ಪುಟ:ನವೋದಯ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

392

ಸೇತುವೆ

ಜಗಲಿಯಲ್ಲಿ ನಿಂತು ಜವಾನ ಒಂದು ಗಂಟೆ ಹೊಡೆದ-ಪೀರಿಯಡು ಒಂದಾಯಿ
ತೆಂದು.
ಪುಸ್ತಕ ಮುಚ್ಚಿ ಏಳುತ್ತ ಜಯದೇವ ಕೇಳಿದ:
"ಯಾರು ಹಿರೇಮಣಿ?"
ಎದ್ದು ನಿಂತವನು ಆ ಹುಡುಗನೇ.
.........ಅನಂತರದ ಪಾಠಗಳೂ ಅಷ್ಟೆ.
ವಿರಾಮದ ಹೊತ್ತಿನಲ್ಲಿ ಲಕ್ಕಪ್ಪಗೌಡರು ಜಯದೇವನನ್ನು ಉದ್ದೇಶಿಸಿ
ಹೇಳಿದರು:
"ನಾನು ಮಾತಾಡೋದು ಸ್ವಲ್ಪ ಒರಟು. ತಪ್ಪು ತಿಳ್ಕೋಬೇಡಿ ಸಾರ್."
ಅನಿರೀಕ್ಷಿತವಾಗಿದ್ದ ಮಾತು.
"ಇಲ್ವಲ್ರೀ," ಎಂದ ಜಯದೇವ.
ನಂಜುಂಡಯ್ಯ ಕೊಠಡಿಯ ಒಳಬರುತ್ತ ಕೇಳಿದರು:
"ವಿದ್ಯಾರ್ಥಿಗಳು ಏನಂತಾರೆ ಜಯದೇವರೆ?"
“ಚೆನ್ನಾಗಿಯೇ ಇದಾರೆ."
ಇಲ್ಲದೇನು? ಅವರ ಪಾಲಿಗೆ ನೀವೊಬ್ಬ ಮಾಂತ್ರಿಕ ಇದ್ದ ಹಾಗೆ."



ಭಾನುವಾರ ಜಯದೇವ ಸ್ವಲ್ಪ ತಡವಾಗಿ ಎದ್ದ. ಶನಿವಾರ ಶಾಲೆ ಬಿಟ್ಟು
ಎಲ್ಲರೂ ಹೊರಟಾಗ, ಲಕ್ಕಪ್ಪಗೌಡರಿಗೂ ಕೇಳಿಸುವಂತೆ, ನಂಜುಂಡಯ್ಯ ಹೇಳಿದ್ದರು:
“ನಾಳೆ ಸಾಯಂಕಾಲದ ಕಾಫಿ ತಿಂಡಿಗೆ ನಮ್ಮಲ್ಲಿಗೆ ಬಂದ್ಬಿಡಿ ಜಯದೇವ್-ಸತಿ
ಪತಿ ಇಬ್ಬರೂ."
ಅಂದರೆ, ಸಾಯಂಕಾಲದ ವರೆಗೂ ಹಾಯಾಗಿ ಹೊತ್ತು ಕಳೆಯಲು ಅವಕಾಶ.
ಜಯದೇವ ಮಲಗಿದ್ದಲ್ಲಿಂದಲೆ ಕೇಳಿದ:
"ಹಾಲು ಬಂತೆ ಸುನಂದಾ?"
ಪ್ರಶ್ನೆ ಒಳ ಹಜಾರವನ್ನು ದಾಟಿ ಅಡುಗೆಮನೆಯನ್ನು ತಲಪಿತು. ಅಲ್ಲಿಂದಲೆ
ಆಕೆ ಪ್ರತ್ಯುತ್ತರ ಕೊಟ್ಟಳು:
"ಬಂತು. ಕಾಫಿ ಸೋಸ್ಲೇನು?”
"ಹೂಂ."
"ಅಷ್ಟೇನಾ? ದಯಮಾಡಿಸಿ ಅನಬಾರ್ದೆ?"