ಪುಟ:ನವೋದಯ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

396

ಸೇತುವೆ

ಸ್ಥಾನಕ್ಕೋಸ್ಕರ ಅವರಿಗೆ ಗೌರವ ಕೊಡ್ತಾರೆಯೇ ಹೊರತು,ಆ ಮನುಷ್ಯ ಸ್ವತಃ
ತಾವಾಗಿ ಜನಪ್ರಿಯರಾಗಿದಾರೇನು?"
ಎಷ್ಟೊಂದು ಬೇಗನೆ ಗುರಿ ಸಮೀಪಿಸಿತ್ತು ಮಾತಿನ ಸರಣಿ!
"ಎಲ್ಲರೂ ಒಂದೇ ರೀತಿ ಇರೋದಿಲ್ಲ."
"ಲಕ್ಕಪ್ಪ ಗೌಡರು ಸುಮ್ಮನಾಗಿ ಬಳಿಕ ಒಮ್ಮೆಲೆ ಹೇಳಿದರು:
"ನಾನು ಒಂದು ಮಾತು ಹೇಳ್ತೀನಿ. ದಯವಿಟ್ಟು ತಪ್ಪು ತಿಳ್ಕೋಬಾರದು."
ಹೇಳದಿದ್ದರೆ ಚೆನ್ನಾಗಿತ್ತು ಆ ಮಾತನ್ನು. ಆದರೂ-
“ಹೇಳಿ."
"ಯಾರ ಮೇಲಾದರೂ ಕತ್ತಿಮಸೀತಾನೇ ಇರಬೇಕು ನಂಜುಂಡಯ್ಯನವರಿಗೆ.
ಹಿಂದೆ ನಿಮಗೂ ಸಾಕಷ್ಟು ಹಿಂಸೆಕೊಟ್ಟಿದ್ದರಂತಲ್ಲ?"
"ನನಗೆ ಅದೊಂದೂ ಗೊತ್ತಿಲ್ಲ ಗೌಡರೆ. ನಾನು ಅಂಥದೆಲ್ಲ ನೆನಪಿಟ್ಟು
ಕೊಳ್ಳೋದಿಲ್ಲ."
ಜಯದೇವನ ಧ್ವನಿಯಲ್ಲಿ ಬೇಸರವಿದ್ದರೂ ಗೌಡರು ಗಮನಿಸದೆ ಮುಂದು
ವರಿದರು:
"ಹಿಂದೆಯೂ ಒಂದೆರಡು ಕಡೆ ಈ ಜನರನ್ನ ಕಂಡಿದೀನಿ ಸಾರ್. ಜಾತೀಯ
ವಾದ ಅಂದರೆ ಅವರಿಂದ ಕಲಿತ್ಕೋಬೇಕು."
ಈಗಲಾದರೂ ಸ್ಪಷ್ಟವಾಗಿ ತಾನು ಮಾತನಾಡಲೇಬೇಕೆಂದು ಜಯದೇವ
ತೀರ್ಮಾನಿಸಿದ.
"ಇಡೀ ಜಾತಿಯನ್ನೆ ಅನ್ನೋದಕ್ಕಾಗಲ್ಲ ಗೌಡರೆ. ಬ್ರಾಹ್ಮಣರಾದರೇನು ಲಿಂಗಾ
ಯತರಾದರೇನು ಕೆಟ್ಟವರು ಎಲ್ಲಾ ಕಡೇನೂ ಇರೋದಿಲ್ವೆ?"
[ಆ ಮಾತಿಗೆ 'ಒಕ್ಕಲಿಗರಾದರೇನು' ಎಂಬೊಂದು ಪದವನ್ನು ಸೇರಿಸಲಿಲ್ಲ ಆತ.]
"ಒಪ್ತೀನಿ. ಊರು ಇದ್ದಲ್ಲಿ ಹೊಲಗೇರಿ ಇದ್ದೇ ಇರುತ್ತೆ."
[ಗಾದೆಯೂ ಜಾತಿಗೆ ಸಂಬಂಧಿಸಿಯೇ. ಯಾರು ಹೊಲೆಯ? ಯಾರು?]
“ಏನೇ ಹೇಳಿ. ಈ ಜಾತೀಯ ಭಾವನೆಯೇ ನಮ್ಮ ರಾಷ್ಟ್ರಕ್ಕೊಂದು ಶಾಪ
ಅನಿಸುತ್ತೆ. ಅಬ್ಬ!"
“ಈಗ ನೋಡಿ. ಈ ಊರಲ್ಲಿ ಹೈಸ್ಕೂಲಾಗುತ್ತೆ ಅಂತ ನಿಮ್ಮನ್ನ ಕರೆ
ಸ್ಕೊಂಡಿದಾರೆ."
"ಇಲ್ವಲ್ಲಾ!”
ಆ ಮಾತನ್ನು ನಂಬದವರಂತೆ ಗೌಡರು ಜಯದೇವನನ್ನು ದಿಟ್ಟಿಸಿದರು.
"ಮತ್ಯಾಕೆ ಬಂದಿರಿ ಈ ಕೊಂಪೆಗೆ? ನಾಲ್ವತ್ತು ಮತ್ತು ಹದಿನೈದು ರೂಪಾಯಿ
ಸಂಬಳವೇ ಸಾಕಾದರೆ, ಬೇರೆಲ್ಲೂ ಸಿಗ್ತಿರ್‍ಲಿಲ್ವೆ? ಪದವೀಧರರಾದ್ಮೇಲೂ ಮಾಧ್ಯಾಮಿಕ
ಶಾಲೆಗೇ ಉಪಾಧ್ಯಾಯರಾಗಿ ಯಾರು ಬರ್‍ತಾರೆ ಹೇಳಿ?"