ಪುಟ:ನವೋದಯ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

೩೬೯

“ಜವಾನ ಇದಾನೆ. ಬಾವಿ ತೋಡಿಸಿದೆ. ನೀರು ಹಾಕ್ತಾನೆ."
ಅಂಗಳದ ಹೊರಗೇ ನಿಂತಿದ್ದ ಜವಾನ ನಮಸ್ಕರಿಸಿದ.
"ವೆಂಕಟರಾಯರಿದ್ದಾಗ ಯಾವನನ್ನೋ ತಾತ್ಕಾಲಿಕವಾಗಿ ನೇಮಿಸ್ಲಿಲ್ವೆ? ಆತ
ಆ ಹಳೇ ಗಡಿಯಾರ ಕದ್ಕೊಂಡು ಓಡ್ಹೋದ."
“ఆ ಗಡಿಯಾರ ಸಮಯ ಸರಿಯಾಗಿ ತೋರಿಸುತ್ಲೂ ಇರ್ಲಿಲ್ಲ."
"ಹಹ್ಹಾ! ನೆನಪಿದೆ ನಿಮಗೆ! ಆತ ಒಳ್ಳೇ ಕೆಲಸ ಮಾಡ್ದಾಂತ ನಮಗೆಲ್ಲಾ
ಸಮಾಧಾನವಾಯ್ತು. ಆಮೇಲೆ ಒಂದ್ಸಲ ಮೈಸೂರಿಗೆ ಹೋಗಿದ್ದೋನು ಹೊಸದು
ಒಂದು ಕೊಂಡ್ಕೊಂಡು ಬಂದೆ.”
ಸುನಂದಾ ಆ ಕತೆ ಕೇಳಿ ನಕ್ಕಳು. ತಮ್ಮ ಮಾತಿನ ವೈಖರಿಯಿಂದ ಆಕೆ ಹರ್ಷಿತ
ಳಾದಳೆಂದು ನಂಜುಂಡಯ್ಯ ಸಮಾಧಾನಪಟ್ಟರು.
ಕೈ ಜೋಡಿಸಿಯೇ ನಿಂತಿದ್ದ ಮಧ್ಯವಯಸ್ಸು ದಾಟಿದ್ದ ಆ ಮನುಷ್ಯನನ್ನು
ತೋರಿಸಿ ಅವರೆಂದರು:
"ಈತ ಖಾಯಂ ಜವಾನ. ಎಂಟು ರೂಪಾಯಿ ಸಂಬಳ. ಒಳ್ಳೇ ನಂಬಿಗಸ್ಥ."
ಹೊಗಳಿಕೆಯ ಮಾತು ಕೇಳಿ ಆ ಮನುಷ್ಯನಿಗೆ ಲಜ್ಜೆಯಾಯಿತು.
"ಆಗ ನಿಮ್ಮ ಸಾಮಾನು ತಂದುಹಾಕ್ದೋನು ಇವನೇ. ಬೆಳಿಗ್ಗೇನೆ ಬಸ್
ಸ್ಟ್ಯಾಂಡಿಗೆ ಕಳಿಸೋಕಾಗ್ಲಿಲ್ಲ. ಶಾಲೆ ನಡೀತಿರುವಾಗ ಮಾತ್ರ ಯಾವಾಗಲೂ ಇಲ್ಲೇ
ಇರಿಸ್ಕೋತೀನಿ."
ಜಯದೇವ ಜವಾನನನ್ನು ದಿಟ್ಟಿಸಿದ. ನಂಜುಂಡಯ್ಯ ಆ ಮನುಷ್ಯನೆಡೆಗೆ
ನೋಡಿ ಅಂದರು:
"ಇವರೇ ಕಣೋ ಜಯದೇವ ಮೇಸ್ಟ್ರು. ಹೊತ್ತಾರೆ ಎದ್ದು ಮನೆಗ್ಬಾ.
ಗುರುಸಿದ್ದಪ್ಪನವರ ಖಾಲಿ ಬಿಡಾರಕ್ಕೆ ಇವರ ಸಾಮಾನು ಸಾಗಿಸ್ಬೇಕು. ಸ್ಕೂಲು
ಸುರುವಾಗೋದರೊಳಗೆ ಮುಗಿಸ್ಬಿಡ್ಬೇಕು ಕೆಲಸಾನ. ಕೇಳಿಸ್ತೋ ?”
“ಆಗಲಿ ಬುದ್ಧಿ.”
"ಬುದ್ಧೀಂತ ಅನ್ಬೇಡ, ಸಾರ್ ಅನ್ನೂಂತ, ಎಷ್ಟು ಸಲಾನೋ ನಿಂಗೆ
ಹೇಳೋದು? ಥೂ ಕತ್ತೆ!"
ಹೊಗಳಿಕೆಯ ಮಾತು ಕೇಳಿದಾಗ ಆದಂತೆಯೆ ಈಗಲೂ ಆತನಿಗೆ ಲಜ್ಜೆ
ಯಾಯಿತು.
ನಂಜುಂಡಯ್ಯ ಶಾಲೆಯ ಸುತ್ತಲೂ ಇದ್ದ ಆಟದ ಬಯಲನ್ನು ತೋರಿಸಿದರು.
"ನೀವಿದ್ದಾಗ ಇದೆಲ್ಲ ಪಾಳು ಬಿದ್ದಿತ್ತು, ಅಲ್ವೆ?"
"ಹೌದು."
"ನೋಡಿ, ಆ ನೆಲವನ್ನೆ ಆಟದ ಬಯಲಾಗಿ ಮಾರ್ಪಡಿಸಿದೀನಿ-ಹೆಚ್ಚಿನ ಖರ್ಚೇ

47