ಪುಟ:ನವೋದಯ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

340

ಸೇತುವೆ

ತರಗತಿಯ ಪರೀಕ್ಷೆಯಲ್ಲಿ ವೇಣು ಉತ್ತೀರ್ಣನಾಗಿದ್ದ. ಕಾಲೇಜು ಶಿಕ್ಷಣದ
ಮೊದಲ ವರ್ಷದ ಸುಖ ಅನುಭವಿಸಿದ್ದ ಮಾಧು ಮಾತ್ರ ತನ್ನ ತರಗತಿಯಲ್ಲಿ
ಮತ್ತೊಮ್ಮೆ ಕುಳಿತುಕೊಳ್ಳುವಂತಾಯಿತು.
ಅಂಗಡಿಯ ಕೆಲಸವನ್ನು ಬಿಟ್ಟು ಜಯದೇವ ಕಾಲೇಜು ಸೇರುವುದಕ್ಕೆ ಮುಂಚೆ
ಯೊಮ್ಮೆ ತಂದೆಯನ್ನು ಕಂಡುಬಂದ.
ಹೆಂಡತಿ ಸಮೀಪದಲ್ಲಿರಲಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಆತನ ತಂದೆ
ಕೇಳಿದರು:
"ನೀನೂ ಹಾಸ್ಟೆಲ್ನಲ್ಲೆ ಮಾಧೂ ಜತೇಲೆ ಇರ್ತೀಯೇನೊ?"
ಅದು 'ಅಮ್ಮ'ನಿಗೆ ಒಪ್ಪಿಗೆಯಾಗದ ವಿಷಯ ಎಂದು ತಿಳಿಯದವನೆ
ಜಯದೇವ?
"ಬೇಡಿ ಅಪ್ಪಯ್ಯ. ವೇಣು ಮನೇಲಿ ಅನುಕೂಲವಾಗಿದೆ. ಅಲ್ಲೇ ಇರ್ತೀನಿ."
"ಹಾಗೇ ಮಾಡು. ಫೀಸಿಗೇನ್ಮಾಡ್ತೀಯಾ?"
"ಮೊದಲಿನ ಕಸಬೇ ಇದೆಯಲ್ಲ? ಎರಡು ಮೂರು ಕಡೆ ಪಾಠ ಗೊತ್ಮಾಡ್ಕೊ
ಳ್ತೀನಿ."
"ಹೂಂ...ಆಗಾಗ್ಗೆ ಮಾಧೂನ ನೋಡ್ತಿರು."
ಮಾಧು ಬರುವುದು ಎರಡು ದಿನ ತಡವಾಗುತ್ತದೆಂದು ಜಯದೇವ ಮೊದಲೇ
ಹೊರಟ. ಬಸ್ಸಿಗಾಗಿ ಕಾಯುತ್ತ ಆತ ನಿಲ್ದಾಣದಲ್ಲಿ ನಿಂತಿದ್ದಂತೆಯೆ ತಂದೆ ಕಾಣಿಸಿ
ಕೊಂಡರು. ಅವರು ಮಗನ ಸಮೀಪಕ್ಕೆ ಬಂದರು. ಅತ್ತಿತ್ತ ನೋಡಿ, ಜೇಬಿಗೆ ಕೈ
ಹಾಕಿ, ಪಿಸುದನಿಯಲ್ಲಿ ಅಂದರು:
"ತಗೋ."
ಅವರ ಅಂಗೈಯಲ್ಲಿ ಐದು ರೂಪಾಯಿಯ ಎರಡು ನೋಟುಗಳು ಮಡಚಿ
ಕುಳಿತಿದ್ದುವು.
"ಬೇಡಿ, ನನ್ನ ಹತ್ತಿರ ಇದೆ, ಅಪ್ಪಯ್ಯ."
“ಇರಲಿ, ತಗೊಳೋ."
ಜಯದೇವನಿಗೆ ಒಮ್ಮೆಲೆ ನಗಬೇಕೆನಿಸಿತು, ಅಳಬೇಕೆನಿಸಿತು.ತಂದೆಯ ವಿಷಯ
ವಾಗಿ ಅವನಿಗೆ ಕನಿಕರ ಮೂಡಿತು. ಅವರ ಮನಸ್ಸು ನೋಯಬಾರದೆಂದು ಆತ ಆ
ಹಣ ಸ್ವೀಕರಿಸಿದ. ಆ ಹತ್ತು ರೂಪಾಯಿಗಳಿಗೋಸ್ಕರ ಮನೆಯಲ್ಲಿ ಬಳಿಕ ಆಗುವ
ರಾಧ್ಧಾ೦ತವನ್ನು ಕಲ್ಪಿಸಿಕೊಂಡು ಆತನ ಮನಸ್ಸು ಮುದುಡಿತು.
....ಬೆಂಗಳೂರಲ್ಲಿ ಶ್ರೀಪತಿರಾಯರು ಒಂದು ಮಾತು ಹೇಳಿದರು:
"ಸುನಂದೇನ ಕಾಲೇಜಿಗೆ ಸೇರಿಸೋಣಾಂತಿದೀನಿ, ಜಯಣ್ಣ .”
ಸಂತೋಷವನ್ನು ಬಚ್ಚಿಡುವುದಾಗಲಿಲ್ಲ ಜಯದೇವನಿಂದ. ಆತನ ಮುಖ
ಪ್ರಸನ್ನವಾಯಿತು.