ಪುಟ:ನವೋದಯ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

412

ಸೇತುವೆ

ಸ್ವಲ್ಪ ಹೊತ್ತು ಸುಮ್ಮನಿದ್ದು ಸುನಂದಾ ಅಂದಳು:
"ಇಂದಿರಾ ಒಳ್ಳೇ ಹುಡುಗಿ."



ವಿರಾಮದ ವೇಳೆಯಲ್ಲಿ ಜಯದೇವನಿಂದೊಂದು ಸಂದೇಶವನ್ನು, ಪ್ರಾಥಮಿಕ
ಶಾಲೆಯ 'ತಿಮ್ಮಯ್ಯ ಮೇಷ್ಟ್ರಿ'ಗೆ ಮಾಧ್ಯಮಿಕ ಶಾಲೆಯ ಜವಾನ ಒಯ್ದು ತಲಪಿಸಿದ:
'ಶಾಲೆ ಮುಗಿದಮೇಲೆ ಸ್ವಲ್ಪ ಹೊತ್ತು ಅಲ್ಲೇ ಇರಬೇಕಂತೆ. ಜಯದೇವ
ಮೇಸ್ಟ್ರು ಬರ್ತಾರಂತೆ.'
ಅದಕ್ಕೆ ಪ್ರತ್ಯುತ್ತರ ಬಂತು:
'ತಾವೇ ಅಲ್ಲಿರಬೇಕು. ನಾವೇ ಬರುವಂಥವರಾಗ್ತೇವೆ.'
ಸಂಜೆ ಶಾಲೆ ಬಿಟ್ಟು ಎಲ್ಲರೂ ಹೋದಮೇಲೂ ಜಯದೇವ ಕಾದು ನಿಂತ.
ತಿಮ್ಮಯ್ಯನವರು ಬೇಗ ಬೇಗನೆ ಕಾಲುಹಾಕುತ್ತ ಬಂದರು. ನೀಳವಾದ ಕೂದಲನ್ನು
ಮುಚ್ಚಿದ್ದುದು, ಎರಡು ವರ್ಷಗಳ ಹಿಂದೆ ತಾನು ಕಂಡಿದ್ದ ಟೋಪಿಯೇ. ಆದೇ
ಹಳೆಯ ಕೋಟು. ಪಂಚೆ ಯಾವೂದೋ ಹೇಳುವಂತಿರಲಿಲ್ಲ. ಎಂದಿನಂತೆ ಮಾಸಿತ್ತು.
ಎಡ ಕಂಕುಳಲ್ಲಿತ್ತು ಛತ್ರಿ.
ಅಂಗಳದ ಬೇಲಿಯ ಹೊರಗೇ ತಮಗೋಸ್ಕರ ನಿಂತಿದ್ದ ಜಯದೇವನನ್ನು
ಕಂಡು, ತಿಮ್ಮಯ್ಯ ದೂರದಿಂದಲೆ ವಂದಿಸಿದರು. ತನಗೆ ಪ್ರಿಯವಾಗಿದ್ದ ಆ ಜೀವ
ವನ್ನು ಇದಿರ್ಗೊಳ್ಳಬೇಕೆಂದು ಜಯದೇವನೂ ನಿಂತಲ್ಲಿಂದ ಮುಂದಕ್ಕೆ ಚಲಿಸಿದ.
ಜಯದೇವ ಹತ್ತಿರ ಬಂದಂತೆ ತಿಮ್ಮಯ್ಯನಿಗೆ ಸಂಕೋಚವೆನಿಸಿತು. ಅವರಿಬ್ಬರ
ಮುಖದಮೇಲೆ ಮಗುತನದ ನಗೆ ಮೂಡಿತು. ಎದುರುಬದುರಾಗಿ ಅವರು ನಿಂತಾಗ
ತಿಮ್ಮಯ್ಯ, ತಮ್ಮ ಎರಡೂ ಕೈಗಳಿಂದ ಜಯದೇವನ ಬಲ ಅಂಗೈಯನ್ನು ಎತ್ತಿ
ಆಡಿಸಿದರು.
"ಆಹಾ! ಸಿಕ್ಕಿಯೇ ಬಿಟ್ಟಿರಿ! ಈ ಬಡವನನ್ನ ಮರೆತೇ ಬಿಟ್ಟಿದ್ರೀಂತ ಕಾಣ್ತದೆ
ನೀವು. ಬಂದು ಇಷ್ಟು ದಿನವಾದರೂ ಮುಖ ತೋರಿಸ್ದೆ ಇರೋದೆ?"
"ಇಲ್ಲ ತಿಮ್ಮಯ್ಯನವರೇ, ಬಂದ ದಿವಸವೇ ನಂಜುಂಡಯ್ಯನವರನ್ನ ನಿಮ್ಮ
ವಿಷಯ ವಿಚಾರಿಸ್ದೆ."
"ಅದೇನೋಪ್ಪ. ನಾನು ಸಮಯಕ್ಕೆ ಸರಿಯಾಗಿ ಬಂದು ಶಾಲೆ ಮುಗಿದ ತಕ್ಷಣ
ಹಳ್ಳಿಗೆ ಹೋಗೋನು. ಈ ಊರಿಗೆ ಯಾರು ಬಂದ್ರು ಯಾರು ಹೋದ್ರೂಂತ ನನಗೆ
ಎಂಗೊತ್ತಾಗ್ಬೇಕು? ಮೊನ್ನೆ ಶನಿವಾರ ದಾರೀಲಿ ನಿಲ್ಲಿಸ್ಬಿಟ್ಟು ಯಾರೋ ಹೇಳಿದ್ರು-