ಪುಟ:ನವೋದಯ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

413

ಜಯದೇವ ಮೇಸ್ಟ್ರು ಬಂದಿದಾರಲ್ಲಾ, ನೋಡಿಲ್ವಾ? _ ಅಂತ. ನೀವು ಲಗ್ನಪತ್ರಿಕೆ
ಕಳಿಸಿದ್ರೇ ಹೊರ್ತು ಬರೋ ವಿಷಯ ತಿಳಿಸಿದ್ರಾ? ನನಗ್ಗೊತ್ತಿಲ್ದೆ ನೀವು ಹ್ಯಾಗ್ಬ
ರೋದು ಸಾಧ್ಯ ಅಂತ _ ಛೆ ಛೆ ಇನ್ಯಾರೋ ಇರ್ಬೇಕು _ ಅಂದ್ಬಿಟ್ಟೆ. ಆತ ಒಂದು
ರೂಪಾಯಿ ಪಂಥ ಅಂದ. ದುಡ್ಡೆಲ್ಲಿಂದ ತರೋಣ? ಇದ್ದರೂ ಇರಬಹುದೂಂತ
ಸುಮ್ನಾದೆ. ನಮ್ಮ ಹೆಡ್ಡಮೇಸ್ಟ್ರಿಗಂತೂ ಏನೂ ಗೊತ್ತಿರ್ಲಿಲ್ಲ. ಆವತ್ತು ಸಾಯಂಕಾಲವೇ
ಬರೋಣ ಅಂದ್ರೆ ಮಳೆರಾಯ ಅಡ್ಡಗಾಲಿಟ್ಟ. ನಿನ್ನೆ ನಿಮಗೋಸ್ಕರವೆ ಬಂದೆ. ಆದರೆ
ಯೋಗ ಇರ್ಬೇಕಲ್ಲ....ಹುಂ...ಅಂತೂ ಇವತ್ತು ಸಿಕ್ಬಿಟ್ರಿ!"
ಅವರ ಹಿಡಿತದಿಂದ ಮೆಲ್ಲನೆ ತನ್ನ ಕೈಯನ್ನು ಜಯದೇವ ಬಿಡಿಸಿಕೊಂಡ.
"ಬನ್ನಿ ತಿಮ್ಮಯ್ಯನವರೇ, ನಮ್ಮ ಮನೆಕಡೆಗೆ ಹೋಗೋಣ."
"ನಡೀರಿ. ಅಮ್ಮಣ್ಣಿಯವರನ್ನು ನಾನು ಕಾಣ್ಬೇಕು."
ನಂಜುಂಡಯ್ಯನವರ ನವುರು ರಾಜನೀತಿಗಿಂತ, ಲಕ್ಕಪ್ಪಗೌಡರು ಒರಟು ರಾಜ
ಕೀಯಕ್ಕಿಂತ, ಈತನ ವ್ಯಕ್ತಿತ್ವ ಎಷ್ಟೊಂದು ಭಿನ್ನ! ನಡೆಯುತ್ತಿದ್ದಂತೆ ತಿಮ್ಮಯ್ಯನ
ಕಡೆಗೆ ದೃಷ್ಟಿ ಬೀರಿದಷ್ಟೂ ಜಯದೇವನಿಗೆ ಸಾಕೆನಿಸುತ್ತಿರಲಿಲ್ಲ.
ಆತ ಕೇಳಿದ:
"ಹೊಸ ನಾಟಕ ಯಾವುದು ಬರೆದಿದೀರಾ ಇತ್ತೀಚೆಗೆ?"
"ನೀವು ಹೋದ್ಮೇಲೆ ಎರಡು ವರ್ಷಗಳಲ್ಲಿ ಒಂದು ನರಪ್ರಾಣಿಯಾದರೂ ನನಗೆ
ಇಂಥ ಪ್ರಶ್ನೆ ಕೇಳಿದ್ದರೆ! ಅಯ್ಯೋ!"
ಎದೆ ಕುದಿತದ ಮಾತು. [ಸಾಕಪ್ಪಾ ಸಾಕು!]
"ಕೃಷ್ಣಪ್ರೇಮ ಆವತ್ತು ಆಡಿದೆವಲ್ಲ. ಈಗಲೂ ಅದು ನನ್ನ ಕಣ್ಣ ಮುಂದೆ
ನಡೀತಿರೋ ಹಾಗಿದೆ."
"ಸರಿ. ನೀವೊಬ್ಬರು ಹೊಗಳ್ತಾ ಇರಿ. ನಾನು ಕೇಳ್ತಾ ಇ‍ರ್‍ತೀನಿ."
“ನಾಟಕದ ವಿಷಯ ಇಷ್ಟವಿಲ್ದೆ ಹೋದರೆ ಈಗ್ಬೇಡ; ಆ ಮೇಲೆ ಮಾತಾ
ಡೋಣ. ಮನೋರವೆು ಹ್ಯಾಗಿದಾರೆ ಹೇಳಿ?"
"ಮನೋರವೆು?"
"ಹೂ೦ ಕಣ್ರೀ."
"ಓಹೋ__ನನ್ನ ಮನೋರಮೇನೋ? ಆ ಕೀರ್ತಿಶಾಲಿಯ ಹೆಸರನ್ನ ನನ
ಗ್ಯಾಕಪ್ಪ ಅಂಟಿಸ್ತೀರಾ? ನನ್ನ ಸೌಭಾಗ್ಯವತಿ ಇದಾಳೆ. ಈ ಆವಧಿಯಲ್ಲಿ ಸಂತಾ
ನಾಭಿವೃದ್ಧಿಯಾಗಿದೆ. ಗಂಡು. ನಾಟಕದ ಖಯಾಲಿಯಿಂದ ಕೆಟ್ಟು ಹೋದ್ರೀಂತ
ಈಗಲೂ ಬಯ್ತಾ ಇರ್ತಾಳೆ. ಎಂಥ ಹುಚ್ಚು ನೋಡಿ. ನಾಟಕದ ಖಯಾಲಿ
ಇಲ್ದೇನೆ ಕೆಟ್ಟು ಹೋಗಿರೋ ಬೇರೆ ಪ್ರಾಥಮಿಕ ಉಪಾಧ್ಯಾಯರು, ಬಡವರಾಗಿ
ರೋರು, ಇಲ್ವೇಂತ? ಅಷ್ಟೂ ಬುದ್ಧಿಬೇಡ್ವೆ ಆಕೆಗೆ?"
ಸಂಸಾರಸಮಸ್ಯೆಯ ವಿಷಯ ಗಹನವಾಯಿತೆಂದೋ ಏನೋ ತಿಮ್ಮಯ್ಯ ಡಬ್ಬ