ಪುಟ:ನವೋದಯ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

395

"ಬಾಣಂತಿತನದ ಸಂಕಟ. ಮಗು ಉಳಿಯೋದೇ ಕಷ್ಟವಾಯ್ತು. ಏನೋ
ಹಣೆಬರಹ ಗಟ್ಟಿಯಾಗಿತ್ತೂಂತ ಬದುಕಿಕೊಂಡ್ತು."
"ಎಷ್ಟು ಜನ ಮಕ್ಕಳು?"
"ದೊಡ್ಡೋನೊಬ್ಬ ಏಳು ವರ್ಷದೋನು ಊರಲ್ಲೇ ಇದಾನೆ, ಅಜ್ಜಿ ಜತೇಲಿ.
ಆಮೇಲಿಂದು ಎರಡು ತೀರ್‍ಕೊಂಡ್ವು. ಈಗಿನ್ದು ಹೆಣ್ಣು. ಅವಳಿಗೆ ಕಾಹಿಲೇಂತ
ನಮ್ಮತ್ತೆ ಇಲ್ಲಿಗೇ ಬಂದಿದಾರೆ."
ಅಂತಹ ಸುಖದುಃಖದ ಮಾನವೀಯ ಪೀಠಿಕೆಯ ಬಳಿಕ, ಅಸಹ್ಯವೆನಿಸುವ
ವಾದವೈಖರಿ ಸಾಧ್ಯವಿತ್ತೆ? ಎಲ್ಲರಂತೆ ಸಂಸಾರ ಭಾರ ಹೊತ್ತಿದ್ದ, ನೋವು ನಲಿವು
ಆಹಾರವಾಗಿದ್ದ, ಆ ಮನುಷ್ಯ, ಇನ್ನೊಬ್ಬನ ವಿಷಯವಾಗಿ ವಿಷದ ಫೂತ್ಕಾರ ಮಾಡುವ
ನೆಂದು ಎಣಿಸುವಂತಿತ್ತೆ?
ಏನೋ ಯೋಚನೆಯಲ್ಲಿ ಜಯದೇವ ಮುಳುಗಿದುದನ್ನು ಕಂಡು, ಲಕ್ಕಪ್ಪ
ಗೌಡರೇ ಅಂದರು:
"ಮೊನ್ನೆ ಇಲ್ಲಿಗೆ ಬಂದ ದಿವಸ ನಂಜುಂಡಯ್ಯನವರ ಮನೆಯಲ್ಲೇ ಊಟಕ್ಕಿ
ದ್ರಂತೆ."
"ಹೌದು."
"ನಮ್ಮಲ್ಲಿಗೂ ಒಂದು ದಿವಸ ಊಟಕ್ಕೆ ಕರೆದರೆ ಬರ್‍ತೀರಿ ತಾನೆ?"
"ಬರದೆ ಏನು?"
"ಸಂತೋಷ. ಈಗಲೇ ಕರಕೊಂಡು ಹೋಗೋಣ ಅ೦ದರೆ, ನಾನು ಹೇಳಿ
ಬಂದಿಲ್ಲ. ಮೇಲಿನ ಭಾನುವಾರ ನಮ್ಮಲ್ಲಿಗೆ ದಯಮಾಡಿಸ್ಬೇಕು."
"ಅಂಥ ದೊಡ್ಡ ಪದ ಯಾಕೆ ಲಕ್ಕಪ್ಪಗೌಡರೆ? ಬಾ ಅಂದರೆ ಸಾಕು, ಬರ್‍ತೀನಿ."
"ಒಬ್ಬರಲ್ಲ!"
"ಗೊತ್ತಾಯ್ತು. ಇಬ್ಬರೂ."
ಒಂದು ನಮಿಷ ಸುಮ್ಮನಿದ್ದು ಗೌಡರೆಂದರು:
"ನಿಮ್ಮ ವಿಷಯ ನಾನು ಹಿಂದೆಯೇ ಎಷ್ಟೋ ಕೇಳಿದ್ದೆ ಜಯದೇವರೆ. ನೀವು
ಹೋಗಿ ಸ್ವಲ್ಪ ಸಮಯವಾದ್ಮೇಲೆ ನಾನು ಬಂದದ್ದು. ಆಗಲೂ ಇಲ್ಲಿಯವರ
ಬಾಯಲ್ಲಿ ನಿಮ್ಮ ಮಾತೇ. ಎಲ್ಲರೂ ನಿಮ್ಮನ್ನು ಹೊಗಳುವವರೇ."
ಜಯದೇವ ಮುಗುಳುನಕ್ಕ.
"ಬಯ್ಯಬೇಕಾಗಿತ್ತು. ಯಾಕೆ ಹೊಗಳಿದರೊ?"
"ನನಗಂತೂ ಆಶ್ಚರ್ಯವಾಯ್ತು. ಉಪಾಧ್ಯಾಯ ವೃತ್ತೀಲಿ ಹೆಚ್ಚಿನ ಅನುಭವ
ಇಲ್ದೇ ಇದ್ರೂ ಅಷ್ಟೊಂದು ಜನಪ್ರಿಯರಾಗಿದ್ರಿ ಅಂದ್ಮೇಲೆ_"
"ಏನು ಜನಪ್ರಿಯತೆಯೊ?"
"ಯಾಕಲ್ಲ? ಈಗ ನೋಡಿ, ನಮ್ಮ ಮುಖ್ಯೋಪಾಧ್ಯಾಯರು. ಎಲ್ಲರೂ ಆ