ಪುಟ:ನವೋದಯ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

344

ಸೇತುವೆ

ವಶಕ್ಕೊಪ್ಪಿಸುವ ಕಾಲ್ಪನಿಕ ದೃಶ್ಯ ರುದ್ರವಾಗಿತ್ತು. ತಾನೇ ಅಪರಿಚಿತನಂತಿರುವ ಆ
ಮನೆಯಲ್ಲಿ, ಸುನಂದೆ ಸೊಸೆಯಾಗುವುದನ್ನು ಜಯದೇವ ಚಿತ್ರಿಸಿ, ಕಸಿವಿಸಿಗೊಂಡ.
ದೃಢವಾಗಿದ್ದ ಧ್ವನಿಯಲ್ಲಿ ಆತನೆಂದ:
"ಈ ವಿಷಯದಲ್ಲಿ ನನ್ನನ್ನ ಒತ್ತಾಯಪಡಿಸ್ಲೇಬೇಡಿ ಅಪ್ಪಯ್ಯ.ನನಗೆ ಹಿಂಸೆ
ಯಾಗುತ್ತೆ."
ಗೋವಿಂದಪ್ಪನವರು ತಮ್ಮ ಮೇಲೇಯೆ ತಾವು ಸಿಟ್ಟಾಗಿ ಅಸ್ಪಷ್ಟವಾಗಿ
ಏನನ್ನೊ ಗೊಣಗುತ್ತ ಅಂಗಳಕ್ಕಿಳಿದರು.
ಆ ರಾತ್ರೆ ಜಯದೇವ ಊಟಕ್ಕೆ ಕುಳಿತಾಗ ಆತನ ಚಿಕ್ಕಮ್ಮ ಕುಟುಕು ಮಾತ
ನ್ನಾಡಿದರು.
"ಹುಷಾರಾಗಿರ್ಬೇಕಪ್ಪ ಜಯೂ. ಬೆಂಗಳೂರು. ಮೋಸ ಹೋದೀಯಾ
ಎಲ್ಲಾದರೂ!"
ಇದು ಸುನಂದೆಯ ನಿಮಿತ್ತದಿಂದ ಹೊರಟ ವ್ಯಂಗ್ಯೋಕ್ತಿ ಎಂದು ಸುಲಭವಾಗಿ
ಊಹಿಸಿದ ಜಯದೇವ ಕಿಡಿಕಿಡಿಯಾದ. ಆತ ಉಗುಳು ನುಂಗಿ,ಒಂದು ತುತ್ತು
ಅನ್ನವನ್ನೂ ನುಂಗಿ, ತಟ್ಟೆಯಲ್ಲಿದ್ದುದನ್ನು ಹಾಗೆಯೇ ಬಿಟ್ಟಿದ್ದ.
"ಅಬ್ಬಾ, ಅಹಂಕಾರವೇ!" ಎಂದು ಆತನ ಚಿಕ್ಕಮ್ಮ ರೇಗಾಡಿದರು.
...ಆ ವರ್ಷ ಪರೀಕ್ಷೆಯ ಫಲಿತಾಂಶದ ವಿಷಯದಲ್ಲಿ ಸ್ವಲ್ಪ ಕಾತರನಾಗಿದ್ದ
ವನು ವೇಣು ಒಬ್ಬನೇ. ಚೆನ್ನಾಗಿ ಮಾಡಿದ್ದೆನೆಂಬ ಆತ್ಮವಿಶ್ವಾಸವಿದ್ದರೂ ಏನಾಗು
ವುದೋ ಎಂಬ ಕಳವಳ ಬಾಧಿಸುತ್ತಲೆ ಇತ್ತು. ಕೊನೆಯಲ್ಲಿ ಫಲಿತಾಂಶ ಪ್ರಕಟವಾಗಿ
ದ್ವಿತೀಯ ವರ್ಗದಲ್ಲಿ ಆತ ಉತ್ತೀರ್ಣ ಎಂಬುದು ಗೊತ್ತಾದಾಗ ಶ್ರೀಪತಿರಾಯರ
ಮನೆಯಲ್ಲಿ ಸಂತಸದ ಸುಗ್ಗಿಯಾಯಿತು...
ಜಯದೇವನ ಪಾಲಿಗಿನ್ನು ಎರಡನೆಯ ವರ್ಷದ ಓದು. ವಿಧ್ಯಾರ್ಥಿ ಜೀವನದ
ಕೊನೆಯ ವರ್ಷ ಎಂದರೂ ಸರಿಯೆ.
ಪಾಠ ಹೇಳಿ ದೊರೆತುದನ್ನೆಲ್ಲ ಯಾವಾಗಲೂ ಆತ ವೇಣುವಿನ ತಾಯಿಯ ಕೈಗೆ
ಒಪ್ಪಿಸುತ್ತಿದ್ದ. ಊಟ ಕಾಫಿಗಳಂತೂ ಆ ಮನೆಯಲ್ಲೇ. ಹೊರಗಿನ ಖರ್ಚು ಅಗತ್ಯ
ವಾದಾಗ ವೇಣುವಿನ ಜತೆಯಲ್ಲಿ ಅದು ನಡೆಯುತ್ತಿತ್ತು. ಎಂದಾದರೊಮ್ಮೆ ಅವರು
ಬಟ್ಟೆಬರೆ ಕೊಳ್ಳುತ್ತಿದ್ದುದೂ ಒಟ್ಟಾಗಿಯೇ.
ಹೀಗೆ ಮನೆಯವನೇ ಆಗಿದ್ದ ಜಯದೇವ, ಸುನಂದೆಯೊಡನೆ, ಯಾವ ಅತಿ
ರೇಕಕ್ಕೂ ಅವಕಾಶ ಕೊಡದಂತಹ ಬಾಂಧವ್ಯವನ್ನು ಬೆಳೆಸಿದ್ದ. ಸುನಂದೆಯೊಬ್ಬಳ
ಹೊರತಾಗಿ ಉಳಿದವರೆಲ್ಲ ಈಗಲೂ ಆತನನ್ನು "ಜಯಣ್ಣ" ಎಂದೇ ಕರೆಯುತ್ತಿದ್ದರು.
ಹೆಸರು ಹಿಡಿದು ಕರೆಯುವ ಅವಕಾಶವೇ ಸಿಗದಂತೆ ಜಾಣ್ಮೆಯಿಂದ ವರ್ತಿಸುತ್ತಿದ್ದಳು
ಆಕೆ. ತಮ್ಮಿಬ್ಬರ ಹೊರತಾಗಿ ಯಾರೂ ಇಲ್ಲದ ಸಂದರ್ಭಗಳಲ್ಲಿ ಮೆಲ್ಲನೆ, 'ಜಯ,
ಇದರರ್ಥವೇನ್ರಿ?' 'ಜಯ, ಅದರರ್ಥವೇನ್ರಿ?' ಎಂದು ಕೇಳುತ್ತಿದ್ದಳು. ಅಪ್ಪಿತಪ್ಪಿ