ಪುಟ:ನವೋದಯ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೊದಯ

೩೮೭

"ನಮಸ್ಕಾರ."
ಹಾಗೆ ಜಯದೇವ ಎದ್ದುದು ನಂಜುಂಡಯ್ಯನವರಿಗೆ ಇಷ್ಟವಾಗಲಿಲ್ಲ.
ಆ ವಿನಯದ ಅಗತ್ಯವಿತ್ತೆಂದು ಅವರಿಗೆ ತೋರಲಿಲ್ಲ.
ಕೊಡೆಯನ್ನು ಕಪಾಟದ ಹಿಂಬದಿಗೆ ತಗಲಿಸಿ ಬಂದು ಲಕ್ಕಪ್ಪ ಗೌಡರು, ಖಾಲಿ
ಇದ್ದ ಕುರ್ಚಿಯಮೇಲೆ ಕುಳಿತಾಗ, ಜಯದೇವನೂ ಮತ್ತೆ ಆಸೀನನಾದ.
ಖಾದಿಯ ಪಂಚೆ, ಖಾದಿಯ ಜುಬ್ಬ. ಮೇಲೆ ನಸು ಹಳದಿಯ ಮುಚ್ಚು
ಕಾಲರಿನ ಕೋಟು. ಆದೂ ಖಾದಿಯದೇ. ನಂಜುಂಡಯ್ಯ ಹೇಳಿದ್ದಂತೆಯೇ ಕುಳ್ಳ
ಆಕೃತಿ.
ಕುಶಲ ಸಂಭಾಷಣೆಗೆ ಅವಕಾಶವಿಲ್ಲವೆಂಬಂತೆ ನಂಜುಂಡಯ್ಯ ಕೈಗಡಿಯಾರದತ್ತ
ನೋಡಿದರು.
“ಗೌಡರು ತಡವಾಗಿ ಬಂದಿರಿ."
"ಸ್ವಲ್ಪ ತಡವಾಯ್ತು."
"ಜಯದೇವರು ಇವತ್ತೇ ಸೇರ್‍ತಾರೆ. ಪಾಠ ಹಂಚ್ಕೋಬೇಕಾಗಿತ್ತು."
"ಆದಕ್ಕೇನು? ಈಗಲೂ ಮಾಡಬಹುದಲ್ಲ?"
ಗೋಡೆ ಗಡಿಯಾರ ಟಣ್ ಟಣ್......ಎನ್ನತೊಡಗಿತು. ಜವಾನ ಬಂದು,
ಪೆಟ್ಟಿಗೆಯೊಳಗಿಂದ ಘಂಟೆಯನ್ನು ಹೊರ ತೆಗೆದು ಜಗಲಿಗೊಯ್ದು ಢಣ್ ಢಣ್
ಢಣ್ ಢಣ್...... ಎಂದು ಬಾರಿಸಿದ.
"ಅವಸರದಲ್ಲೇ ಆಗುತ್ತಲ್ಲಾಂತ ಬೇಸರ, ಸಮಯಕ್ಕೆ ಸರಿಯಾಗಿ ಕೆಲಸ
ಮಾಡೋದಕ್ಕೆ ನಾವು ಯಾವತ್ತು ಕಲಿತೇವೋ..."
ಗೌಡರು ಹುಬ್ಬು ಗಂಟಿಕ್ಕಿದರು.
"ವಿಷಯಕ್ಕೆ బನ್ನಿ ಸಾರ್. ಇರೋರು ಮೂರು ಜನ. ಹಂಚಿಕೊಳ್ಳೋದು
ಏನು ಮಹಾ ಕೆಲಸ?"
"ನೀವು ಹಿಂದೆ ಯಾವ ಯಾವ ಕ್ಲಾಸು ತಗೋತಿದ್ದಿರಿ ಜಯದೇವ?" ಎಂದು
ನಂಜುಂಡಯ್ಯ ಕೇಳಿದರು.
"ಕನ್ನಡ, ಇತಿಹಾಸ, ಭೊಗೋಳ."
ಲಕ್ಕಪ್ಪ ಗೌಡರೆಂದರು:
"ನೋಡಿ. ಗಣಿತ ನೀವು ತಗೊಳೋದಾದರೆ ಚೆನಾಗಿರುತ್ತೆ. ಕನ್ನಡ ನನಗೆ
ಬಿಟ್ಬಿಡಿ."
“ಆಗಲಿ ಅದಕ್ಕೇನಂತೆ?"
ನಂಜುಂಡಯ್ಯನೂ ಒಪ್ಪಿದರು.
"ಕೆಲಸವಂತೂ ಇನ್ನೊಬ್ಬರು ಬರೋ ತನಕ ಜಾಸ್ತೀನೆ ಇರುತ್ತೆ, ಅಷ್ಟರ ವರೆಗೆ