ಪುಟ:ನವೋದಯ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

365

ಯಾಗ್ತದೆ."
ಆದರೆ ಬೆಂಗಳೂರಿನ ಹುಡುಗಿಯ ಪ್ರಪಂಚ ಆ ಅಡುಗೆಮನೆಗಿಂತ ಸ್ವಲ್ಪ ಹೆಚ್ಚು
ವಿಸ್ತಾರವಾಗಿತ್ತು.
"ಏನ್ಮಾಡ್ತಾರೆ?"
ಪಾರ್ವತಮ್ಮನಿಗೆ ಅದು ಗೊತ್ತಿರಲಿಲ್ಲ. ಗಲಾಟೆಯನ್ನು ಕಲ್ಪಿಸಿಕೊಳ್ಳಲು
ಯತ್ನಿಸುತ್ತ ಆಕೆಯೆಂದಳು:
"ತಮ್ಮ ತಮ್ಮೊಳಗೆ ಮಾತಾಡ್ಕೊಳ್ತಾರೆ."
"ಅಷ್ಟೆ ತಾನೆ? ಅವರ ನಾಲಗೆಗೆ ಒಳ್ಳೇ ವ್ಯಾಯಮವಾಗುತ್ತೆ."
ಪಾರ್ವತಮ್ಮನ ಪಾಲಿಗೆ ಅದು ದಿಟ್ಟತನದ ಮಾತು. ಅದನ್ನು ಕೇಳಿ ಆಕೆಗೆ
ಮೆಚ್ಚುಗೆಯಾಯಿತು.
...ಗಂಡಸರು ಹೊರಡಲು ಸಿದ್ಧರಾದರು.
"ಬಹಳ ಸೆಖೆ. ಈ ಸಲ ಮಳೆಯೂ ತಡ," ಎಂದರು ನಂಜುಂಡಯ್ಯ, ತಮ್ಮ
ಉಣ್ಣೆಯ ಕೋಟನ್ನು ಧರಿಸಿಕೊಳ್ಳುತ್ತ.
"ಬೆಂಗಳೂರಲ್ಲೂ ಈ ವರ್ಷ ಸೆಖೆ ಜಾಸ್ತಿ," ಎಂದ ಜಯದೇವ.
"ಮನೆ ನೋಡೋದಕ್ಕೆ ನಿಮ್ಮ ಮಿಸೆಸ್ಸೂ ಬರ್ತಾರೇನು?"
"ಹೌದು. ಅವರು ಒಪ್ಪಬೇಕಲ್ಲ!"
"ಸ್ವಂತ ಮನೇಲಿ ಬೆಳೆದ ನನಗೆ ಬಾಡಿಗೆ ಮನೆ ತಾಪತ್ರಯ ಹ್ಯಾಗೆ ಗೊತ್ತಾ
ಗ್ಬೇಕು ಹೇಳಿ."
ತನ್ನ ಅಂತಸ್ತನ್ನು ತೋರಿಸಿಕೊಳ್ಳುವ, ತಿಳಿಯದೇ ಆಡಿದ, ಮಾತು.
"ನಿಜ, " ಎಂದ ಜಯದೇವ. ತಾನು ಹುಟ್ಟಿದ್ದು ಸ್ವಂತ ಮನೆಯಲ್ಲೆ, ಸುನಂದಾ
ಹುಟ್ಟಿ ಬೆಳೆದುದು ಸ್ವಂತ ಮನೆಯಲ್ಲಿ, ಎಂಬುದನ್ನು ಹೇಳ ಹೋಗಲಿಲ್ಲ ಆತ.
ಅವನ ಸೂಚನೆಯಂತೆ ಸುನಂದೆಯೂ ಸಿದ್ದವಾಗಿ ಬಂದಳು.
ಹೆಂಡತಿಯೊಡನೆ ವಾಯುಸೇವನೆಗೆ ಹೋಗುವ ಅಭ್ಯಾಸವನ್ನು ಇಟ್ಟುಕೊಂಡ
ವರೇ ಅಲ್ಲ ನಂಜುಂಡಯ್ಯ. ಆದರೆ ಬೇರೆ ದಂಪತಿಯ ಜತೆ ಆಧುನಿಕನಾಗಿ ತಾನೂ
ಹೋಗುವುದು ಅವರಿಗೆ ಇಷ್ಟವಾಗಿತ್ತು.
ಬೀದಿಗಿಳಿದ ಬಳಿಕ ಆಕಾಶ ನೋಡಿ ಜಯದೇವನೆಂದ:
" ಮೋಡವೇನೋ ಕವಿದಿದೆ."
"ಹತ್ತು ದಿವಸದಿಂದ ಸಾಯಂಕಾಲ ಹೊತ್ತು ಹೀಗೆಯೇ ಇರುತ್ತೆ. ಹನಿ
ಮಾತ್ರ ಊಹು೦," ಎಂದರು ನಂಜುಂಡಯ್ಯ.
ತಮಗೆ ಮೂರನೆಯವಳಾಗಿ ಬೀದಿಯ ಅಂಚಿನಲ್ಲಿ ನಡೆದು ಬರುತ್ತಿದ್ದ ಸುನಂದೆ
ಯನ್ನುದ್ದೇಶಿಸಿ ಅವರೆಂದರು:
"ನಮ್ಮೂರು ಇಷ್ಟವಾಯ್ತೇನ್ರಮ್ಮಾ?"

.