ಪುಟ:ನವೋದಯ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

409

ಮನೆಯಲ್ಲೆ ಅವಿತು ನಿಂತಳು.
ತಾಯಿಯೇ ಕರೆದು ಹೇಳಬೇಕಾಯಿತು:
"ಇನ್ನೂ ಸ್ವಲ್ಪ ಖೀರು ಬಡಿಸೇ ಇವರಿಗೆ."
ಆದರೆ ಖೀರು ಆ ಇಬ್ಬರಿಗೂ ಬೇಕಾಗಿರಲಿಲ್ಲ. ಒಬ್ಬರ ಹೊಟ್ಟೆಯಲ್ಲೂ ಜಾಗ
ವಿರಲಿಲ್ಲ.
ಸುನಂದಾ ಮನಸ್ಸಿಗೆ ಹೊಳೆದುದನ್ನು ಥಟ್ಟನೆ ನುಡಿದಳು:
"ಮನೆ ಬಿಟ್ಟು ಬಂದ್ಮೇಲೆ ಇದೇ ಮೊದಲ್ನೆಸಲ, ಇಷ್ಟು ಹಾಯಾಗಿ ಊಟ
ಮಾಡ್ತಿರೋದು.
"ಇಂದಿರೆಯ ತಾಯಿಗೆ ತಿಳಿಯಿತು, ತವರನ್ನು ಬಿಟ್ಟು ಬಂದಿದ್ದ ಆ ಹೆಣ್ಣಿನ
ಹೃದಯದ ಕಸಿವಿಸಿ.
ಆಕೆಯೆಂದರು:
"ಬೇಜಾರಾದಾಗೆಲ್ಲಾ ನಮ್ಮನೆಗೆ ಬಂದ್ಬಿಡಮ್ಮ. ನಾನು ಅಡುಗೆ ಮಾಡಿ
ಬಡಿಸ್ತೀನಿ."
ಸುನಂದೆಯ ಪಾಲಿಗೆ ಆ ಏಕವಚನದ ಸಂಬೋಧನೆ ಹೃದಯ ಸ್ಪರ್ಶಿಯಾಗಿತ್ತು.
ಜಯದೇವನಂದ:
"ಈಕೆ ಇಲ್ಲಿಗೆ ಬಂದರೆ ನನ್ನ ಗತಿ?"
"ಇದೆಯಲ್ಲ ಆನಂದ ವಿಲಾಸ ಹೋಟ್ಲು. ನೋಡಮ್ಮ ಹಿಂದೆ ನಾವೆಷ್ಟು
ಕರೆದ್ರೂ ಒಂದು ಸಲವಾದರೂ ಇವರು ಊಟಕ್ಕೆ ಬಂದಿದ್ರೆ ಕೇಳು."
ಆ ತಾಯಿ ಸುನಂದೆಗೆ ದೂರುಕೊಟ್ಟಳು. ಸುನಂದಾ ನಕ್ಕಳು. ಆಕೆಗೆ ತಿಳಿ
ಯದೆ, ಹಾಗೆಲ್ಲ ಹೋಗುವವನಲ್ಲ ತನ್ನ ಜಯದೇವ ಎಂದು-?
ಊಟವಾದ ಬಳಿಕ ಚಿಗುರೆಲೆ, ಸುವಾಸನೆಯ ಆಡಿಕೆಪುಡಿ, ಸುಣ್ಣ...
ಯಾವ ಪ್ರತಿಭಟನೆಗೂ ಜಗ್ಗದೆ ಸುನಂದಾ, ಇ೦ದಿರೆಗೆ ತಾನೇ ಬಡಿಸಿದಳು.
ಹೊರಗೆ ಹಜಾರದಲ್ಲಿ ಆರಾಮ ಕುರ್ಚಿಯಮೇಲೆ ಕುಳಿತು ಜಯದೇವ ಒಳಗಿನ
ಇಂಚರಗಳಿಗೆ ಕಿವಿಗೊಟ್ಟ...
ಇಂದಿರೆಯ ತಾಯಿ ಹೇಳಿದರು:
"ಹೈಸ್ಕೂಲು ಬೇಗ್ನೆ ಆಗುತ್ತಂತೆ. ಇಂದಿರಾನ ಸೇರ್ಸೋಣಾಂತಿದೀನಿ."
"ಹಾಗೇ ಮಾಡೀಮ್ಮಾ."
"ಆಗ ನೀವೂ ಅಲ್ಲಿ ಉಪಾಧ್ಯಾಯರಾಗ್ತೀರಿ, ಅಲ್ವೆ?"
"ಇನ್ನೂ ಯಾವುದೂ ಗೊತ್ತಿಲ್ಲ. ಮುಕ್ಕಾಲುಪಾಲು ಆಗಬಹುದು."
ಕೇಳುವ ಸಹೃದಯಿಗೋಸ್ಕರ ಕಾದಿದ್ದರೇನೋ ಎನ್ನುವಂತೆ ಇಂದಿರೆಯ ತಾಯಿ
ಮಾತುಕತೆಯ ನಡುವೆ ಸ್ವವಿಷಯವನ್ನೂ ಹೇಳಿದರು. ಇಂದಿರೆಗೆ ಬಡಿಸುತ್ತಿದ್ದ.

52