ಪುಟ:ನವೋದಯ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

385

ಜಯದೇವ ಅದನ್ನು ಗಮನಿಸುತ್ತಿದ್ದನಾದರೂ ನಂಜುಂಡಯ್ಯನವರಿಗೆ ಅತ್ತ
ಲಕ್ಷ್ಯವಿರಲಿಲ್ಲ.
ಜವಾನನ ವಂದನೆಯನ್ನು ಸ್ವೀಕರಿಸುತ್ತ ಅವರು ಕೇಳಿದರು:
"ಲಕ್ಕಪ್ಪ ಗೌಡರು ಬಂದಿಲ್ವೇನೋ?"
“ಇಲ್ಲ ಬುದ್ದೀ."
"ಬೇಗ బನ್ನೀಂತ ಹೇಳಿದ್ರೂ ಹೀಗೆ," ಎಂದು ಜಯದೇವನ బಳಿ ಅವರು
ದೂರುಕೊಟ್ಟರು.
ಉಪಾಧ್ಯಾಯರ ಕೊಠಡಿಯ ಕದ ತೆರೆದು ನಂಜುಂಡಯ್ಯ, [ನಿತ್ಯದ ಪಧ್ಧತಿ
ಯಂತೆ] ಬಾಗಿಲಲ್ಲೆ ನಿಂತು, ತಮ್ಮ ಕೈಗಡಿಯಾರವನ್ನು ಬಿಚ್ಚಿ, ಗೋಡೆಯ ಗಡಿ
ಯಾರಕ್ಕೆ ಅದನ್ನು ಹೋಲಿಸಿ, 'ಕೀ' ಕೊಟ್ಟರು.
ಅವರ ಹಿಂದೆಯೆ ನಿಂತಿದ್ದ ಜಯದೇವ, ಜಗಲಿಯ ಮೂಲೆಯಲ್ಲಿ ಗುಂಪುಕಟ್ಟಿದ
ಹುಡುಗಿಯರೆಡೆಗೆ ನೋಡಿದ. ಲಂಗಗಳು, ಕೆಲ ಸೀರೆಗಳು ಕೂಡ. ಕೈ ಬಳೆಗಳ
ಸದ್ದು,ಕಿಲಕಿಲ ನಗು. ಅಲ್ಲಿ ಇಂದಿರೆ ಇರಲಿಲ್ಲ, ಪ್ರಭಾಮಣಿ ಇರಲಿಲ್ಲ. ಎಲ್ಲರೂ
ಹೊಸಬರೇ. ಕೊನೆಯ ತರಗತಿಯ ಕೆಲವರಿಗೆ ತಾನು ಪಾಠ ಹೇಳಿದ್ದರೂ ಇರಬಹುದು.
ಆದರೆ ಅವರು ಯಾರೋ, ಗುರುತಿಲ್ಲ.
"ಬನ್ನಿ ಜಯದೇವ್ ಒಳಗೆ."
ಸ್ವಚ್ಛವಾಗಿದ್ದ ఆ ಕೊಠಡಿಗೆ ಜಯದೇವ ಜಾಗರೂಕತೆಯಿಂದ ಕಾಲಿರಿಸಿದ.
ವೆಂಕಟರಾಯರ ಕಾಲದಲ್ಲೇ ಈ ಕೊಠಡಿಯಲ್ಲಿ ಮುಖ್ಯ ಬದಲಾವಣೆಗಳಾಗಿದ್ದುವು.
ಈಗಂತೂ ಹೊಸ ಕಳೆಯೆ ಬಂದಿತ್ತು.
ನಂಜುಂಡಯ್ಯ ಆಗಲೇ ಮೇಜಿಗೆ ಮುಖಮಾಡಿದ್ದ ಕುರ್ಚಿಯನ್ನು-ಮುಖ್ಯೋ
ಪಾಧ್ಯಾಯರ ಪೀಠವನ್ನು-ಅಲಂಕರಿಸಿದ್ದರು. ಮೇಜಿನ ಮೇಲೆ ಹ್ಯಾಟು. ಅವರ
ಎದುರುಗಡೆ ಬೇರೆ ಎರಡು ಕುರ್ಚಿಗಳಿದ್ದುವು. ಒಂದರಮೇಲೆ ಕುಳಿತು ಜಯದೇವ,
ಕಿಟಕಿಯಾಚೆಗೆ ದೃಷ್ಟಿಹರಿಸಿದ. ಊರಿನ ಮುಖ್ಯವಾದ ಒಂದೇ ಬೀದಿ, ಈಗಲೂ
ಹಿಂದಿನಂತೆಯೇ ಮಲಗಿತ್ತು. ಕೆಂಪು ಮೈ. ಅದು, ಊರಿಗಿಂತ ಶಾಲೆ ದೂರವಾಗಿದೆ
ಯೆಂಬ ಭ್ರಮೆ ಹುಟ್ಟಿಸುವ ಪ್ರಶಾಂತ ವಾತಾವರಣ.
ಕೊಠಡಿಯೊಳಗೆ, ಹಳೆಯದರ ಜತೆಗೆ ಹೊಸತೊಂದು ಬೀರುವೂ ಇತ್ತು.
ಮರದ ಎತ್ತರವಾದೊಂದು ಪೆಟ್ಟಿಗೆ ಕೂಡ.
ಅದರ ಕಡೆ ಬೊಟ್ಟು ಮಾಡಿ ನಂಜುಂಡಯ್ಯ ಹೇಳಿದರು:
"ಆಟದ ಸಾಮಾನೆಲ್ಲ ಅದರಲ್ಲಿದೆ."
"ತುಂಬಾ ಸುಧಾರಣೆಯಾಗಿದೆ ಸಾರ್."
"ಪುರಸೊತ್ತಾದಾಗ ಪುಸ್ತಕ ಭಂಡಾರ ನೋಡುವಿರಂತೆ. ನೀವು ನಂಬ್ತೀರೋ

49