ಸುಹೃಲ್ಲಾಭವು. 85 Generosity, ಅದನ್ನು ಕೇಳಿ ಕೂರ್ಮವು ಹಿರಣ್ಯಕನನ್ನು ನೋಡಿಯಾ ವನು ಹಂಸಗಳನ್ನು ಬೆಳ್ಳಗೆ ಮಾಡಿದನೋ, ಯಾವನು ಗಿಣಿಗಳನ್ನು ಹಚ್ಚಗೆ ಮಾಡಿದನೋ, ಯಾವನು ನವಿಲುಗಳನ್ನು ಚಿತ್ರವರ್ಣವುಳು ವುಗಳಾಗಿ ಮಾಡಿದನೋ ಅವನು ಸರ್ವಪ್ರಾಣಿಗಳಿಗೂ ಜೀವನವನ್ನು ಉಂಟುಮಾಡುತ್ತಾನೆ. ಹುಟ್ಟಿದಾಗಲೇ ಧನಸಂಪತ್ತುಗಳೊಡನೆ ಹುಟ್ಟಿದ ಮನುಷ್ಯನು ಒಬ್ಬನೂ ಇಲ್ಲ; ಉಂಟಾದ ಸಂಪತ್ತು ಗಳನ್ನೆಲ್ಲಾ ನೂರು ಸಂವತ್ಸರದ ತನಕ ವಿನೋದವಾಗಿ ಅನುಭವಿಸಿದವನೂ ಇಲ್ಲ. ಪೂರ್ವ ಜನ್ಮದಲ್ಲಿ ಒಬ್ಬರಿಗೆ ತಾನೇನ ಕೊಟ್ಟಿದ್ದನೋ ಅದು ಈ ಜನ್ಮದಲ್ಲಿ ತನಗೆ ಪ್ರಾಪ್ತವಾಗುವುದು. ಆದಕಾರಣ ತನ್ನ ಶಕ್ತಿಗೆ ತಕ್ಕಷ್ಟು ದಾನಮಾಡ ಬೇಕು, ದಾನಕ್ಕೆ ಸಮಾನವಾದ ನಿಕ್ಷೇಪವಿಲ್ಲ; ಸಂತೋಷಕ್ಕೆ ಸಮ ವಾವ ಸುಖವಿಲ್ಲ; ಸದಾಚಾರಕ್ಕೆ ಸರಿಯಾದ ಭೂಷಣವಿಲ್ಲ; ಆರೋ ಗ್ರಕ್ಕೆ ಈಡಾದ ಲಾಭವಿಲ್ಲ. ಏತಕ್ಕೆ ಬಹಳ ಮಾತುಗಳನ್ನಾಡಬೇಕು ? ನೀನೆಲ್ಲಿಗೂ ಹೋಗಬೇಡ, ನಾನೂ ನೀನೂ ಬಹಳ ಸಾಖ್ಯವುಳ್ಳವರಾಗಿ ಇಲ್ಲಿಯೇ ಇರೋಣ -ಎಂದಿತು, ಅದಕ್ಕೆ ತಟಸ್ಥನಾದ ಲಘುಪತನಕನಿಂತೆಂದನು-ಎಲೈ ಕೂರ್ಮ ರಾಜನೇ, ನೀನು ಸಮಸ್ತ ಜನರೂ ಕೊಂಡಾಡತಕ್ಕ ಗುಣಗಳುಳ್ಳವನು. ಇನ್ನು ಮೇಲೆ ನಿನ್ನ ಸ್ನೇಹಿತನನ್ನು ಆದರಿಸು, ಶ್ಲಾಸ್ಯಸ್ಪಏಕೋ ಭುವಿ ಮಾನವಾನಾಂ ಸ ಉತ್ತಮಸ್ಸತ್ಪುರುಷಸ್ಸಧನ್ಯಃ | ಯಸ್ಯಾರ್ಥಿನೋವಾ ಶರಣಾಗತೋವಾ ನಾಸಾ ವಿಭಿನ್ನಾ ವಿಮುಖಾಃ ಪ್ರಯಾಂತಿ | ದೊಡ್ಡ ಮನುಷ್ಯನಿಗೆ ಒಂದುವೇಳ ಕೇಡು ಬಂದರೆ ಆ ಕೇಡನ್ನು ಹೋಗಲಾಡಿಸುವುದಕ್ಕೆ ಅಷ್ಟು ದೊಡ್ಡವನಾದವನೇ ಹೊರತು ಅಲ್ಪನು ಶಕ್ತನಲ್ಲ; ಕೆಸರಿನಲ್ಲಿ ಇಳಿಯಬಿದ್ದ ಆನೆಯನ್ನು ಆನೆಗಳು ಎತ್ತಬೇಕೇ ಹೊರತು ಹೃದ್ರಮೃಗಗಳು ಎತ್ತಲಾಪುವೇ ?* ಬುದ್ದಿ ವಿಭವವುಳ್ಳವನು m'S "