ಪುಟ:ನವೋದಯ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

356

ಸೇತುವೆ

"ಆವತ್ತು ನಾನು ನಿಮ್ಮ ಪಕ್ಷ ವಹಿಸ್ಲಿಲ್ಲಾಂತ ನಿಮಗೆ ಬೇಜಾರಾಗಿರ್ಬೇಕು,
ಅಲ್ವೆ ಜಯದೇವ್?"
"ಹಾಗೇನಿಲ್ಲ ಸಾರ್. ನೀವಾದರೂ ಏನು ಮಾಡೋಕೆ ಆಗ್ತಿತ್ತು? ಇದ್ದಿದ್ರಲ್ಲೂ
ಕಟ್ಟಕಡೇಲಿ ನಾಲ್ಕು ಒಳ್ಳೇ ಮಾತಾಡ್ದೋರು ನೀವೇ."
ಜಯದೇವನ ಈ ಉತ್ತರ ಕೇಳಿ ಎಷ್ಟೋ ಹಾಯೆನಿಸಿತು ನಂಜುಂಡಯ್ಯ
ನವರಿಗೆ.
“ಎಂಥ ಘಾಟೀ ಮುದುಕ ಅಂತೀರಾ ಆ ಆಸಾಮಿ? ಗುರುದಕ್ಷಿಣೆ ಸುಲಿದದ್ದೇ
ಸುಲಿದದ್ದು. ಲೋಯರ್ ಸೆಕೆಂಡರಿ ಪರೀಕ್ಷೆ ಹೋದ್ಮೇಲಂತೂ ಅವರ್‍ನ ಹಿಡಿಯೋರೇ
ಇಲ್ಲ. ಮಾತೆತ್ತಿದರೆ ಫೀಸು. ಹುಡುಗರ ಕೈಲಿ ಬಿಟ್ಟಿ ಬೇಗಾರಿ ಮಾಡಿಸೋದಕ್ಕಂತೂ ಲೆಕ್ಕವೇ ಇರಲಿಲ್ಲ. ಊರಿನಲ್ಲಿ ಒಳಜಗಳ ಹುಟ್ಟಿಸೋದಕ್ಕೆ ಮಿತಿ ಇರ್‍ಲಿಲ್ಲ.
ಸಾಕಾಯ್ತಪ್ಪ!"
“ಆಮೇಲೆ?"
"ಆಮೇಲೇನು? ಹಾರಾಟಕ್ಕೂ ಒಂದು ಕೊನೆ ಬೇಡ್ವೆ? ಸೂಕ್ಷ್ಮವಾಗಿ ಹೇಳಿ
ದ್ದಾಯ್ತು. ನಾಟಲಿಲ್ಲ. ಒಂದು ದಿನ ಸ್ಪಷ್ಟವಾಗಿಯೂ ಹೇಳ್ದೆ. ಊಹೂಂ.
ಕಡೆಗೆ ಇದ್ದೇ ಇದೆಯಲ್ಲ-ಶಂಕರಪ್ಪ ಮದ್ದು ಅರೆದ್ರು."
ಮೂರು ವರ್ಷಗಳಿಗೆ ಹಿಂದೆಯೂ ಶಂಕರಪ್ಪ ಮದ್ದು ಅರೆದಿದ್ದರು, ಸಾತ್ವಿಕ
ರಂಗರಾಯರಿಗೋಸ್ಕರ. ಈಗ ನಿಜವಾದ ರೋಗಿಗೋಸ್ಕರವೂ ಅವರು ಮದ್ದು
ಅರೆದರು...
"ಹೀಗೆಲ್ಲಾ ఆಯ್ತೆ?"
"ಹೂ೦. ಅಂತೂ ಕಳೆದ ಆಗಸ್ಟ್ನಲ್ಲಿ ಅವರಿಗೆ ವರ್ಗವಾಯ್ತು."
"ಎಲ್ಲಿಗೆ?"
"ಆಹ್ಹಾ! ಅದನ್ನು ಕೇಳಿ. ತಪ್ಪು ಮಾಡಿದವರ್‍ನ ಕೊಪ್ಪಕ್ಕೆ ಹಾಕ್ತಾರೆ ಅನ್ನೋ
ಒಂದು ಗಾದೆ ಗೊತ್ತು ತಾನೆ?"
"ಹೂಂ.ಬಹಳ ದೂರಕ್ಕೆ ವರ್ಗವಾಯ್ತೆನೊ?"
"ದೂರಕ್ಕೇನು, ಕೊಪ್ಪದ ಊರಿಗೇ! ಆ ಮನುಷ್ಯನ ವಿಷಯದಲ್ಲಿ ಗಾದೆ
ಅಕ್ಷರಶಃ ನಿಜವಾಗಿ ಹೋಯ್ತು."
"ಆ ಕೊಪ್ಪದಿಂದಲೂ ಮೈಸೂರಿನ ಡಾಕ್ಟರಿಗೂ ಬೆಂಗಳೂರಿನ ಲಾಯರಿಗೂ
ಅವರು ಗಿರಾಕಿ ಕಳಿಸೋದಿಲ್ಲಾ೦ತ ಏನು ಭರವಸೆ?"
"ಅದೆಲ್ಲಾ ನಿಮಗೆ ನೆನಪಿದೆ ಹಾಗಾದರೆ!"
"ಹ್ಯಾಗೆ ಮರೆಯೋಕಾಗುತ್ತೆ ಹೇಳಿ?"
ಒಳ ಬಾಗಿಲ ಕಡೆ ನೋಡಿ ಸ್ವಲ್ಪ ಸ್ವರ ತಗ್ಗಿಸಿ ನಂಜುಂಡಯ್ಯ ಎಂದರು:
"ಮೊನ್ನೆ ಆ ಇಂದಿರಾನ ತಾಯಿ ಸಿಕ್ಕಿದ್ಲು. ಇನ್ನೂ ಆ ಹುಡುಗಿಗೆ ಮದುವೆ