ಪುಟ:ನವೋದಯ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

384

ಸೇತುವೆ

ಜಯದೇವ ಸುನಂದೆಯ ನೆರವಿಗೆ ಬಂದ.
"ತಗೊಳ್ಳಿ ಸಾರ್, ಒಳಗಿನ್ನೂ ಇದೆ."
"ನಾನು ಬರ್‍ತೀನೀಂತ ಕನಸು ಬಿದ್ದಿತ್ತೆ?"
ಸುನಂದಾ ಸತ್ಯವನ್ನೇ ನುಡಿಯಬೇಕಾಯಿತು.
"ನಿಜವಾಗಿಯೂ ಒಳಗಿದೆ. ಇವತ್ತು ಮಾಡಿದ್ದು ಸ್ವಲ್ಪ ಜಾಸ್ತಿಯಾಯ್ತು."
"ಹಾಗಾದರೆ ಸರಿ",ಎಂದರು ನಂಜುಂಡಯ್ಯ, ಲೋಟವನ್ನೆತ್ತಿಕೊಳ್ಳುತ್ತ.
ಸೊಗಸಾಗಿದ್ದ ಆ ಕಾಫಿಯನ್ನು ಸ್ವಲ್ಪ ಹೀರಿ, ರುಚಿ ನೋಡಿ, ಅವರು
ಕೇಳಿದರು:
“ಬೆಂಗಳೂರಿಂದ ತಂದಿರಾ ಪುಡೀನ?"
ಉತ್ತರ ಕೊಡಲು ಸುನಂದಾ ಅಲ್ಲಿರಲಿಲ್ಲ. ಜಯದೇವನೆಂದ:
“ಹೂಂ. ನಮ್ಮತ್ತೆಯ ಸರಬರಾಜು."
"ಮಾಡಿರೋದು ಚೆನ್ನಾಗಿದೆ," ಎಂದರು ನಂಜುಂಡಯ್ಯ, ಬರಿಯ ಪುಡಿಗೇ
ಕೀರ್ತಿ ಸಲ್ಲಬಾರದೆಂದು.
ಜಯದೇವನೂ ಕಾಫಿ ಕುಡಿದು ಸಿದ್ಧನಾದ. ನಂಜುಂಡಯ್ಯನೂ ಎದ್ದರು.
ಆದರೆ ಹೇಳಿ ಹೋಗಲು ಸುನಂದೆಯೇ ಅಲ್ಲಿರಲಿಲ್ಲ. ನಂಜುಂಡಯ್ಯನಿಗೆ ತಿಳಿಯ
ಬೇಡವೆ ಆ ಸೂಕ್ಷ್ಮ? ಗೋಡೆ ಛಾವಣಿಗಳನ್ನು ಪರೀಕ್ಷಿಸುತ್ತ, ಟೀಕೆ ಟಿಪ್ಪಣಿಗಳನ್ನು
ಮಾಡುತ್ತ, ಕೈಯಲ್ಲಿದ್ದ ಹ್ಯಾಟನ್ನು ಎದೆಗವಚಿಕೊಳ್ಳುತ್ತ, ಅವರು ಅಲ್ಲಿಯೇ ನಿಂತು
ಬಿಟ್ಟರು.
ಬೇರೆ ಉಪಾಯವಿಲ್ಲದೆ ಜಯದೇವ, ಚಪ್ಪಲಿ ಕಳಚಿ, ತಾನೇ ಅಡುಗೆ ಮನೆ
ಯೊಳಹೊಕ್ಕು ಹೆಂಡತಿಗೆ 'ಹೇಳಿಬರ'ಬೇಕಾಯಿತು.
"ನಡೀರಿ ಸಾರ್."
"ನಡೀರಿ."
ಮನೆಯಾಕೆ ನಂಜುಂಡಯ್ಯನಿಗೆ ಕಾಣಿಸಲಿಲ್ಲ. ಆದರೂ ಶಿಷ್ಟಾಚಾರಕ್ಕೆ ತಪ್ಪ
ಬಾರದೆಂದು, "ಬರ್‍ತೀನ್ರೀ", ಎಂದು ಹೇಳಿ, ಅವರು ಹೊರಗಿಳಿದರು.
......ಬಯಲಿನಲ್ಲಿ ಓಡಾಡುತ್ತ ಗದ್ದಲಮಾಡುತ್ತ ಇಷ್ಟಬಂದಂತೆ ಕುಣಿದಾಡು
ತ್ತಿದ್ದ ಹುಡುಗರು, ನಂಜುಂಡಯ್ಯನವರನ್ನು ನೋಡಿದೊಡನೆ ಶಾಲೆಗೆ ಹಿಂಬದಿಗೆ
ಸರಿದರು. ಹಿಂದೆ ಜಯದೇವ ಅಲ್ಲಿದ್ದಾಗ ಮಾಧ್ಯಮಿಕ ಮೊದಲನೆ ವರ್ಷದಲ್ಲಿದ್ದು
ಈಗ ಕೊನೆಯ ತರಗತಿ ತಲುಪಿದ್ದವರಿಗೆ, ಆತನ ಗುರುತು ಸಿಕ್ಕಿತು. ಆ ದೊಡ್ಡ
ಹುಡುಗರು, ಜಯದೇವ ಮೇಸ್ಟ್ರು ಬಂದರೆಂದು ಸುದ್ದಿ ಹಬ್ಬಿಸಿದರು. ಉಳಿದವರಿಗೆ
ಆತ 'ಹೊಸ ಮೇಸ್ಟ್ರಾ'ದ. ಕೆಲವರಿಗಂತೂ ಹೊಸ ಉಪಾಧ್ಯಾಯರ ಆಗಮನದ
ಸುದ್ದಿಯನ್ನು ಜವಾನನೇ ತಿಳಿಸಿದ್ದ. అంತೂ, ಶಾಲೆಯ ಹಿಂಬದಿಯಲ್ಲಿ ಅಡಗಿದ್ದ
ಹುಡುಗರು ಮತ್ತೆ ಬೆಳಕಿಗೆ ಬಂದು ಇಣಿಕಿ ನೋಡಿದರು.