ಪುಟ:ನವೋದಯ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

358

ಸೇತುವೆ

ಆ ಊಟದ ಮನೆಗೆ ಸಂಬಂಧಿಸಿದ ಹರಟೆಯ ನೆನಪುಗಳು ಮರುಕಳಿಸಿದಂತೆ
ಜಯದೇವನೆಂದ:
"ಹಿಂದಿನ ಸಾರೆ ಊಟಕ್ಕೆ ಕೂತಾಗ, ಇವರು ಹೊಸ್ಮೇಸ್ಟ್ರು ಅಂತ ನಿಮ್ಮವ್ವನಿಗೆ
ಪರಿಚಯಮಾಡ್ಕೊಟ್ಟಿದ್ರಿ.
"ಹೌದು...ನಿಮಗೆ ಗೊತ್ತಾಗಿರ್ಬೇಕು, ಅಲ್ವೆ?"
"ಇಲ್ಲಿಗೆ ಬಂದ್ಮೇಲೆ ತಿಳೀತು."
"ಸಾಯೋ ಕಾಲಕ್ಕೆ ಅವ್ವ ದೊಡ್ಡಣ್ಣನ ಮನೇಲಿದ್ಲು."
ಆ ಮನೆಯ ಇನ್ನೊಂದು ಭಾಗದಲ್ಲೆ ವ್ಯಾಪಾರಿ ದೊಡ್ಡಣ್ಣ ವಾಸವಾಗಿದ್ದುದು.
"ಏನಾಗಿತ್ತೊ?"
"ನೆಪಕ್ಕೊಂದು ಕಾಹಿಲೆ. ಮುಖ್ಯ ವೃದ್ಧಾಪ್ಯ. ಕೊನೇ ಘಳಿಗೇಲಿ ಎಲ್ಲಾ
ಗಂಡುಮಕ್ಕಳೂ ಪಕ್ಕದಲ್ಲೇ ಇದ್ವಿ.
"ವಯಸ್ಸಾಗಿತ್ತು ಅಲ್ವೆ?"
"ಎಪ್ಪತ್ತೆರಡಾಗಿತ್ತು."
"ಸರಿ."
ಊಟದ ಹೊತ್ತಿನಲ್ಲಿ ತಾನು ಆ ಮಾತೆತ್ತಿದುದು ತಪ್ಪಾಯಿತೆನಿಸಿತು ಜಯದೇವ
ನಿಗೆ, ಆದರೆ ಅಷ್ಟರಲ್ಲೆ ನ೦ಜು೦ಡಯ್ಯ, ಅಡುಗೆ ಮನೆಯ ಬಾಗಿಲಿಗೆ ಆತುಕೊಂಡು
ಮೌನವಾಗಿ ನಿಂತಿದ್ದ ತಮ್ಮ ಹೆಂಡತಿಯನ್ನುದ್ದೇಶಿಸಿ ಲವಲವಿಕೆಯಿಂದ ಅಂದರು:
"ಯಾಕ್ನಿಂತಿದೀಯಾ? ನೀಡು-ಇನ್ನೂ ಅಷ್ಟು ನೀಡು. ಬೆಂಗಳೂರೋರ್‍ಗೆ
ಸಂಕೋಚ ಜಾಸ್ತಿ . ಅದೂ ಮದುವೆಯಾದ ಹೊಸತಿನಲ್ಲಿ-
ಮಾತನ್ನು ಅಲ್ಲಿಗೇ ತಡೆದು ನಿಲ್ಲಿಸಿ ಪುನಃ ಅವರೇ ಅಂದರು:
"ನಿಮ್ಮ ಮನೆಯವರಂತೂ ಮಾತೇ ಆಡೋದಿಲ್ಲ."
ಜಯದೇವ ಸುನಂದೆಯ ಕಡೆಗೆ ತಿರುಗಿದ. ಆ ಸೂಚನೆಯ ಅಗತ್ಯವೇ ಇಲ್ಲ
ವೆಂಬಂತೆ ಸುನಂದಾ ತಾನಾಗಿಯೇ ಮಾತನಾಡಿದಳು:
“ಹಾಗೇನೂ ಇಲ್ಲ. ಸಂಕೋಚ ಎಲ್ಲೀದು?"
“ಅಂದ್ಮೇಲೆ ಕೇಳಿ ಹಾಕಿಸ್ಕೊಳ್ಳಿ," ಎ೦ದರು ನಂಜುಂಡಯ್ಯ.
“ಹೂಂ."
ಊಟದ ಅಂತಿಮ ಘಟ್ಟದಲ್ಲಿ ಮನೆಯ ವಿಷಯಕ್ಕೆ ಮಾತು ಹೊರಳಿತು.
"ಅವ್ವ ತೀರ್ಕೊಂಡ ಎರಡು ತಿಂಗಳಲ್ಲೇ ದೊಡ್ಡಣ್ಣ ಮನೆ ಖಾಲಿ ಮಾಡಿದ.
ಈಗ ಅಂಗಡಿ ಮನೆ ಎರಡೂ ಜತೇಲೆ ಇವೆ. ನೀವು ಬರ್‍ತೀರಿ ಅನ್ನೋದು ಎರಡು
ತಿಂಗಳು ಮುಂಚೆಯೇ ಗೊತ್ತಾಗಿದ್ದಿದ್ರೆ ಹಾಗೇ ಇಡಿಸ್ತಾ ಇದ್ದೆ. ಈಗ ಯಾರೋ
ಒಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದಾನೆ."
ಒಳ್ಳೆಯದೇ ಆಯಿತು ಎಂದುಕೊಂಡ ಜಯದೇವ. ನಂಜುಂಡಯ್ಯನ ಜತೆ