ಪುಟ:ನವೋದಯ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

404

ಸೇತುವೆ

ರಾಜು. ನೆರೆದವರ ಎದುರು ಅದನ್ನು ತಂದಿಟ್ಟವರು ಮನೆಹುಡುಗರು.
ಬೂಂದಿ ಲಾಡನ್ನು ನುಂಗಿ, ಖಾರಾ, ಶೇವನ್ನು ಕುರುಕುತ್ತಾ ಶಂಕರಪ್ಪ
ಹೇಳಿದರು:
“ನೀವು ತಿರ್‍ಗಾ ನಮ್ಮೂರಿಗೆ ಬಂದದ್ದು ನೋಡಿ ನಮಗೆಷ್ಟು ಸಂತೋಷ
ವಾಯ್ತೂಂತ."
"ತಮ್ಮ ಔದಾರ್ಯ," ಎಂದ ಜಯದೇವ.
“ಅಹ್ವಾನ ಪತ್ರಿಕೆ ಒಂದೆರಡು ದಿವಸ ಮೊದಲೇ ಬಂದಿದ್ರೆ ನಾವು ಮದುವೆಗೂ
ಬರ್‍ತಿದ್ವು. ಅಲ್ವೇನ್ರಿ ಮೇಸ್ಟ್ರೇ?"
"ಹೌದು ಶಂಕರಪ್ಪನವರು ಬಹಳ ಸಂಕಟ ಪಟ್ಕೊಂಡ್ರು. ಆ ದಿವಸ
ಯಾವುದೋ ಕಾರ್ಯಕ್ರಮವಿತ್ತು. ಹೊರಡೋಕಾಗಲಿಲ್ಲ," ಎಂದರು ನಂಜುಂಡಯ್ಯ.
ಆಗಲೇ ಬೇಸರ ಬಂದಿತ್ತು ಜಯದೇವನಿಗೆ. ಏನಾದರೂ ನೆಪ ಹೇಳಿ ಒಬ್ಬನೇ
ಬರದೆ, ಸುನಂದೆಯನ್ನೂ ಅಲ್ಲಿಗೆ ಎಳೆದು ತಂದೆನಲ್ಲ-ಎಂದು ಆತನಿಗೆ ಕೆಡುಕೆನಿಸಿತು.
ಸುನಂದಾ ಗಂಡನ ಪಕ್ಕದಲ್ಲೆ, ಅನಿವಾರ್ಯವೆನಿಸಿದಾಗ ಮಾತ್ರ ಇತರರನ್ನು
ನೋಡುತ್ತ, ಗಂಭೀರವಾಗಿ ಕುಳಿತಳು.
"ತಮ್ಮ ಅಧ್ಯಯನ ಎಲ್ಲಾಯ್ತು?"
"ಮಹಾರಾಣೀಸ್ ಕಾಲೇಜಿನಲ್ಲಿ."
ಆ ಅಧಿಕಾರಿಯ ದೊಡ್ಡಪ್ಪನ ಭಾವನೆ೦ಟನ ಮೈದುನನ ಮಗಳೂ ಅಲ್ಲಿಯೇ
ಓದಿದ್ದಳಂತೆ.
ಆ ಚಹಾ ಕೂಟ ಮುಗಿದು ಹಿಂತಿರುಗುವಾಗ ಸುನಂದಾ ಅಂದಳು:
"ಇನ್ನು ಅಂಥಾ ಕೂಟಗಳಿಗೆ ಕರಕೊಂಡು ಹೋದರೆ ನನ್ನಾಣೆ. ನನಗೆ ಅಸಹ್ಯ
ವಾಗುತ್ತೆ."
"ನನಗೆ ಮಾತ್ರ ಸಂತೋಷವಾಗುತ್ತೇಂತ ತಿಳಕೊಂಡ್ಯಾ? ನಾನು ಒಬ್ಬನೇ ಈ
ಊರಿಗೆ ವಾಪಸು ಬಂದಿದ್ರೆ ಇಷ್ಟೊಂದು ಉಪಚಾರವೂ ಇರ್‍ತಿರ್‍ಲಿಲ್ಲ, ಗೊತ್ತೆ?"
"ಅದೇನಿದ್ದರೂ ಇನ್ನು ಮುಂದೆ ನನ್ನನ್ನ ಕರೀಬೇಡಿ."
"ಎಲ್ಲಿಗೂ ಬರೋಲ್ವ?"
"ಎಲ್ಲಿಗೂ ಬರೋಲ್ಲ."
.......ಒಂದು ದಿನ ವಿರಾಮದ ವೇಳೆಯಲ್ಲಿ, ಉಪಾಧ್ಯಾಯರ ಕೊಠಡಿಯಲ್ಲಿ
ಜಯದೇವನೊಬ್ಬನೆ ಇದ್ದಾಗ, ಹುಡುಗಿಯೊಬ್ಬಳು ಅಲ್ಲಿಗೆ ಬಂದಳು. ಆತನ ಗಮನ
ವನ್ನು ಸೆಳೆದಿದ್ದ ಚುರುಕು ಹುಡುಗಿ. ಹೆಸರನ್ನೂ ಆಗಲೆ ಜಯದೇವ ಗುರುತಿಸಿದ್ದ.
ಚೂಡಾಮಣಿ.
"ಏನಮ್ಮ ಚೂಡಾ?"
ಅಳುಕು. ಸಂಕೋಚ. ಬಾಗಿಲಿಗೆ ಉಗುರಿನಿಂದೊಂದು ಗೆರೆ. ಬಳಿಕ_