ಪುಟ:ನವೋದಯ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

350

ಸೇತುವೆ

...ಶಾಸ್ತ್ರ ಹಲವು ವಿಷಯ ಹೇಳುತ್ತಿತ್ತು. ಆದರೆ ಪರಿಸ್ಥಿತಿ ಅನುಕೂಲವಿರ
ಬೇಡವೇ? ಆ ಕಾರಣದಿಂದ ಕಾನಕಾನಹಳ್ಳಿಯ ಮನೆ ಸುನಂದೆಯ ಪಾಲಿಗೆ ಪತಿಗೃಹ
ವಾಗಲಿಲ್ಲ. ಅಲ್ಲಿಗೆ ಹೋಗಲೇ ಇಲ್ಲ ಅವರು. ಬದಲು, ಉಪಾಧ್ಯಾಯ ಜಯದೇವ
ನನ್ನು ಇದಿರು ನೋಡುತ್ತಿದ್ದ ಊರಿಗೇ ಅವರು ಹೊರಟರು.
ನಂಜುಂಡಯ್ಯ, ತಿಮ್ಮಯ್ಯ, ಇಂದಿರಾ-ಅಷ್ಟೊಂದು ಜನ ವಿದ್ಯಾರ್ಥಿಗಳು...
ಅವರಿಗೆಲ್ಲ ಆಹ್ವಾನ ಪತ್ರಿಕೆಯನ್ನು ಜಯದೇವ ಕಳುಹಿದ್ದ.
ఆ ಊರಿನ ಪರವಾಗಿಯೆ ಎಂಬಂತೆ, ನಂಜುಂಡಯ್ಯನಿಂದ ಶುಭಾಶಯ
ಬಂದಿತ್ತು.
ಆತ ದುಡಿದಿದ್ದುದು ಒಂದೇ ವರ್ಷವೆಂದು ಅನಂತರದ ಅಧ್ಯಯನದ ಎರಡು
ವರ್ಷ ಸರಕಾರದ ದೃಷ್ಟಿಯಲ್ಲಿ ರಜೆಯಾಗಲಿಲ್ಲ. ಆದರೆ ವಿದ್ಯಾಧಿಕಾರಿ ಆ ಊರಿಗೇ
ಆ ಶಾಲೆಗೇ ಜಯದೇವನನ್ನು ಕಳುಹಲೊಪ್ಪಿದರು.
ಪತ್ನಿಯೊಡಗೂಡಿ ಬೆಂಗಳೂರು ಬಿಡುವ ಹೊತ್ತಿಗೆ ಜಯದೇವನ ತಂದೆ ಮಗ
ನನ್ನು ಬೀಳ್ಕೊಡಲೆಂದು ಬಂದರು.
ದೂರದ ಪಯಣ ಬೆಳೆಸಿದ ఆ ಇಬ್ಬರಿಗೂ ಆಶೀರ್ವಾದದ ಹೊರೆ
ಬೆಂಗಾವಲಿಗಿತ್ತು.



"ಎಷ್ಟು ದೂರ ಇದೆ ಇನ್ನೂ?" ಎಂದು ಸುನಂದಾ ಕೇಳಿದಳು. ಆಕೆಯ ಕಾಲು
ಗಳು ಆಗಲೇ ಸೋತಿದ್ದುವು.
"ಬಂದ್ಬಿಡ್ತು. ಈ ಬೀದೀಲಿ ಹೋಗಿ, ಆ ಓಣಿಗೆ ತಿರುಗಿ, ಸ್ವಲ್ಪ ಮುಂದಕ್ಕೆ
ಹೋದ್ರೆ__"
ಪರಿಹಾಸ್ಯದ ಧ್ವನಿಯಿಂದಲೆ ಜಯದೇವ ಹಾಗೆ ನುಡಿದ.
"ಸಾಕ್ರೀ. ಸುಮ್ನೆ ನಡೆಸ್ತಿದೀರ. ಜಟಕಾದಲ್ಲಾದರೂ ಬರಬಹುದಾಗಿತ್ತು."
“ಯಾಕೆ? ಬೆಂಗಳೂರಿನ ಟಾರು ರಸ್ತೆಗಿಂತ ಇದು ವಾಸಿಯಲ್ವೇನೊ? ಧೂಳು
ಎಷ್ಟೊಂದು ಮೃದುವಾಗಿದೆ ನೋಡು"
"ಹೋಗ್ರೀ,ಪ್ರಾಣ ಹೋಗ್ತಿದ್ರೂ, ತಮಾಷೆಯೇ ನಿಮಗೆ."
ಎರಡೂ ಬದಿಗಳಲ್ಲಿ ಅಲ್ಲಲ್ಲಿ ಬಾಗಿಲ ಬಳಿಗೆ ಬಂದು ಹೆಂಗಸರು, ಹೊಸಬರ
ಆಗಮನವನ್ನು ದಿಟ್ಟಿಸುತ್ತಿದ್ದರು. ಮೊದಲು ಅವರ ಕಣ್ಣಿಗೆ ಬೀಳುತ್ತಿದ್ದುದು ಸೀರೆ;
ಬಳಿಕ ಸೀರೆಯುಟ್ಟಿದ್ದವಳ ಮುಖ; ಅನಂತರ ಆ ಸೀರೆಯನ್ನು ಕೊಂಡುಕೊಟ್ಟ ಗಂಡ_