ಪುಟ:ನವೋದಯ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

343

ವಂತರ ಕುಟುಂಬ. ವಧೂವರರ ಜೋಡಿಯನ್ನು ಎಲ್ಲರೂ ಹೊಗಳುವವರೇ.
ಆ ಸಂದರ್ಭದಲ್ಲಿ ಹೆಣ್ಣ ಹೆತ್ತವರ ಕಣ್ಣಿಗೆ ಹೆಚ್ಚಾಗಿ ಬೀಳುತ್ತಿದ್ದವನು ಜಯ
ದೇವ. ಆಸೆಯಿಂದ ಎಷ್ಟು ಕಣ್ಣುಗಳು ಆತನನ್ನು ಕಂಡುವೊ! ಗೋವಿಂದಪ್ಪನವರ
ಮೊದಲ ಮಗ ಎಂದು ಎಲ್ಲರೂ ಆತನೆಡೆಗೆ ಬೊಟ್ಟು ಮಾಡುವವರೇ.
ಸತ್ಯವತಿಯ ಜೊತೆಯಲ್ಲಿ ಒಬ್ಬಳು ಹುಡುಗಿ ಇರುತ್ತಿದ್ದಳು. ಆಗಾಗ್ಗೆ ಅತ್ತಿತ್ತ
ಓಡಾಟವೂ ಆಕೆಯದೇ. ಚೆಲುವೆ. ನೋಡಿದವರೆಲ್ಲ ಕೇಳುವವರೇ:
"ಯಾರ ಮಗಳು ಆಕೆ?"
ಬೆಂಗಳೂರಿನ ಆ ಬೆಡಗುಗಾತಿ -ಶ್ರೀಪತಿರಾಯರ ಮಗಳು ಸುನಂದಾ.
ವೇಣುವೂ ಅಲ್ಲಿದ್ದ. ಶ್ರೀಪತಿರಾಯರೂ ಬಂದಿದ್ದರು.
ಜಯದೇವನಿಗೆ ಆಶ್ರಯವಿತ್ತಿದ್ದ ಅವರು ಬಂದರೆಂದು ಗೋವಿಂದಪ್ಪನವರಿಗೆ
ಆದ ಸಂತೋಷ ಅಷ್ಟಿಷ್ಟಲ್ಲ. ಆದರೆ ಅವರ ಹೆಂಡತಿಗೆ ಮಾತ್ರ ಸುನಂದೆಯ 'ಕಾರ
ಭಾರ' ಒಪ್ಪಿಗೆಯಾಗಲಿಲ್ಲ.
"ಚೆಲ್ಲು ಹುಡುಗಿ! ನಾಚಿಕೆ ಇಲ್ಲದ್ದು!" ಎಂದು, ಪಕ್ಕದಲ್ಲಿದ್ದವರೊಡನೆ ಅವರು
ಟೀಕಿಸಿ ನುಡಿದರು.
...ಮದುವೆಯ ಸ೦ಭ್ರಮ ಮುಗಿದು, ಮನೆ ಮೊದಲಿನ ರೂಪಕ್ಕೆ ಮರಳಿದ
ಬಳಿಕ, ಗೋವಿಂದಪ್ಪನವರು ಒಂದು ಸಂಜೆ ಮಗನನ್ನು ಕರೆದರು.
"ನನಗೆ ವಯಸ್ಸಾಗ್ತಾ ಬಂತು ಕಣೋ."
ಶಾನುಭೋಗರ ಕೆಲಸಕ್ಕೆ ಸಂಬಂಧಿಸಿದ ಹಳೆಯ ಮಾತೇ ಇರಬೇಕೆಂದು ಜಯ
ದೇವ ಸುಮ್ಮನಿದ್ದ.
ಮೊದಲ ವಾಕ್ಯದ ಬಳಿಕ ಕೆಲ ನಿಮಿಷ ತಡೆದು ಗೋವಿಂದಪ್ಪನವರು ಎಂದರು:
“ನಿನ್ನದೊಂದು ಮದುವೆ ಆಗ್ಬೇಕೂಂತ ನಿಮ್ಮಮ್ಮ ಹೇಳ್ತಾನೇ ಇದಾಳೆ.”
ಜಯದೇವ ನಸುನಕ್ಕ.
"ಈಗೇನು ಅವಸರ ಅಪ್ಪಯ್ಯ?"
"ಅವಸರವೆ? ನೀನಿನ್ನೂ ಚಿಕ್ಕ ಕೂಸು ಅಂದ್ಕೊಡ್ಯಾ? ಇಪ್ಪತ್ನೂರು ಕಳೀತು
ಆಗಲೇ... "
"ವಿದ್ಯಾಭ್ಯಾಸ ಮುಗಿದು ಕೆಲಸ ಭದ್ರವಾದ್ಮೇಲೆ ಆ ಯೋಚ್ನೆ."
“ಮನೇಲೆ ಉದ್ಯೋಗ ಇರುವಾಗ ನೀನು ಊರೂರು ಅಲಕೊಂಡು ಯಾಕೆ
ಹೋಗ್ಬೇಕೂಂತ?"
"ಅಪ್ಪಯ್ಯ, ಪುನಃ ಹಿ೦ದಿನ ಮಾತು ಎತ್ಬೇಡಿ."
"ಹಾಗಾದರೆ, ನಿಮ್ಮಮ್ನಿಗೆ ನೀನೇ ಸಮಾಧಾನ ಹೇಳು. ಒಬ್ಬಳೇ ಎಷ್ಟೂಂತ
ದುಡೀತಾಳೆ? ಸೊಸೆ ಬೇಗ್ನೆ ಮನೆಗೆ ಬರಲೀಂತ ಹೇಳ್ತಿರೋದು ಅವಳೇನೇ..."
ಒಬ್ಬ ಹುಡುಗಿಯನ್ನು ಕೊರಳಿಗೆ ಕರಿಮಣಿ ಸರ ಬಿಗಿದು ತಂದು ಚಿಕ್ಕಮ್ಮನ