ಪುಟ:ಪರಂತಪ ವಿಜಯ ೨.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೨

೧೦೭


ರುವುವು. ನೀನು ಕೃತಘ್ನಳೆಂದು ನಾನು ಮೊದಲೇ ಹೇಳಿದ್ದೆನಷ್ಟೆ! ಶಂಬರನು ನಿನಗೆ ಮಾಡಿರತಕ್ಕ ಒಂದು ಮಹೋಪಕಾರವಿರುವುದು: ಅದು ಇನ್ನೂ ನಿನಗೆ ತಿಳಿಯದು. ಅದು ತಿಳಿದಪಕ್ಷದಲ್ಲಿ, ನಿನಗೆ ಶಂಬರನಲ್ಲಿರತಕ್ಕ ದ್ವೇಷವು ಅಕೃತ್ರಿಮವಾದ ಅನುರಾಗವಾಗಿ ಪರಿಣಮಿಸುವುದು.
ಕಾಮಮೋಹಿನಿ -(ಆತ್ಮಗತ) ಇವಳು ಬಹಳ ದುಷ್ಟೆ ; ಶಂಬರನ ಆಜ್ಞೆಗೆ ಅನುಸಾರವಾಗಿ ನಡೆದುಕೊಳ್ಳತಕ್ಕವಳು. ಇದಾವುದೋ ಒಂದು ಹೊಸ ವಿಷಯವನ್ನು ಉಪಕ್ರಮಿಸಿರುವಳು ಒಳ್ಳೆಯದು; ತಿಳಿದುಕೊಳ್ಳೋಣ. (ಪ್ರಕಾಶ) ಶಂಬರನು ನನಗೆ ಮಾಡಿರತಕ್ಕ ಅಂಥ ಮಹೋಪಕಾರವೇನು?
ದುರ್ಮತಿ - ಹೇಳುವೆನು, ಕೇಳು. ಸುಮಿತ್ರನು ಸತ್ತು ಹೋಗಿರತಕ್ಕ ಸಂಗತಿಯು ನಿನಗೆ ತಿಳಿದೇ ಇದೆ. ಅವನು ಸತ್ತ ಮೇಲೆ, ಅವನು ಮಹಾ ಪಾಪಿಷ್ಠನೆಂದು ಕೆಲವು ಕಾಗದಪತ್ರಗಳಿಂದ ಗೊತ್ತಾಗಿದೆ. ಅವನು ಒಂದು ದಿವಸ ತನ್ನ ದ್ವೇಷಿಗಳಾದ ಮೂರು ಜನಗಳನ್ನು ಖೂನಿ ಮಾಡಿದನು. ಇದನ್ನು ನೋಡಿ ನಿನ್ನ ತಂದೆ ಅಸಹ್ಯಪಟ್ಟು, ಅವನನ್ನು ಸರಕಾರಕ್ಕೆ ಒಪ್ಪಿಸಬೇಕೆಂದು ಪ್ರಯತ್ನ ಮಾಡಿದನು. ಅದಕ್ಕಾಗಿ ನಿಮ್ಮ ತಂದೆಯನ್ನು ಹಿಡಿದು ಇದೇ ಕಟ್ಟಡದಲ್ಲಿ ಸೆರೆಯಲ್ಲಿಟ್ಟನು. ಸುಮಿತ್ರನು ಕಾಲವಾದುದರಿಂದ, ನಿನ್ನ ತಂದೆಯನ್ನು ಶಂಬರನು ನಿನಗೋಸ್ಕರ ಬಿಡುಗಡೆಮಾಡಿ, ಈ ಕಟ್ಟಡದಲ್ಲಿಯೆ ಇಟ್ಟಿರುವನು.
ಕಾಮಮೋಹಿನಿ - ಈಗ ನನ್ನ ತಂದೆಯೆಲ್ಲಿದ್ದಾನೆ?
ದುರ್ಮತಿ- ನಿನ್ನ ತಂದೆಯು ಈ ಕಟ್ಟಡದಲ್ಲಿಯೇ ಇರುತ್ತಾನೆ. ಶಂಬರನ ಆಜ್ಞೆಯಿಲ್ಲದೆ ಇಲ್ಲಿಂದ ಆಚೆಗೆ ಹೋಗುವುದಕ್ಕೆ ಮಾತ್ರ ಇವನಿಗೆ ಅವಕಾಶವಿಲ್ಲ.
ಕಾಮಮೋಹಿನಿ-(ಆತ್ಮಗತ) ಈಗ ಈ ದುರಾತ್ಮನಾದ ಶಂಬರನ , ತನ್ನ ಇಷ್ಟಾರ್ಥ ಪರಿಪೂರ್ತಿಗೆ, ನನ್ನ ತಂದೆಯು ಕೈಗೆ ಸಿಕ್ಕಿದ್ದು ಬಲವಾದ ಸಾಧಕವೆಂದು ತಿಳಿದುಕೊಂಡಿರಬಹುದು. ಪತಿವ್ರತೆಯರು, ದುಷ್ಟರು ಒಡ್ಡ ತಕ್ಕ ಇಂಥ ಬಲೆಗಳಿಗೆ ಎಂದಿಗೂ ಬೀಳರು. ನಮ್ಮ ತಂದೆಯೂ ಕೂಡ ತನಗೋಸ್ಕರ ಈ ದುರಾತ್ಮನಿಗೆ ನನ್ನ ಪಾತಿವ್ರತ್ಯ ವಿಕ್ರಯವನ್ನು ಮಾಡಬೇ