ಪುಟ:ನವೋದಯ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

370

ಸೇತುವೆ

ಇಲ್ದೆ! ಅವತ್ತೊಮ್ಮೆ, ನೀವು ಹುಡುಗರ ಕೈಲಿ ಕೆಲಸ ಮಾಡಿಸ್ಬೇಕು ಅಂದಾಗ ವೆಂಕಟ
ರಾಯರು ಆಕ್ಷೇಪಿಸಿದ್ರು, ಅಲ್ವೆ? ಆಮೇಲೆ ಸರಕಾರದ ನಿರ್ದೆಶವೇ ಬಂತು. ಶ್ರಮ
ದಾನ! ಹುಡುಗರಿಗೆಲ್ಲ ಒಂದಿಷ್ಟು ತಿಂಡಿಕೊಟ್ಟಿದೀವೀಂತ ಇಟ್ಕೊಳ್ಳೋಣ...ಹ್ಯಾಗಿದೆ
ಬಯಲು?"
ಆಟಗಳನ್ನಾಡುತ್ತಿದ್ದ ಹತ್ತು ಹದಿನೆಂಟು ಹುಡುಗರನ್ನು ಆ ಬಯಲಲ್ಲಿ ಜಯ
ದೇವ ಕಲ್ಪಿಸಿಕೊಂಡು ಸಂತುಷ್ಟನಾದ.
“ಚೆನ್ನಾಗಿದೆ ಸಾರ್."
"ಸಾಮಾನುಗಳೂ ಇವೆ. ಆದರೆ ಆಟ ಆಡಿಸೋರು ಯಾರೂ ಇಲ್ಲ. ಹೀಗಾಗಿ
ಹುಡುಗರು ಬಯಲ್ನ ಉಪಯೋಗಿಸೋದೇ ಕಡಮೆ. ಏನು ಮಾಡೋಣ ಹೇಳಿ?"
'ನನಗೂ ಈ ಆಟಗಳಿಗೂ ಎಣ್ಣೆಸೀಗೆ. ಮೊದಲಿನಿಂದಲೂ ಅಷ್ಟೇ. ನಾನೊಂದು
ಪುಸ್ತಕಕೀಟ,' ಎಂದಿದ್ದರು ನಂಜುಂಡಯ್ಯ ಹಿಂದೆಯೇ.
"ಲಕ್ಕಪ್ಪ ಗೌಡರಿಗೆ ಆಟದಲ್ಲಿ ಆಸಕ್ತಿ ಇಲ್ವೆ?"
“ಆತನೆ!" ಎಂದು ನಕ್ಕು ಸುಮ್ಮನಾದರು ನಂಜುಂಡಯ್ಯ.
"ನಾನೇನೂ ಕ್ರೀಡಾಪಟುವಲ್ಲ ಅನ್ನೋದು ನಿಮಗೆ ಗೊತ್ತಿದೆ. ಆದರೂ
ನನ್ಕೈಲಾದಷ್ಟು ಮಾಡ್ತೀನಿ."
“ಆಗಲಿ ಜಯದೇವ್, ನಿಮ್ಮ ಮನೆಯವರು ಒಪ್ಪಿಗೆ ಕೊಟ್ಟರೆ ಅಗತ್ಯವಾಗಿ
ಆಟವಾಡಿ!"
ದಂಪತಿ ನಕ್ಕರು.
ಆಗಲೆ ತಡವಾಗಿತ್ತೆಂದು, ಅವರು ಶಾಲೆಯ ಒಳ ಹೋಗಲಿಲ್ಲ.
ಹಾದಿ ನಡೆಯುತ್ತಿದ್ದಂತೆ ಜಯದೇವ ನೆನಪು ಮಾಡಿಕೊಟ್ಟ.
"ಹಿಂದೆ ನಾನು ಮೊದಲ್ನೇ ಸಲ ಈ ಊರಿಗೆ ಬಂದ ದಿವಸ ಸಾಯಂಕಾಲ,
ಇದೇ ಹಾದೀಲಿ ನಡಕೊಂಡು ಬಂದಿದ್ವಿ."
[ಆಗ ರಂಗರಾಯರಿದ್ದರೆಂಬುದನ್ನು ಬಾಯಿ ತೆರೆದು ಆತ ಹೇಳಲಿಲ್ಲ.
ನಂಜುಂಡಯ್ಯನವರಿಗೆ ಅದು ನೆನಪಿತ್ತು. ಆದರೂ ಆ ವ್ಯಕ್ತಿಯ ಹೆಸರೆತ್ತಲಿಲ್ಲ.]
"ಹೌದು;ಸುಮಾರು ಇದೇ ಸಮಯ."
"ಆಮೇಲೆ ಆನಂದ ವಿಲಾಸ ಹೋಟ್ಲಿಗೆ ಹೋದ್ವಿ. ಅಲ್ಲಿ ನೀವು ತಿಂಡಿ
ಕೊಡಿಸಿದ್ರಿ."
" ಹಹ್ಹಾ! ಇವತ್ತೂ ಹೋಗ್ಬಹುದಾಗಿತ್ತು. ಆದರೆ ನಿಮ್ಮ ಮನೆಯವರಿದಾ
ರಲ್ಲಪ್ಪಾ. ನಾಳೆ, ನನ್ನ ಗಂಡನಿಗೆ ಕೆಟ್ಟ ಚಾಳಿ ಕಲಿಸ್ದೋನು ಇವನೇ೦ತ, ಅವರು
ರೇಗಿದರೆ ಕಷ್ಟ."
ಸುನಂದಾ ಗಟ್ಟಿಯಾಗಿ ನಕ್ಕಳು.
ಅವರೇನೂ ಹೋಟೆಲಿಗೆ ಹೋಗಲಿಲ್ಲ. ತಿಂಡಿತಿನ್ನು ವುದಕ್ಕಲ್ಲವಾದರೂ