ಪುಟ:ನವೋದಯ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

375

ಬಿಟ್ಟರು.
ಎರಡು ಗಂಟೆಯ ಹೊತ್ತಿಗೆ ಊಟವಾಯಿತು. ಮಜ್ಜಿಗೆ ನೀರಿಲ್ಲದ ಅನ್ನ
ಸಾರುಗಳ ಊಟ.
'ಊಟ ಮುಗಿಯೋವರೆಗೂ ಮಾತಾಡ್ಬಾರದು. ಚೆನ್ನಾಗಿದೆ ಅಥವಾ ಇಲ್ಲ
ಅನ್ನೋದೆಲ್ಲಾ ಆಮೇಲೆ'_ಎಂಬುದು, ಅವರು ಬೆಂಗಳೂರು ಬಿಡುವುದಕ್ಕೆ
ಮುಂಚೆಯೇ ಸುನಂದಾ ರೂಪಿಸಿದ್ದ ಶರತಗಳಲ್ಲೊಂದು.
ಆ ದಿನ, ತಮ್ಮಿಬ್ಬರದೇ ಸಂಸಾರದ ಮೊದಲ ಅಡುಗೆಯಾಗಿ ಊಟವೂ ಮುಗಿ
ಯಿತು.ಜಯದೇವ ಸುನಂದೆಯನ್ನು ದಿಟ್ಟಿಸಿ ನೋಡುತ್ತಲಿದ್ದನೇ ಹೊರತು ಮಾತು
ಮಾತ್ರ ಆಡಲಿಲ್ಲ.ಗಂಡನ ಅಭಿಪ್ರಾಯ ತಿಳಿಯಲು ಹೆಂಡತಿ ಕಾದು ಬೇಸತ್ತಳು.
ಕೊನೆಗೆ ಸಹಿಸಲಾರದೆ ಆಕೆ ಎಂದಳು:
"ಹೇಗಿತ್ತು ಅಡುಗೆ?"
ಜಯದೇವ ಮುಗುಳು ನಕ್ಕು ನುಡಿದ:
"ಚೆನ್ನಾಗಿತ್ತು ಕಣೇ."
ಸುನಂದಾ ಬಿಕ್ಕುತ್ತ ಅತ್ತಳು:
"ಬೇಳೆ ಬೇಯದೆ ಇದ್ದರೆ ನಾನೇನ್ಮಾಡ್ಲಿ? ಹಸಿ ಸೌದೆ ತರಿಸ್ದೋರು ನೀವೇ
ಅಲ್ವ?ಅಡುಗೆ ಕೆಟ್ಟರೆ ಅದು ನನ್ನ ತಪ್ಪೆ?"
"ಅದಕ್ಕೆ ಯಾಕ್ಚಿನ್ನ ಅಳೋದು?"
"ಮೊಸರಾದರೂ ಕೊಂಡ್ಕೊಂಡಿದ್ದಿದ್ರೆ...."
"ಮರೆತ್ಹೋಯ್ತು. ಏನ್ಮಾಡೋಣ?"
"ಹಿಹ್ಹೀ... ಅಂತೂ ನನಗೆ ಅಡುಗೆ ಮಾಡೋಕೆ ಬರೋಲ್ಲ ಅಂತ ತಾನೇ ನೀವು
ಹೇಳೋದು?"
"ಛೆ! ಛೆ!ಎಲ್ಲಾದರೂ ಉಂಟೆ? ಅಂದೇನಾ ಹಾಗೆ ಯಾವತ್ತಾದರೂ?"
"ಮತ್ತೆ? ಅಡುಗೆ ಚೆನ್ನಾಗಿತ್ತೂಂತ ಯಾಕಂದ್ರಿ?"
"ತಪ್ಪಾಯ್ತು. ಈಗ ನಿಜ ಹೇಳ್ತೀನಿ. ಅಡುಗೆ ಚೆನ್ನಾಗಿರ್ಲಿಲ್ಲ."
ಆ ಮಾತು ಕೇಳಿದ ಮೇಲಂತೂ ಸುನಂದಾ ಜೋರಾಗಿಯೇ ರಾಗವೆಳೆದಳು:
"ಊ......ಊ......ನೀವು ನಮ್ಮಮ್ನಿಗೆ ಬರೀತೀರಾ... ವೇಣೂಗೆ ಬರೀ
ತೀರಾ..."
"ಇಲ್ಲ. ಖಂಡಿತ ಬರೆಯೋಲ್ಲ."
"ಮಾತು ಕೊಡಿ."
ಕೈಯ ಮೇಲೆ ಕೈ ಇಡುವ ವಾಗ್ದಾನಕ್ಕಾಗಿ ಜಯದೇವ ಆಕೆಯ ಬಳಿಗೆ ಬಂದ.
ಹಾಗೆ ಬಂದವನು, ಬಾಹುಗಳಿಂದ ಆಕೆಯನ್ನು ಬಿಗಿಯಾಗಿ ಬಳಸಿದ.
"ಸುನಂದಾ..."