ಪುಟ:ನವೋದಯ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

407

“ಏನು ಉತ್ತರ ಕೊಡೋಣ?"
ಇಂದಿರೆಯನ್ನು ನೋಡಬೇಕೆಂದು ಎಷ್ಟೊಂದು ತವಕಿಸುತ್ತಿದ್ದಳು ಸುನಂದಾ.
ಈಗ ಆ ಸಂದರ್ಭ ತಾನಾಗಿಯೇ ಒದಗಿ ಬಂದ ಹೊತ್ತಿನಲ್ಲಿ__
“ಬರೋದಿಲ್ಲ ಅನ್ನೋದಕ್ಕಾಗುತ್ತಾ?"
"ನಿನ್ನಿಷ್ಟ."
"ಭಾನುವಾರ ತಾನೆ ನಿಮಗೆ ಅನುಕೂಲ? ಹೋಗಿ ಬಂದ್ಬಿಡೋಣ."
ಜಯದೇವ ಗಟ್ಟಿಯಾಗಿ ನಕ್ಕ. ಸುನಂದಾ ಕೇಳಿದಳು:
“ಯಾಕೆ ನಗ್ತಿದೀರ?"
"ನೀನು ಒಪ್ತೀಯಾಂತ ನನಗೆ ಮೊದಲೇ ಗೊತ್ತಿತ್ತು."
"ಹ್ಯಾಗೆ?"
"ಇಂದಿರೇನ ನೋಡೋ ಕುತೂಹಲ ಇಲ್ದೆ ಇರುತ್ತ ನಿಂಗೆ?"
ಸುನಂದೆಯ ಗಲ್ಲ ಕಂಪಿಸಿತು. ನಿಂತಲ್ಲಿ ನಿಲ್ಲಲಿಲ್ಲ ತುಟಿಗಳು. ಮೂಗು
ಕುಣಿಯಿತು.
ಅದು ಜಯದೇವನಿಗೆ ಪರಿಚಯವಿದ್ದ ಕಾಹಿಲೆ.
ಬರಿದಾಗಿದ್ದ ಕಾಫಿಯ ಲೋಟವನ್ನು ಕೆಳಗಿರಿಸಿ ಆತ ಔಷಧೋಪಚಾರ
ಮಾಡಿದ.
ಎರಡು ನಿಮಿಷಗಳಲ್ಲಿ ಸುನಂದಾ ಮೊದಲಿನಂತೆಯೆ ಆದಳು. ಅಡುಗೆ ಮನೆ
ಯಲ್ಲಿದ್ದ ಕಾಫಿಯನ್ನು ತಂದು ಜಯದೇವ, ಲೋಟವನ್ನು ಆಕೆಯ ತುಟಿಗಳಿಗೆ
ಇರಿಸಿದ.
......ಭಾನುವಾರಗಳಲ್ಲೆಲ್ಲ 'ಜಯದೇವ ಮೇಸ್ಟ್ರ' ಮನೆಗೆ ಬೀಗ ಬೀಳುತ್ತಿದ್ದು
ದನ್ನು ಗಮನಿಸುತ್ತಿದ್ದ ನೆರೆಹೊರೆಯವರು ಎಂದಿನಂತೆ ಆ ಭಾನುವಾರವೂ ದಂಪತಿ
ಹೊರಬೀಳುವುದನ್ನು ಕಂಡರು.
'ಇವತ್ತು ಯಾರ ಮನೆಗೆ ಊಟಕ್ಕೆ ಹೊರಟಿದಾರೋ' ಎಂಬ ಚರ್ಚೆ ಅವ
ರೊಳಗೆ ನಡೆಯಿತು.
ಹಾದಿಯಲ್ಲಿ ಸುನಂದಾ ಕೇಳಿದಳು:
"ಒಂದು ಪ್ರಶ್ನೆ ಕೇಳ್ತೀನಿ. ಕೋಪಿಸ್ಕೋಬಾರ್‍ದು."
"ಕೇಳು."
"ಈ ಇಂದಿರಾ ಯಾವ ಜನ?"
"ನನಗೆ ಗೊತ್ತಿಲ್ಲ ಕಣೇ."
"ನಿಜವಾಗ್ಲೂ?"
"ಸುಳ್ಳು ಯಾಕೆ ಹೇಳ್ಲಿ?"
"ನನ್ನ ಮೇಲೆ ರೇಗಿ ಹಾಗೆ ಹೇಳ್ತಿದೀರಾ."