ಪುಟ:ನವೋದಯ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

346

ಸೇತುವೆ

ಮತ್ತೆ, ಜನವರಿಯ ಕೊನೆಯಲ್ಲಿ, ಸರ್ವೋದಯ ದಿನದಂದು ಶಾಲೆ ಆರಂಭ.
"ಇದರಿಂದ ಏನಯ್ಯ ಪ್ರಯೋಜನ?" ಎಂದು ಕೇಳಿದ ವೇಣು.
"ಇದೊಂದು ಪ್ರಯೋಗ. ಮಾಡಿ ನೋಡು ಅನ್ನೊಲ್ವೆ? ಹಾಗೆ."
"ಶಾಲೆ ಶುರುವಾಗೋ ದಿನ ಬದಲಾಯಿಸ್ಬಿಟ್ಟರೆ ಸುಧಾರಣೆಯಾಯ್ತೆ?"
ಆಳುವವರ ಬುದ್ಧಿವಂತಿಕೆಗೇ ಸವಾಲು ಹಾಕುವ ನಿಷ್ಠುರ ಮಾತುಗಳು. ಜಯ
ದೇವ ಹೊಸ ಯೋಜನೆ ಸರಿಯೆ ತಪ್ಪೆ ಎಂದು ತಟಕ್ಕನೆ ಉತ್ತರ ಕೊಡಲು ನಿರಾ
ಕರಿಸಿದ. ಮಾಧ್ಯಮಿಕ ಶಾಲೆಯ ಎಳೆಯ ಹುಡುಗರಿಗೆ ಸಾರ್ವಜನಿಕ ಪರೀಕ್ಷೆ ಇನ್ನಿಲ್ಲ
ಎಂಬುದನ್ನು ಆತ ಸ್ವಾಗತಿಸಿದ್ದ. ರಜಾದಿನಗಳ ಬದಲಾವಣೆಯಿಂದ ಪ್ರಯೋಜನ
ತೋರದೆ ಇದ್ದರೂ ಏನೋ ಬದಲಾಗುತ್ತಿದೆ ಎಂಬ ಭಾವನೆಯನ್ನು ಬೆಳೆಸಲು ಅದು
ಸಹಾಯಕವಾದರೂ ಆಗಬಹುದೆಂದು ಆತ ನಿರೀಕ್ಷಿಸಿದ.
... ಪರೀಕ್ಷೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಗೋವಿಂದಪ್ಪನವರು ಹಾಸಿಗೆ
ಹಿಡಿದಿರುವರೆಂಬ ವಾರ್ತೆ ಬಂತು. ಮಾಧುವಿಗೆ 'ಬಾ' ಎಂದು ಬರೆದಿದ್ದರು ಆತನ
ತಾಯಿ. ಮಾಧು ಅಣ್ಣನನ್ನೂ ಕರೆದ. ಇಬ್ಬರೂ ಕನಕಪುರಕ್ಕೆ ಧಾವಿಸಿದರು.ಆದರೆ
ಭಯಕ್ಕೆ ಕಾರಣವೇನೂ ಇರಲಿಲ್ಲ. ಉರಿಬಿಸಿಲನ್ನು ಲೆಕ್ಕಿಸದೆ ಸ್ವಲ್ಪ ಹೆಚ್ಚಾಗಿ ಹೊಲ
ತೋಟಗಳಲ್ಲಿ ಓಡಾಡಿದರೆಂದು ನೆಗಡಿ-ಜ್ವರ ಅವರನ್ನು ಬಾಧಿಸಿದ್ದುವು. ಮೂರನೆಯ
ದಿನವೆ ಅವರು ಎದ್ದು ಕುಳಿತರು. ಸದ್ಯಃ ಪರೀಕ್ಷೆಗೆ ಕುಳಿತುಕೊಳ್ಳುವುದು ಸಾಧ್ಯ
ವಾಯಿತಲ್ಲ ಎಂದು ಜಯದೇವನಿಗೆ ಸಮಾಧಾನ ಎನಿಸಿತು.
..... ಶ್ರೀಪತಿರಾಯರು ಈಗೀಗ ಹೊಲಗಳ ಕಡೆ ಹೋಗಿ ಬರತೊಡಗಿದರು.
ಮನಸ್ಸಿನಲ್ಲೆ-ಅಥವಾ ಏಕಾಂತದಲ್ಲಿ ಗೃಹಿಣಿಯ ಜತೆಗೂಡಿ-ಮಾಡಿದ್ದ ನಿರ್ಧಾ
ರಕ್ಕೆ ಮಕ್ಕಳ ಸಮ್ಮತಿ ಪಡೆಯುವವರಂತೆ, ಒಮ್ಮೆ ಅವರೆಂದರು:
"ನನ್ನ ಕಾಲದಲ್ಲೇ ಹೊಲದ ಗತಿ ಹೀಗಾಯ್ತು. ಮುಂದೆ ಅದನ್ನು ನೋಡ್ಕೊ
ಳ್ಳೋರು ಯಾರು? ಈ ಹೊಸ ಶಾಸನ ಬಂದ ಮೇಲಂತೂ ನಾವು ಮಾಡೋದು
ಏನೂ ಇಲ್ಲ. ಯಾರಿಗಾದರೂ ಮಾರಿ ಬಿಡೋದೇ ಮೇಲು."
"ಅಷ್ಟೆ. ಬಂದ ಹಣದಿಂದ ಇಲ್ಲೊಂದು ಮನೆ ಕೊಂಡರಾಯ್ತು. ಭೂಮಾಲಿಕರ
ಬದಲು ಮನೆ ಮಾಲಿಕರು ಎನ್ನಿಸ್ಬಿಡೋದು!" ಎಂದ ವೇಣು.
"ಮನೆ ಕೊಳ್ಳೋ ವಿಷಯ ಆ ಮೇಲೆ. ಮೊದಲು ಮಾರೋಣ.
ಏನಂತೀಯಾ?"
"ಹ್ಯಾಗೆ ಸರಿಯೋ ಹಾಗೆ ಮಾಡಣ್ಣ.”
ಬಹಳ ದಿನಗಳ ಮೇಲೆ ಸುನಂದೆಯ ತಾಯಿ ಜಯದೇವನಿಗೆ ಹೇಳಿದರು:
"ನಮ್ಮ ಹೊಲ ಮಾರಿ ನಾಲ್ಕು ಸಾವಿರದ ಇನ್ನೂರು ರೂಪಾಯಿ ಬಂತು
ಕಣೋ."
ಮಾತು ಕೇಳಿಸಿತೆಂಬಂತೆ ತಲೆಯಾಡಿಸಿ ಜಯದೇವ ಸುಮ್ಮನಿದ್ದ.