ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಸಬ್ಬೋಧ ಚಂದ್ರಿಕೆ' ಬಹುಮಾನವಾಚಕ ಶಬ್ದಾದಿಗಳ ಸಂಪಾದನಕ್ಕಾಗಿ ಆತನ ಯತ್ನವು ನಡೆಯತೊಡಗ ಲು, ಕರ್ತವ್ಯಭ್ರಷ್ಟತೆಯ ರೋಗವು ಉದ್ಭವಿಸಿ, ಅದರಿಂದ ಆತನ ಸತ್ವ ನಾಶವಾಗುತ್ತ ಹೋಗಿ, ಆತನು ಟೊಕಳಿಡಾದ ದೊಡ್ಡ ಮೊದಮರದಂತಯಾ, ಸಿಕ್ಕಿ ಮೆರೆಯುವ ಕವಲೆತ್ತಿನಂತೆಯ ಲೋಕಾಡ೦ಬರವನ್ನು ತೋರಿಸು, ಸಿ೦ಹನ ಸೋಗಿನಿ೦ದ ನರಿಯು ಗರ್ಜಿಸಿದಂತೆ ಗರ್ಜಿಸಿ, ಲೋಕವನ್ನು ಬೆದರಿಸತೊಡಗುವನು. ಆತನು ಅತ್ಯ೦ತಸ್ತೋತ್ರಿಯನೂ, ಆತ್ಮಶ್ಲಾಘನಾತತ್ಪರನೂ ಪರನಿಂದಾಪ್ರವೀಣನ ಆಗುವನು, ಆತನು ಅಹಂಕಾರಿಯಾಗಿ ಧರ್ಮವನ್ನು ಅಧರ್ಮವಾಗಿಯ, ಅಧರ್ಭವನ್ನು ಧರ್ಮವಾಗಿಯ ಕಲ್ಪಿಸಿ, ತಾನು ಕೆಡುವದಲ್ಲದೆ, ತನ್ನ ಬಲೆಗೆ ಬಿದ್ದ ಎಲ್ಲ ವ್ಯಾಪಾರಸ್ಪರನ್ನೂ ಕಡಿಸುವನು, ಮುಖ್ಯ ಮಾತು, ವ್ಯಾಪಾರದಲ್ಲಿ ಲಾಭ ವಾಗಿ ತನ್ನ ಪ್ರತಿಷ್ಠೆ ಹೆಚ್ಚಿದರೆ ತೀರಿತೆಂದು ಆತನು ಭಾವಿಸುವನು, ಆತನ ಊಟ-ಉಡಿಗೆ, ದಾನ-ಧರ್ಮ ಮೊದಲಾದವುಗಳಲ್ಲಿ ಡಾಂಭಿಕತನವೂ, ವ್ಯವಹಾರ ದಲ್ಲಿ ಮೋಸ- ಮೈ ಗಳ್ಳತನಗಳೂ ತಲೆದೋರುವವು , ಈ ಕಾಲದಲ್ಲಿ ಆತನು ಕೆಲವರಿಗೆ ಸರಿಯಾದ ಕಲ್ಲ.ತಕ್ಕಡಿಗಳು-ಕೆಲವರಿಗೆ ಬೆಟ್ಟ ಕಲ್ಲ..ತಕ್ಕಡಿಗಳು, ಕೆಲವರಿಗೆ ಒಳ್ಳೆಯ ಪದಾರ್ಥಗಳ -ಕೆಲವರಿಗೆ ಕೆಟ್ಟ ಪದಾರ್ಥಗಳು , ಕೆಲವರಿಗೆ ಮೈದುನುಡಿಗಳು-ಕೆಲವರಿಗೆ ಬಿರಿನುಡಿಗಳು , ಕೆಲವರಿಗೆ ವಂಗೂಲತೂಕ-ಕೆಲ ವರಿಗೆ ಹಿಂಗೋಲ ಶಕ, ಒಂದದಿನ ಹೊತ್ತಿಗೆ ಸರಿಯಾಗಿ ಕೆಲಸಮಾಡಿದರೆ, ನಾಲ್ಕು ದಿನ ಹೊತ್ತು 'ಸ್ಪಿ ಕೆಲಸಮಾಡುವದು , ಒಂದು ಕಡೆಯಲ್ಲಿ ವ್ಯವಸ್ಥೆ ತೋರಿದರೆ ಒಂದು ಕಡೆಯಲ್ಲಿ ಅವ್ಯವಸ್ಥೆ, ಒy ಗೆ ಪ್ರಾಮಾಣಿಕತನ, ಇನ್ನೊ ಟ್ವಿಗೆ ಅಪ್ರಾಮಾಣಿಕತನ, ಹೀಗೆ ಒಂದು ಕಣ್ಣಲ್ಲಿ ಬೆಣ್ಣೆ, ಒಂದು ಕಣ್ಣಲ್ಲಿ ಸುಣ್ಣ” ಎಂಬಂತೆ, ಹೊತ್ತು ಬಿದ್ದ ಹಾಗೆ ಕೊಡೆ ಹಿಡಿಯುವನು 'ಸಾರಾಂಶ ಈ ಯುಗದಲ್ಲಿ ದುರಭಿಮಾನಜನಿತ ಸ್ವಾರ್ಥದ ಸಾಮ್ರಾಜ್ಯವು ದೃಢವಾಗಿ, ಶನ್ನ ಹೋಳಿಗೆ ತುಪ್ಪದಲ್ಲಿ ಬಿದ್ದ ರಾಯಿತು ಮಂದಿ ಸಾಯಲಿಲ್ಲವೇಕೆ೦ಬ ಸಿದ್ಧಾಂತವು ಮಾನ್ಯವಾಗಿ ಅಹಂಭಾವವು ಬೆಳೆದು, ಸತ್ಯ ದನಾಶವು ಭರದಿಂದ ಆಗಹತ್ತಿ ಆ ವ್ಯಾಪಾರಸ್ಥನ ಲೋಕಮಾನ್ಯ ತೆಯು ನಷ್ಟ ವಾಗಹತ್ತುವದು , ಕಲಿಯುಗದ ಈ ಸತ್ಯಾಸತ್ಯ ಮಿಶ್ರಣದ ಆ ವ್ಯಾಪಾರಸ್ಥನ ವ್ಯವಹಾರವು ಕೇವಲ ಅಸತ್ಯವನ್ನು ಆಶ್ರಯಿಸ. ಹತ್ತಿತೆಂದರೆ, ಕಲಿಕಾಲವು ಹೋಗಿ ಆತನ ನಾಶಕಾಲವು ಪ್ರಾರಂಭವಾಯಿತೆಂದು ಹೇಳಬಹುದು. ಕೇವಲ ಶೆಟ್ಟಿ ಕಲ್ಲು ತಕ್ಕಡಿಗಳು ಗಿರಾಕಿಗಳೊಡನೆ ಉದ್ಧಟ ಶನ, ಅವ್ಯವಸ್ಥೆ, ಆಲಸ್ಯ, ದುರಾಲೋಚನೆ, ಅಪ್ರಾಮಾಣಿಕತನ, ದುಷ್ಟ ಸಹ