್ಲೇ ನೀನು ಉಪಾಧ್ಯಾಯನಾಗಬಾರದೆ? ಆದಷ್ಟು ದಿವಸ ಎರಡು
ಕೆಲಸಾನೂ ನೋಡ್ಕೊಂಡು ಇರಬಹುದು."
ಸದ್ಯಃ ಈ ಸಂಭಾಷಣೆ ಮುಗಿದರೆ ಸಾಕೆನಿಸಿ ಜಯದೇವನೆಂದ:
"ನೋಡೋಣ ಅಪ್ಪಯ್ಯ. ಮುಂದೆ ಯಾವಾಗಲಾದರೂ ಇಲ್ಲಿಗೇ ಬಂದ
ರಾಯ್ತು."
ಆ ಮಾತಿನಿಂದ ಜಯದೇವನ ತಂದೆಗೆ ತುಸು ತೃಪ್ತಿ ಎನಿಸಿತು. ಒಳಬಾಗಿಲ
ಕಡೆಗೊಮ್ಮೆ ದೃಷ್ಟಿ ಬೀರಿ ಅವರೆಂದರು:
"ಹಾಗೆ ಮಾಡು. ಇಲ್ಲಿಯೂ ಈಗ ಹೈಸ್ಕೂಲಿದೆ."
ಅಷ್ಟರಲ್ಲೆ ಜಯದೇವನ ಚಿಕ್ಕಮ್ಮ ಅತ್ತ ಬಂದರು.
"ಏನ್ಸಮಾಚಾರ? ಏನ್ಮಾತಾಡ್ತಾ ಇದ್ದೀರಿ?" ಎಂದರು.
ವಿಷಯ ತಿಳಿದಾಗ ಅವರ ಪ್ರತಿಕ್ರಿಯೆ ಬುಸುಗುಟ್ಟುತ್ತಲೆ ಬಂತು.
"ಈ ಒಂದು ವರ್ಷ ಸಂಪಾದ್ನೆ ಮಾಡಿ ಕಟ್ಟಿಟ್ಟದ್ದು ಕಾಣ್ತಾ ಇದೆಯಲ್ಲ. ಇಷ್ಟು
ಓದಿದ್ದು ಸಾಲ್ದೇನೋ? ಇಬ್ಬರ ಖರ್ಚೂ ನೋಡ್ಕೊಳ್ಳೋರು ಯಾರು? ಹೀಗೇಂತ
ಮೊದಲೇ ಗೊತ್ತಿದ್ರೆ ಮಾಧೂನ ಮನೇಲಿ ಇರಿಸ್ಕೋಬಹುದಾಗಿತ್ತು.”
ಜಯದೇವ ಅಲ್ಲಿಂದೇಳುತ್ತ ಅಂದ:
"ನನ್ನ ಖರ್ಚಿನ ವಿಷಯ ನೀವು ಯೋಚಿಸ್ಬೇಡಿ. ಆ ಜವಾಬ್ದಾರಿ ನನಗೇ

43