ಪುಟ:ಪರಂತಪ ವಿಜಯ ೨.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೩

೯೯


ದಾಗಿ ನನ್ನ ಸಂಗಡ ಹೇಳಿದ್ದನು. ನೀನು ನಾಳೆ ಬೆಳಗ್ಗೆ ಬಂದರೆ, ಪರಂತಪನ ಪೂರ್ವಾಪರಗಳನ್ನು ವಿಚಾರಿಸಿ ವಿಶದವಾಗಿ ನಿನಗೆ ಹೇಳುವೆನು. ಮಂಜೀರಕನು ಅವನ ಅಪ್ರಣೆಯನ್ನು ತೆಗೆದುಕೊಂಡು ತನ್ನ ಕೊಟ್ಟಡಿಗೆ ಹೋಗುತ್ತಿರುವಾಗ, ಒಬ್ಬ ಯವನಸ್ಸನು ಇವರ ಮಾತುಗಳನ್ನು ಕೇಳುತಿದ್ದು ಇವನೊಡನೆ ಮಾತನಾಡುವುದಕ್ಕೆ ಉಪಕ್ರಮಿಸಿದನು.
ಯೌವನಸ್ಥ -ನೀನು ಭೋಜನಶಾಲೆಯ ಯಜಮಾನನೊಡನೆ ಆಡುತಿದ್ದ ಮಾತುಗಳನ್ನು ಕೇಳುತಿದ್ದೆನು. ನೀನು ಪರಂತಪನನ್ನು ಹುಡುಕಿಕೊಂಡು ಬಂದಿರುವೆಯಲ್ಲವೆ?
ಮಂಜೀರಕ - ಅಹುದು! ಆತನ ಪೂರೋತ್ತರಗಳೇನಾದರೂ ನಿನಗೆ ತಿಳಿಯುವುದೆ?
ಯೌವನಸ್ಥ - ನನಗೆ ಬಹಳ ಸ್ಪಲ್ಪ ತಿಳಿಯುವುದು. ಅವನು ಈ ಕಲ್ಯಾಣಪುರಕ್ಕೆ ಬಂದಾಗ, ನನಗೂ ಅವನಿಗೂ ಸರಿಚಯವಾಯಿತು. ಕಳೆದ ಎಂಟು ದಿವಸಗಳಿಂದ ಅವನ ಸಮಾಚಾರವೇ ಇಲ್ಲ. ಅವನಿಗೇನೋ ವಿಪತ್ತು ಸಂಭವಿಸಿರುವುದೆಂದು ತೋರುತ್ತದೆ.
ಮಂಜೀರಕ- ಹಾಗೆಂದರೇನು! ಮಹಾತ್ಕರಿಗೆ ವಿಪತ್ತು ಸಂಭವಿಸುವುದೇ? ಇದನ್ನು ನಾನು ಎಂದಿಗೂ ನಂಬಲಾರೆನು.
ಯೌವನಸ್ಥ - ನೀನು ನನ್ನ ಕೊಟ್ಟಡಿಗೆ ಬಂದರೆ, ಈ ವಿಷಯವನ್ನು ಕುರಿತು ವಿಸ್ತಾರವಾಗಿ ಮಾತನಾಡಬಹುದು.
ಮಂಜೀರಕ- ಆವಶ್ಯಕವಾಗಿ ಆಗಬಹುದು. (ಇಬ್ಬರೂ ಯೌವನಸ್ಥನ ಕೊಟ್ಟಡಿಗೆ ಹೋಗುವರು.
ಯೌವನಸ್ಥ- ನಿನ್ನ ಹೆಸರೇನು?
ಮಂಜೀರಕ- ಪರಂತಪನ ಸೇವಕನಾದ ಮಂಜಿರಕನು.
ಯೌವನಸ್ಥ- ನಿನ್ನ ವಿಷಯವನ್ನು ನನಗೆ ಪರಂತಪನು ಹೇಳಿದ್ದನು. ನೀನು ಬಹಳ ಸಾಹಸಿ. ಇಂಥ ಭೃತ್ಯರುಳ್ಳವನಿಗೆ, ವಿಪತ್ತುಗಳು ಬಂದಾಗ ದೈವಯೋಗದಿಂದ ಪರಿಹಾರವಾಗಬಹುದು.
ಮಂಜೀರಕ- ಅದು ಹಾಗಿರಲಿ: ಪರಂತಪನ ಪೂರ್ವೋತ್ತರಗಳನಾದರೂ ತಿಳಿದಿದ್ದರೆ ಹೇಳು.