ಪುಟ:ನವೋದಯ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

414

ಸೇತುವೆ

ದಿಂದೊಂದು ಚಿಟಿಕೆ ನಶ್ಯ ಹೊರತೆಗೆದು ಮೂಗಿಗೇರಿಸಿ ನುಡಿದರು:
"ಹುಂ! ಅಂತೂ ಈ ಊರಿಗೇ ವಾಪಸು ಬಂದ್ರಿ. ನೀವು ಬರಬಹುದೂಂತ
ನಾನು ಕನಸ್ನಲ್ಲೂ ಭಾವಿಸಿರ್ಲಿಲ್ಲ."
"ಯಾಕೆ?"
"ಈ ನೀಚರು ಅಷ್ಟೊಂದು ಹಿಂಸೆ ಕೊಟ್ಟಿರ್ಲಿಲ್ವೆ ನಿಮಗೆ?"
"ಮರೆತ್ಬಿಡಿ ಅದನ್ನೆಲ್ಲ."
"ಯಾಕೆ ಮರೀಲಿ? ಹ್ಯಾಗೆ ಮರೀಲಿ? 'ನೊಂದ ಜೀವ' ಅಂತ ನಾನೊಂದು
ಕತೆ ಬರೆದಿದೀನಿ ಅದೇ ವಿಷಯದ ಮೇಲೆ."
"ಹೌದೆ?"
"ತಾಳಿ. ಇವರಿಗೆಲ್ಲ ಮಡಗಿದೀನಿ. ಸಮಯ ಬರ್ಲಿ. ಒಂದು ನಾಟಕ ಬರೆದು
ಇವರ್ನೆಲ್ಲ ಝಾಡಿಸ್ದೇ ಇದ್ರೆ ಆಮೇಲೆ ಹೇಳಿ."
"ನಿಮಗೆ ಸಿಟ್ಟು ಬಂದಾಗ ನೋಡೋಕೆ ಚೆನ್ನಾಗಿರುತ್ತೆ.”
"ಅಯ್ಯೋ! ನನ್ನ ಸಿಟ್ಟಿಗಿಷ್ಟು ಬೆಂಕಿ...ಈಗ ಹೇಳಿ. ಪರೀಕ್ಷೆ ಪಾಸಾಯ್ತೆ?"
“ಆಯ್ತು."
"ಡಿಗ್ರಿ ಮನುಷ್ಯನಾಗೆ ಬಿಟ್ರಿ."
“ಏನು ಡಿಗ್ರಿಯೊ? ಅಂತೂ ಮುಗಿಸ್ಕೊಂಡ್ಬಿಟ್ಟೆ."
"ಇನ್ನು ನೀವು ೬೦-೫-೯೦ ರ ಗ್ರೇಡಿನೋರು. ಈ ಊರಲ್ಲಿ ಯಾಕಿರ್ತೀರಾ
ಹೇಳಿ..."
"ಇರ್‍ತೀನಿ ತಿಮ್ಮಯ್ಯ; ಇರೋಕೆಂತಲೇ ಬಂದಿದೀನಿ."
"ನಂಜುಂಡಯ್ಯನವರ ಹೈಸ್ಕೂಲಾದರೆ ಅಲ್ಲಿಗೆ ಸೇರ್‍ಕೋಬಹುದು."
"ಆದಾಗ ಸೇರಿದರಾಯ್ತು."
“ಅಂತೂ ಈ ಊರಲ್ಲೇ ಇರ್‍ತೀರಿ ತಾನೆ?"
"ಖಂಡಿತವಾಗಿಯೂ ಇರ್‍ತೀನಿ."
ಆ ಆಶ್ವಾಸನೆಯಿಂದ ತಿಮ್ಮಯ್ಯನಿಗೆ ಸ್ವಲ್ಪ ಸಮಾಧಾನವೆನಿಸಿತು. ಎಡ ಕಂಕು
ಳಲ್ಲಿದ್ದ ಛತ್ರಿಯನ್ನವರು ಬಲ ಕಂಕುಳಿಗೆ ತುರುಕಿಸಿ ನಡೆದರು.
“ಸಂಜೆ ಮಳೆಬಂದ್ಬಿಟ್ರೆ ಹಳ್ಳಿಗೆ ಹೋಗೋಕೆ ಕತ್ಲೇಲಿ ತೊಂದರೆಯಾಗುತ್ತಲ್ವ?”
ಎಂದ ಜಯದೇವ, ಮನೆ ಸಿಮೀಪಿಸಿದಂತೆ.
"ಏನು ಮಳೆಯೋ ಏನು ಹಳ್ಳಿಯೋ. ಹೋದರಾಯ್ತು ಬಿಡಿ. ನೀವು
ಸಿಕ್ಕಿರೋ ದಿವಸ ಏನಾದ್ರೇನು?"
ಜಯದೇವ ಬರುವುದು ತಡವಾಯಿತೆಂದು ಸುನಂದಾ ಬಾಗಿಲಲ್ಲೆ ನಿಂತಿದ್ದಳು.
ತಡವಾದುದಕ್ಕೆ ಆತನ ಮೇಲೆ ರೇಗಬೇಕೆಂದು ನಿರ್ಧರಿಸಿ, ಆಡಬೇಕಾದ ಮಾತುಗಳನ್ನು
ಕಲೆಹಾಕಿದ್ದಳು. ಆದರೆ ಆಕೆಯ ದೃಷ್ಟಿಗೆ ಜಯದೇವನೊಬ್ಬನ ಬದಲು ಇಬ್ಬರು