ಪುಟ:ನವೋದಯ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

389

ಮಾತಿನಲ್ಲಿ ಬಿಟ್ಟು ಕೊಡುವ ಹಾಗಿರಲಿಲ್ಲ ಲಕ್ಕಪ್ಪಗೌಡರು. ಈತನನ್ನು ಇದಿರಿ
ಸలు, ನಂಜುಂಡಯ್ಯನವರಿಗೆ ಎಷ್ಟು ಸಹಾಯ ದೊರೆತರೂ ಸಾಲದೆನ್ನಿಸಿತು ಜಯ
ದೇವನಿಗೆ. ಬಂದೊಡನೆಯೆ ಅಂತಹ ಸಹಾಯಕ್ಕೆ ಹೋಗುವ ಸನ್ನಿವೇಶ. ತನ್ನಷ್ಟಕ್ಕೆ
ಇದ್ದು ವಿದ್ಯಾದಾನವನ್ನು ಯಜ್ಞವಾಗಿ ಆರಂಭಿಸಬೇಕೆಂದು ಮಾಡಿದ್ದ ತೀರ್ಮಾನ
ಗಳೆಲ್ಲಿ? ಈಗ ಇವರೊಳಗಿನ ಈ ಚರ್ಚೆ. ತಾತ್ವಿಕವಾಗಿ ನೋಡಿದರೆ ನಂಜುಂಡಯ್ಯ
ನವರ ಅಭಿಪ್ರಾಯವೇ ಸರಿ.
ಯೋಚಿಸುತ್ತಿದ್ದಂತೆಯೆ ಒಮ್ಮೆಲೆ ಮಾತು ಆಡಿದ ಜಯದೇವ.
"ಹಾಗಲ್ಲ ಸಾರ್. ನಿತ್ಯದ ಭೇಟಿಗಿಂತಲೂ ಸರಿಯಾಗಿ ನಡೆಸೋ ಸಭೆಗೆ ಹೆಚ್ಚು
ಬೆಲೆ ಇರುತ್ತೆ."
ನೀವು ಹಾಗಂತೀರೇನು? ಇಬ್ಬರು ಪದವೀಧರರದೂ ಒಂದೇ ಅಭೀಪ್ರಾಯ
ಅಂದ್ಮೇಲೆ, ನನ್ನದೇನಪ್ಪ? ಶಿರಸಾ ವಹಿಸಲೇ ಬೇಕು."
ಲಕ್ಕಪ್ಪಗೌಡರ ಮಾತಿನೊಳಗಿನ ವ್ಯಂಗ್ಯಭಾವ ಅದೇನಿದ್ದರೂ, ಆತ ಅಷ್ಟರ
ಮಟ್ಟಿಗಾದರೂ ಹಾದಿಗೆ ಬಂದನಲ್ಲಾ ಎಂದು ನಂಜುಂಡಯ್ಯನವರಿಗೆ ಸಮಾಧಾನ
ವಾಯಿತು. ಜಯದೇವ ತಮ್ಮ ಪಕ್ಷ ವಹಿಸಿದನೆಂದು ಅವರು ಸಂತೋಷಪಟ್ಟರು.
ಪ್ರಾರ್ಥನೆ ಕೊನೆಮುಟ್ಟಿದೊಡನೆ ಚಂಗನೆದ್ದು ಲಕ್ಕಪ್ಪಗೌಡರು, ಉಪಾಧ್ಯಾ
ಯರ ಹಾಜರಿ ಪುಸ್ತಕ ಹುಡುಕಿದರು.
ಅವರು ಗುರುತು ಹಾಕುತ್ತಿದ್ದಂತೆ ನಂಜುಂಡಯ್ಯನೆಂದರು.
"ನೀವೂ ಹೆಸರು ಬರೆದು ಹಾಜರಿ ಹಾಕಿ ಜಯದೇವ್."
"ಆಗಲಿ ಸಾರ್."
ತಮ್ಮ ಕೆಲಸ ಮುಗಿದು, ತಾವು ಹೋಗಬೇಕಾದ ಮಾಧ್ಯಮಿಕ ಮೊದಲ ತರ
ಗತಿಯ ವಿದ್ಯಾರ್ಥಿಗಳ ಹಾಜರಿ ಪುಸ್ತಕವನ್ನೂ ಎತ್ತಿಕೊಂಡು, ಲಕ್ಕಪ್ಪಗೌಡರು
ಹೊರಟುಹೋದರು.
ಇಬ್ಬರೇ ಉಳಿದಾಗ ನಂಜುಂಡಯ್ಯ ಅಂದರು:
“ನೋಡಿದಿರಾ? ಹ್ಯಾಗಿದ್ದಾನೆ ಆಸಾಮಿ?"
ನೇರವಾಗಿ ಉತ್ತರಿಸಲಾಗದಂತಹ ಕ್ಲಿಷ್ಟ ಪ್ರಶ್ನೆ.
"ಏನು ಹೇಳೋಕೂ ತೋಚೋದಿಲ್ಲ ನನಗೆ."
ಆ ಮಾತು ಕೂಡ ತಮ್ಮ ಪರವಾದುದೇ ಎಂದು ಭಾವಿಸಿದರು ನಂಜುಂಡಯ್ಯ.
"ಸ್ವಲ್ಪ ಹೊತ್ತು ಸಹಿಸ್ಕೊಂಡೆ ಹೀಗಂತೀರೀ. ದಿನ ನಿತ್ಯ ಇದನ್ನೆಲ್ಲ ನಾನು
ಅನುಭವಿಸ್ತಿದೀನಲ್ಲ."
ಜಯದೇವ ಸುಮ್ಮನೆ ನಕ್ಕು, ಮಾಧ್ಯಮಿಕ ಮೂರನೆಯ ತರಗತಿಯ ಹಾಜರಿ
ಪುಸ್ತಕವನ್ನು ತೆಗೆದುಕೊಂಡ.
ಉಳಿದೆರಡು ಹಾಜರಿ ಪುಸ್ತಕಗಳನ್ನು ನಂಜುಂಡಯ್ಯನವರೇ ಎತ್ತಿಕೊಳ್ಳುತ್ತ