ಪುಟ:ಪರಂತಪ ವಿಜಯ ೨.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೪

೧೦೩


ಕೊಳ್ಳುವೆನು. (ಪ್ರಕಾಶ) ಎಲೈ ದುರ್ಮತಿಯೇ! ನಾನು ಇದುವರೆಗೂ ಮೈಮೇಲೆ ಪ್ರಜ್ಞೆಯಿಲ್ಲದಂತೆ ಕಾಯಿಲೆ ಇದ್ದೆನಲ್ಲವೆ?
ದುರ್ಮತಿ- ಹೌದಮ್ಮಾ! ನೀನು ಬಹಳ ಕಾಯಿಲೆಯಾಗಿದ್ದೆ. ನಿನಗೆ ತಿರುಗಿ ಪ್ರಜ್ಞೆ ಬರುವುದಿಲ್ಲವೆಂಬುದಾಗಿ ನಾವು ಯೋಚಿಸಿದ್ದೆವು. ದೈವಾಧೀನದಿಂದ ಬದುಕಿದೆ.
ಕಾಮಮೋಹಿನಿ- (ಆತ್ಮಗತ) ಯಮನಿಗೆ ಕರುಣವಿಲ್ಲವೆಂಬುದು ಈಗ ನಿಶ್ಚಯವಾಯಿತು. ಶಂಬರನ ವಶವಾಗಿರುವುದಕ್ಕಿಂತ ಮರಣವು ಉತ್ತಮವಲ್ಲವೆ ? ಪಾಪಿ ವಿಧಿಯು ನನಗೆ ಈ ಅವಸ್ಥೆಯನ್ನು ತಂದನು. (ಪ್ರಕಾಶ) ನಾವು ಈಗ ರತ್ನಾಕರದಲ್ಲಿರುತ್ತೇವಲ್ಲವೆ?
ದುರ್ಮತಿ- ಹೌದಮ್ಮಾ! ನಾವು ರತ್ನಾಕರದಲ್ಲಿರುತ್ತೇವೆ.
ಕಾಮಮೋಹಿನಿ- ನಾನು ಸತ್ಯಶರ್ಮನ ಮನೆಯಲ್ಲಿದೆ. ಇಲ್ಲಿಗೆ ನನ್ನನ್ನು ತಂದವರು ಯಾರು?
ದುರ್ಮತಿ - ಅದು ನನಗೆ ತಿಳಿಯದು ನಾನು ನಿನ್ನ ಪೋಷಣೆಗೊಸ್ಕರ ನಿಯಮಿಸಲ್ಪಟ್ಟಾಗ ನೀನು ಇಲ್ಲಿ ಇದ್ದೆ. ಕಾಮಮೋಹಿನಿ-ನಾನು ಇಲ್ಲಿ ಶಂಬರನ ಬಂದೀವಾನಳಾಗಿರುವೆನು:ಅಲ್ಲವೆ ?
ದುರ್ಮತಿ-ನೀನು ಬಂದೀವಾನಳಲ್ಲ: ಆದರೆ, ಯಜಮಾನನ ಆಜ್ಞೆಯಿಲ್ಲದೆ ಇಲ್ಲಿಂದ ಆಚೆಗೆ ನೀನು ಹೋಗುವುದಕ್ಕಾಗುವುದಿಲ್ಲ.
ಕಾಮಮೋಹಿನಿ- ನನ್ನನ್ನು ನಿರ್ಬಂಧಮಾಡತಕ್ಕ ದುರಾತ್ಮನಾದ ಯಜಮಾನನು ಯಾರು ?
ದುರ್ಮತಿ- ಈ ವಿಷಯವನ್ನು ನಾನು ಮೊದಲೇ ವಿಜ್ಞಾಪಿಸಿದೆನು. ಈ ಕಟ್ಟಡಕ್ಕೂ ಇಲ್ಲಿರತಕ್ಕ ಸಮಸ್ತರಿಗೂ ಯಜಮಾನನಾದವನು ಶಂಬರನು.
ಕಾಮಮೋಹಿನಿ-ಯಜಮಾನನೆಂದು ಹೇಳಬೇಡ; ಈ ಜೈಲಿಗೆ ಅಧಿಕಾರಿಯೆಂದು ಹೇಳು. ಅದು ಹಾಗಿರಲಿ, ಆ ದುಷ್ಟನು ಎಲ್ಲಿರುವನು?
ದುರ್ಮತಿ- ಈಗ ಕೆಲವು ದಿವಸಗಳಿಂದ ಆತನು ಇಲ್ಲಿಗೆ ಬಂದಿಲ್ಲ. ಯಾವ ನಿಮಿಷದಲ್ಲಿ ಅಪೇಕ್ಷಿಸಿದರೂ ಹಾಜರಾಗುವನು. ಅವನು ನಿನ್ನ