ಪುಟ:ನವೋದಯ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

345

ಸಂಬೋಧನೆ ಏಕವಚನಕ್ಕಿಳಿದಾಗಲಂತೂ ಅನಿರ್ವಚನೀಯ ಆನಂದದ ಅನುಭವ
ಜಯದೇವನಿಗೆ ಆಗುತ್ತಿತ್ತು.
ಮನೆಯೊಳಗೆ ಯಾರೂ ನಿರ್ದಿಷ್ಟವಾಗಿ ಆ ವಿಷಯವನ್ನು ಬಹಿರಂಗವಾಗಿ
ಚರ್ಚಿಸಿರಲಿಲ್ಲವಾದರೂ ಹೊರಗೆ,ಜನ, ನಿಸ್ಸಂಕೋಚವಾಗಿ ಆಡಿಕೊಳ್ಳುತ್ತಿದ್ದರು.
ಸುನಂದೆಯ ತಾಯಿ ಸ್ನೇಹಿತರಲ್ಲಿಗೆ ಹೋದಾಗ, ಮಾತು ಬಂದೇ ಬರುತ್ತಿತ್ತು.
"ಚಿನ್ನದಂಥ ಹುಡುಗ ನೀವೇ ಸಾಕ್ತಾ ಇದೀರಿ. ಮನೆಯಳಿಯನೇ ಅನ್ನಿ!
ಮುದ್ದಿಸಿ ಸಾಕಿದ ಮಗಳಿಗೆ ಯೋಗ್ಯನಾದ ಗಂಡ."
....ವೇಣುವಿನ ತಾಯಿ ಆ ಮಾತನ್ನು ಅಲ್ಲಗಳೆಯುತ್ತಲೂ ಇರಲಿಲ್ಲ, ಪುಷ್ಟೀಕರಿ
ಸುತ್ತಲೂ ಇರಲಿಲ್ಲ.
ವೇಣು ನಾಲ್ಕಾರು ತಿಂಗಳು ಅಲ್ಲಿ ಇಲ್ಲಿ ಅಲೆದ ಬಳಿಕ ಇಂಡಿಯನ್ ಟೆಲಿಫೋನ್
ಇಂಡಸ್ಟ್ರೀಸ್ನಲ್ಲಿ ಕೆಲಸ ದೊರಕಿಸಿದ.
ಸುನಂದಾ ಆಗ ಕೇಳಿದಳು:
"ಅಲ್ಲಿ ಕೆಲಸ ಮಾಡೋರಿಗೆಲ್ಲಾ ಒಂದೊಂದು ಟೆಲಿಫೋನ್ ಕೊಡ್ತಾರಂತೆ,
ಹೌದಾ?"
"ಹೂಂ. ಕೊಡ್ತಾರೆ. ನಿನ್ನ ಗಂಡನ ಜತೆ ಹಳ್ಳಿಗೆ ಹೋದಾಗ ಅದನ್ನು
ತಗೊಂಡು ಹೋಗು. ಅಮ್ಮನ ಜತೆ ದಿನಾ ಮಾತಾಡ್ಬಹುದು."
"ಹೋಗಣ್ಣ. ನಿಜವೇ ಅಂತ ಕೇಳಿದ್ರೆ ಲೇವಡಿ ಮಾಡ್ತಾನೆ."
'ಗಂಡನ ಜತೆ ಹಳ್ಳಿಗೆ'__ಇಂತಹ ಪದಗಳು ಬಂದಾಗಲೆಲ್ಲ ಜಯದೇವ ಸುನಂದೆ
ಯರಿಬ್ಬರ ಮುಖಗಳೂ ಕೆಂಪಡರುತ್ತಿದ್ದುವು.
ಪಾಠ ಪ್ರವಚನಗಳು ಭರದಿಂದಲೆ ಸಾಗಿದುವು. ಆ ವರ್ಷದ್ದು ಪಬ್ಲಿಕ್ ಪರೀಕ್ಷೆ
ಯೆಂದು ಮಾಧುವೂ ಆಸಕ್ತಿಯಿಂದ ಓದುತ್ತಿದ್ದ.ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ
ಸುನಂದೆಯಂತೂ ಪುಸ್ತಕಕೀಟವಾದಳು.
ಒಂದು ದಿನ ವೇಣುವೆಂದ:
"ಓದು ಮುಗಿಯೋದು ಅಂದರೆ ಯಾವುದೋ ಬಂಧನದಿಂದ ಬಿಡುಗಡೆ ಆದ
ಹಾಗೆ. ಡಿಗ್ರಿಯೇನೋ ಬಂತು. ಆದರೆ ನಮಗೆ ತಿಳಿದಿರೋದು ಅತ್ಯಲ್ಪ ಎನಿಸುತ್ತೆ.
ನಿಜವಾದ ಅಧ್ಯಯನ ಶುರುವಾಗೋದು ಲೋಕ ಜ್ಞಾನದ ಜತೆಯಲ್ಲೇ."
ಆಡಿದ ಮಾತಿನಂತೆಯೆ ನಡೆಯುವ ಮನುಷ್ಯ ಆತ. ಉಚಿತ ವಾಚನಾಲಯಕ್ಕೆ
ಹೋಗುವುದರ ಬದಲು ಮನೆಗೇ ದಿನಪತ್ರಿಕೆ ಬಂತು. ಒಳ್ಳೆಯ ಪುಸ್ತಕಗಳೂ ವೇಣು
ವಿನ ಜತೆ ಬರತೊಡಗಿದುವು.
ಜಯದೇವನಿಗೆ ಪ್ರಿಯವಾದ ವಿಷಯವೊಂದಿತ್ತು _ವಿದ್ಯಾಭ್ಯಾಸದ ಸುಧಾರಣೆ.
ಆ ವರ್ಷ ಪ್ರೌಢಶಾಲೆಯವರೆಗೂ ವಿಧ್ಯಾರ್ಥಿಗಳ ಪರೀಕ್ಷೆ ಬೇಗನೆ ಮುಗಿಯಿತು.

44