ಪುಟ:ನಿರ್ಯಾಣಮಹೋತ್ಸವ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ಸವ. ೧೧೬ ಇಂಥ ಘನವಾದ ಯೋಗ್ಯತೆಯು ಸತ್ಯ ಸ್ಥರಾದ ಶ್ರೀ ಚಿದಂಬರಮತಿ ಗಳ ಯೋಗ್ಯತೆಯನ್ನು ಅಗ್ರಹಾರದ ಹೊರಗಿನವರಂತು ಇರಲಿ, ಅಗ್ರಹಾರದೊಳ ಗಿನವರಾದ ರಾ ತಿಳಿದುಕೊಂಡಿರುತ್ತೀರೇನೆಂದು ವಾಚಕರು ಕೇಳಬಹುದು ; ಆದರೆ ಲೌಕಿಕಾಡಂಬರಾಸಕ್ತರಾದ ಆನಂದವನಸ್ಥರು ನಾವು, ಲೋಕ ಪ್ರಸಿದ ರಾಗಿದ್ದ ಶ್ರೀ ಗುರುಗಳ ನಿಜವಾದ ಯೋಗ್ಯತೆಯನ್ನು ತಿಳಕೊಂಡಿದ್ದ ರಷ್ಯ ಮೂಲೆಯೊಳ ಗಿನ ಶ್ರೀ ಚಿದಂಬರಮೂರ್ತಿಗಳ ಯೋಗ್ಯತೆಯನ್ನು ತಿಳಿದುಕೊಳ್ಳುವದು | ನಮಗ ಬೇಕು ಲೋಕರಂಜನ-ಲೋಕ ಪ್ರತಿಷ್ಠೆ-ಇಲ್ಲದ ಹಿರಿಯತನ-ಎಂದೂ ದಕ್ಕಲಾ ರದ ಆನಂದವನದ ಯಾಜಮನ-ಅತ್ಯುಚ್ಛ ಸಾಧುಪದವಿ ! ಇಂಥ ವಾಸನಾಸ ರರು, ವಾಸನಾರಹಿತರಾದ ಶ್ರೀ ಚಿದಂಬರಮ ರ್ತಿಗಳ ಯೋಗ್ಯತೆಯನ್ನು ಆರಿ ಯುವೆವೇ ? ಲೇಖಕನು ಆನಂದವನಕ್ಕೆ ಬಂದು ಎಂಟು ವರ್ಷಗಳಾದರೂ ತನ್ನ ಕಾರ್ಯಾಡಂಬರದಲ್ಲಿ ಮಗ್ನನಾಗಿದ್ದನಲ್ಲದೆ, ಶ್ರೀ ಚಿದಂಬರಮೂರ್ತಿಗಳ ಯೋ ಗ್ಯತೆಯನ್ನು ಕಣ್ಣೆರೆದು ನೋಡಲಿಲ್ಲ, ಅಹಂಭಾವದ ಜನರ ಸಂಗಡ ನಿರರ್ಥಕ ಜಗಳಾಡುವದರಲ್ಲಿ ಅವನಿಗೆ ಕೂಡಿದರಷ್ಟೆ ಶ್ರೀ ಚಿದಂಬರವಾರ್ತಿಗಳನ್ನು ನೋ ಡುವದು ಮುಚ್ಚುವದೇಕೆ ? ಮೂರ್ತಿಗಳನ್ನು ನೋಡುವ ಕಣ್ಣುಗಳೇ ಲೇಖಕ ನಲ್ಲಿ ಇಲ್ಲವೆಂದು ನಿರ್ಭಿಡೆಯಿಂದ ಚಂಕೆಯು ಬರೆಯುವಳು, "ಚಂದ್ರಿಕೆಯಲ್ಲಿ ಲೇಖಬರೆಯುವ ಪ್ರಸಂಗ ಬಂದದ್ದರಿಂದ, ಚಂದ್ರಿಕೆಯ ಪ್ರಸಾದದಿಂದ ಆತನಿಗೆ ಅಷ್ಟ ರಮಟ್ಟಿಗೆ ಆ ಕಣ್ಣುಗಳು ಬಂದಿರಲು, ಆ ಕಣ್ಣುಗಳನ್ನು ಮುಚ್ಚದೆ ಮೂರ್ತಿಗಳ ವೃತ್ತಿಯನ್ನು ಲೇಖಕನು ಅವಲೋಕಿಸುತ್ತ, ಅದರಂತೆ ತನ್ನ ವೃತ್ತಿಯನ್ನು ಸುಧಾರಿಸಿ ಕೊಳ್ಳುತ್ತ ಹೋದರೆ, ಆತನು ಆನಂದವನಕ್ಕೆ ಬಂದದ್ದರ ಸಾರ್ಥಕವಾಗಬಹುದು, ಲೇಖಕನದೃಷ್ಟಿಗಳುಮೂರ್ತಿಗಳ ಕಡೆಗೆ ತಿರುಗಿದ ಪ್ರಸಂಗವನ್ನು ಲೇಖಕನು ಮೂಡಿದೆ ಇಲ್ಲಿ ಹೇಳುವನು-ಈಗ ಸರಾ ಸಂವರ್ಷದ ಹಿಂದೆ ಕಾರ್ಯಾರ್ಥಿಯಾದ ಲೇಖಕನು, ಪಾಠಶಾಲೆಯಲ್ಲಿ ಅಧ್ಯಾಪನ ಕಾರ್ಯ ಮೂಡ್ಯಾರೆ೦ಬ ಆಶೆಯಿ೦ದಲ ಚಂದ್ರಿಕೆಯಲ್ಲಿ ಲೇಖಬರೆದರೆಂಬ ಅತ್ಯಾಶೆಯಿ೦ದಲೂ, ಭಾಗವತಾದಿ ಸಂಸ್ಕೃತಪುರಾಣಗ್ರಂಥಗಳ ಭಾಷಾಂತರ ಮೂಡ್ಯಾರೆಂಬ ದುರಾಶೆಯಿಂದಲೂ, ವೇ. ಶಾ, , ರಾ, ಶ್ರೀಕಂಠ ಶಾಸ್ತ್ರಿಗಳ ಪ್ರಸನ್ನತೆಗಾಗಿ ಅವರನ್ನು ತಾನಿದ್ದಲ್ಲಿ ಗೆಕರೆ ತ೦ದು, “ಎಡಿಯಲಿಕ್ಕೆ ಅವರಿಗೆ ಹಾಲು ಕೊಡುತ್ತಿದ್ದನು, ಅವರನ್ನು ಕರೆಯಲಿಕ್ಕೆ ಹೋದಾಗ ಶ್ರೀ ಚಿದಂಬರಮಾರ್ತಿ ಗಳು ಆಗಾಗ್ಗೆ ಆತನ ಕಣ್ಣಿಗೆ ಬೀಳುತ್ತಿದ್ದರು, ಹೀಗೆ ಕೆಲವುದಿನಗಳಾದ ಬಳಿಕ ಶ್ರೀ ಮೂರ್ತಿಗಳಿಗಾ ಹಾಲುಕೊಡಬೇಕೆಂಬ ಮನಸ್ಸು ಆಗಲು ಲೇಖಕನುಅವರಿದ್ದಲ್ಲಿ ಗ