ಪುಟ:ನವೋದಯ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

390

ಸೇತುವೆ

ಅಂದರು:
"ಎಂಥೆಂಥವರನ್ನೋ ಹಾದಿಗೆ ತಂದಿದೀನಿ. ಇವನೊಬ್ಬ ನನ್ನನ್ನು ಹಂಗಿಸ್ತಿ
ದಾನಲ್ಲ."
ತತ್ವದ್ದಲ್ಲ,-ತೀರ ವೈಯಕ್ತಿಕವಾದ ಪ್ರಶ್ನೆ. ಜಯದೇವನಿಗೆ ನೆನಪಿತ್ತು. ರಂಗ
ರಾಯರಿದ್ದಾಗ-ವೆಂಕಟರಾಯರು ಬಂದಮೇಲೂ ಕೂಡ-ಆಗಾಗ್ಗೆ ಉಪಾಧ್ಯಾಯರ
ಸಭೆಯಾಗಲೆಂದು ನಂಜುಂಡಯ್ಯ ಕೇಳಿದ್ದರೆ? ಅವರು ಮುಖ್ಯೋಪಾಧ್ಯಾಯರಾದ
ಬಳಿಕ ಮಾತ್ರವೇ ಶಿಸ್ತುಪಾಲನೆ ಜೀವ ತಳೆದಿತ್ತು.
ಜಯದೇವನ ಜತೆ ನಂಜುಂಡಯ್ಯ ಏಳನೆಯ ತರಗತಿ ವರೆಗೂ ಬಂದರು.
ವಿದ್ಯಾರ್ಥಿಗಳಿಗೆ ಹೊಸ ಉಪಾಧ್ಯಾಯರ ಪರಿಚಯ ಮಾಡಿಕೊಟ್ಟರು. ಬಳಿಕ ,ಆರ
ನೆಯ ತರಗತಿಗೆ ಲೆಕ್ಕ ಕೊಟ್ಟು ಎಂಟನೆಯ ತರಗತಿಗೆ ಇಂಗ್ಲಿಷ್ ಹೇಳಲು ಅವರು
ಹೊರಟು ಹೋದರು.
ಹುಡುಗರು ಹೊಸಬರಾಗಿದ್ದರೂ ಅಪರಿಚಿತರ ಮುಂದೆ ನಿಂತಂತೆ ಜಯದೇವ
ನಿಗೆ ಭಾಸವಾಗಲಿಲ್ಲ. ಮೊದಲ ಸಾರಿ ಮೊದಲ ತರಗತಿಯನ್ನು ಇದಿರಿಸಿದಾಗ,
ಎಷ್ಟೊಂದು ಅಳುಕಿದ್ದ ಆತ. ಆಗ, ತೇಲುತ್ತಿದ್ದ ತಲೆಗಳ ಸಾಗರವಾಗಿತ್ತು ಒಂದು
ಕ್ಷಣ ಆ ಕೊಠಡಿ, ಆತನ ದೃಷ್ಟಿಗೆ. ಒಮ್ಮಿಂದೊಮ್ಮೆಲೆ ಮೂಕನಾದೆನೇನೋ ಎಂದು
ಭಯಗೊಂಡಿದ್ದ. ಈಗ ಹಾಗಲ್ಲ. ಆತ ಓಡಾಡುತ್ತಿದ್ದುದು ತನ್ನ ಮನೆಯಲ್ಲೇ.
ಬಹಳ ದಿನಗಳಿಂದ ಅಲ್ಲಿರಲಿಲ್ಲ ಅಷ್ಟೆ. ಆ ಹುಡುಗರಿಗೋ? ಆತನ ನಡಿಗೆ ಸಾಕು_
ಮುಗುಳ್ನಗೆ ಸಾಕು.
“ಚೆನ್ನಾಗಿದೀರೇನ್ರೊ?"
ಹೆಚ್ಚಿನ ವಿದ್ಯಾರ್ಥಿಗಳೆಲ್ಲ ಒಮ್ಮೆಲೆ ಕೊಟ್ಟ ಉತ್ತರ:
“ಚೆನ್ನಾಗಿದೀವಿ ಸಾರ್."
ಅದೇನು ಸಾಮಾನ್ಯ ಸದ್ದೆ?
"ಶ್! ಮೆತ್ತಗೆ! ಪಕ್ಕದ ತರಗತೀಲಿ ಪಾಠವಾಗ್ತಾ ಇದೆ.”
ತಪ್ಪು ಮಾಡಿದ ಎಳೆಯರಂತೆ ಹುಡುಗರು ಹಲ್ಲುಕಿಸಿದರು.
ಕುರ್ಚಿ ಭದ್ರವಾಗಿದೆಯೇ ಏನೆಂದು ಜಯದೇವ ಮುಟ್ಟಿನೋಡಿದ. ಹುಡುಗರು
ಮೆಲ್ಲನೆ ನಕ್ಕರು. ಕುರ್ಚಿಯ ಮೇಲೆ ಕುಳಿತು, ಕೈಯಲ್ಲಿದ್ದ ಹಾಜರಿ ಪುಸ್ತಕವನ್ನು
ಮೇಜಿನ ಮೇಲಿರಿಸಿದ.
ಆತನ ದೃಷ್ಟಿ ಸಾಲು ಸಾಲಾಗಿದ್ದ ಹುಡುಗರನ್ನೆಲ್ಲ ನೋಡಿತು. ಅಡ್ಡವಾಗಿರಿ
ಸಿದ್ದ ಬೆಂಚಿನ ಮೇಲೆ ಹುಡುಗಿಯರಿದ್ದರು. ಮತ್ತೆ ಹುಡುಗರೆಡೆಗೇ ಜಯದೇವ
ನೋಡಿದ_ಯಾರನ್ನೋ ಹುಡುಕುವಂತೆ.
ಒಬ್ಬ ಕೇಳಿದ:
“ಯಾರು ಬೇಕ್ಸಾರ್?”