ಪುಟ:ನವೋದಯ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

342

ಸೇತುವೆ

"ಮಾಧೂ ಸಿಕ್ಕಿದ್ನಾ?"
“ಹೂಂ. ಸಾಯಂಕಾಲ ಹಾಸ್ಟೆಲಿಗೆ ಹೋಗಿದ್ದೆ."
ಜಯದೇವನಿಗೆ ತಿಳಿದಿದ್ದ ಹಾಗೆ, ಸಾಯಂಕಾಲ ಎಷ್ಟೋ ಸಲ ಮಾಧು
ವಿಧ್ಯಾರ್ಥಿನಿಲಯದಲ್ಲಿ ಇರುತ್ತಿರಲಿಲ್ಲ.
“ಬರ್ತೀನಿ ಅಂತ ಮೊದಲೇ ಬರೆದಿದ್ರೇನು?"
“ಹೂಂ..."
ಬೀದಿಗಿಳಿದ ತಂದೆಯೊಡನೆ ಮಗನೂ ಸ್ವಲ್ಪ ದೂರ ಬಂದ. ಭೇಟಿಯ ಕೊನೆ
ನಿಮಿಷಗಳಲ್ಲಿ ಮೌನ ಸರಿಯಲ್ಲವೆಂದು ಜಯದೇವ ತಿಳಿದಿದ್ದರೂ ಯಾವ ವಿಷಯ
ಮಾತನಾಡಬೇಕೆಂದು ಆತನಿಗೆ ತೋಚಲಿಲ್ಲ. ಗೋವಿಂದಪ್ಪನವರೇ ಬಾಯಿತೆರೆದುದ
ರಿಂದ ಆ ಸಮಸ್ಯೆ ಬಗೆಹರಿಯಿತು.
ಅವರೆಂದರು:
“ನಿನಗೆ ಪರೀಕ್ಷೆ ಯಾವತ್ತು?"
"ಏಪ್ರಿಲ್ ನಲ್ಲಿ."
"ಅಭ್ಯಾಸ ಚೆನ್ನಾಗಿ ಮಾಡ್ತಿದೀಯಾ?”
"ಹೂಂ."
“ಬೇಸಿಗೆ ರಜಾದಲ್ಲಿ ಮನೆಗೆ ಬಂದ್ಬಿಡು. ನಿನ್ನ ಹತ್ತಿರ ಸ್ವಲ್ಪ ವಿಷಯ
ಮಾತಾಡೋದಿದೆ."
ಏನು ವಿಷಯ? ಎಂದು ಅಲ್ಲಿಯೇ ಕೇಳುವ ಅಪೇಕ್ಷೆಯಾಯಿತಾದರೂ ಅದನ್ನು
ಅದುಮಿಹಿಡಿದು, “ಆಗಲಿ, ಬರ್ತೀನಿ," ಎಂದಷ್ಟೆ ಜಯದೇವ ಹೇಳಿದ.
ಒಂದು ನಿಮಿಷ ಸುಮ್ಮನಿದ್ದ ಬಳಿಕ ಆತನ ತಂದೆಯೇ ಅಂದರು:
"ಈ ಸಲ ನಿನ್ನ ತಂಗೀ ಮದುವೆ ಮಾಡ್ಬೇಕೂಂತಿದೀನಿ ಕಣೋ."
“ವರ ನೋಡಿದೀರಾ?"
"ಎರಡು ಮೂರು ಕಡೆ ನೋಡಿದ್ದಾಯ್ತು. ಮೂರನೆ ಹುಡುಗ ನಿಮ್ಮಮ್ಮ
ನಿಗೆ ಇಷ್ಟವಾಗಿದಾನೆ. ಅವನನ್ನೇ ಗೊತ್ಮಾಡೋಣಾಂತಿದೀನಿ."
"ಸತ್ಯವತಿ ಒಪ್ಪಿದ್ದಾಳಾ?
"ಓಹೋ. ಅವಳೇನು ಒಪ್ಪದೆ?”
"ಸರಿ ಮತ್ತೆ."
“ಬೇರೆಯೂ ಒಂದೆರಡು ವಿಷಯ ಮಾತಾಡ್ಬೇಕು. ಅಂತೂ ಬಂದ್ಬಿಡು."
“ಹೂಂ..."
....ಕಾನಕಾನಹಳ್ಳಿಯಲ್ಲಿ ಶಾನುಭೋಗರ ಮಗಳ ಮದುವೆ ಅದ್ದೂರಿಯಿಂದಲೆ
ಜರಗಿತು. ಮಗಳು ಒಬ್ಬಳೇ ಎಂದು, ಗೋವಿಂದಪ್ಪನವರು ಯಾವುದಕ್ಕೂ ಕಡಮೆ
ಮಾಡಲಿಲ್ಲ. ಉದ್ಯೋಗ ಸಿಗದೇ ಇದ್ದರೂ ಪದವೀಧರನಾಗಿದ್ದ ವರ. ಅನುಕೂಲ