ಪುಟ:ನವೋದಯ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

377

ಮತ್ತೆ ಸಾಮಾನುಗಳನ್ನು ಸರಿಯಾಗಿ ಜೋಡಿಸಿ ಇಡುವ ಕೆಲಸ ನಡೆಯಿತು.
"ಇದ್ದಿಲು ಒಲೇಲಿ ಅಡುಗೆ ಮಾಡೋದು ಎಷ್ಟು ಸುಲಭ!" ಎಂದಳು ಸುನಂದಾ,
ಬೆಂಗಳೂರಿನ ನೆನಪಾಗಿ.
"ಹೊಗೆ ಬರೋದಿಲ್ಲ, ಅಲ್ವೆ?"
"ಹೂಂ."
"ಸ್ಟವ್ನಲ್ಲಿ ಇನ್ನೂ ಸುಲಭ. ಕೈಗೆ ಕರಿಯಾಗೋದೇ ಇಲ್ಲ."
“ಗೇಲಿ ಮಾಡ್ತಿದೀರಾ? ಇದ್ದಿಲು ಒಲೆ ಕೊಂಡುಕೊಳ್ಳೋಕೆ ಆಗೊಲ್ಲ ಅಂತ
ಸ್ಪಷ್ಟವಾಗಿ ಹೇಳ್ಬಾರ್‍ದೆ?"
"ರಾಶಿ ರಾಶಿಯಾಗಿ ಸೌದೆ ಸಿಗ್ತಿರೋ ಊರಲ್ಲಿ ಇದ್ದಿಲು ಎಲ್ಲಿಂದ್ಬಂತೆ? ಈ
ಊರಲ್ಲಿ ಇದ್ದಿಲು ಒಲೆ ಯಾರೂ ಉಪಯೋಗ್ಸೋದಿಲ್ಲ; ಅಂಗಡೀಲಿ ಅದನ್ನ
ಮಾರೋದೂ ಇಲ್ಲ."
ಹೋಗಲಿ ಬಿಡಿ, ನೀವೇ ಗೆದ್ದಿರಿ," ಎಂದಳು ಸುನಂದಾ ಗಂಡನ ಮಾತು ನಿಜ
ವೆಂಬುದನ್ನು ಮನಗಂಡು.
ಹಾಲು ಮೊಸರು ತ೦ದ ಬಳಿಕ ಜವಾನ, ಒ೦ದು ಹೊರೆ ಒಣಕಟ್ಟಿಗೆಗಾಗಿ
ನಂಜುಂಡಯ್ಯನವರ ಮನೆಗೆ ನಡೆದ.
ಬೆಂಗಳೂರಿನಿಂದ ಅಷ್ಟೊಂದು ತಂದಿದ್ದರೂ ಮನೆಗೆ ಬೇಕಾಗಿದ್ದ ಸಾಮಗ್ರಿಗಳು
ಇನ್ನೂ ಹಲವಿದ್ದುವು. ಗಂಡ ಹೆಂಡತಿ ಇಬ್ಬರೂ ಕುಳಿತು ಪಟ್ಟಿ ಸಿದ್ಧಗೊಳಿಸಿದರು.
ಹತ್ತಾರು ಹೆಸರುಗಳನ್ನು ಬರೆದಾದ ಮೇಲೆ ಸುನಂದಾ ಅಂದಳು:
"ಬಾವಿ ಹಗ್ಗ ಬರೆದೇ ಇಲ್ಲ. ಬೆಳಗ್ಗೆ ಪಕ್ಕದ್ಮನೆಯಿಂದ ಇಸಕೊಂಡು ಬಂದದ್ದು
ವಾಪಸ್ಸು ಕೊಡೋದು ಬೇಡ್ವೇನು?"
"ಅದನ್ನೂ ಬರಿ."
"ವಾರಕ್ಕೊಂದ್ಸಲ ಅಲ್ವೆ ಇನ್ನು ಸಾಮಾನು ತರೋದು?"
“ಹೂಂ. ಏನಿದ್ದರೂ ಭಾನುವಾರವೇ. ಆಗಾಗ್ಗೆ ಜವಾನನ ಕೈಲಿ ಏನೂ
ತರಿಸ್ಬಾರ್‍ದು.”
“ಆಗಲಿ. ಸೂಜಿ ದಾರ ಬೇಕು."
"ಬರ್‍ಕೊ. ಉಣ್ಣೆ ಈಗ್ಲೆ ಬೇಡ ತಾನೆ?"
"ಹೋಗ್ರಿ...."
...ಸೌದೆಯೊಡನೆ ಜವಾನ ಬಂದ ಮೇಲೆ ಉಡುಪು ಧರಿಸಿ ಎರಡು ದೊಡ್ಡ
ಕೈ ಚೀಲಗಳು, ಮೂರು ಸಣ್ಣ ಶೀಷೆಗಳೊಡನೆ ಜಯದೇವ ಸಿದ್ಧನಾದ.
"ನಾನೂ ಬರ್‍ತೀನಿ," ಎಂದಳು ಸುನಂದಾ.
“ಬೇಡ ಕಣೇ. ಇದು ಹಳ್ಳಿ ಊರು. ಬಂದದ್ದೇ ತಡ, ಅಲೆಯೋಕೆ

48