ಪುಟ:ಪರಂತಪ ವಿಜಯ ೨.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಪರಂತಪ ವಿಜಯ


ಪರಂತಪ-ಅಯ್ಯಾ ! ನಿನ್ನ ಆಜ್ಞೆಗನುಸಾರವಾಗಿ ನಡೆಯುವುದ ರಲ್ಲಿ ಯಾವ ಸಂಶಯವೂ ಇಲ್ಲ. ಈ ವಿಷಯದಲ್ಲಿ ನಾನು ನಿನ್ನ ಆಜ್ಞೆ ಯನ್ನು ಕೃತಜ್ಞನಾಗಿ ನೆರವೇರಿಸುವೆನು. ಆದರೆ, ನೀನು ಹೇಳುವುದು ಅತಿ ಪ್ರಮಾದಕರವಾಗಿರುವುದರಿಂದ, ನೀನು ಹೀಗೆ ದುಡುಕುವುದು ಸರ್ವಥಾ ಯುಕ್ತವಲ್ಲ. ಈ ರಾತ್ರಿಯ ಜೂಜಿನ ವಿಷಯದಲ್ಲಿ ನೀನು ಮಾಡಿರುವ ಸಂಕಲ್ಪವನ್ನು ಬಿಡು ದ್ಯೂತದಿಂದ ನಳ ಯುಧಿಷ್ಠಿರಾದಿಗಳೂ ಕೂಡ ಬಹಳ ಕಷ್ಟವನ್ನು ಅನುಭವಿಸಿದ ಸಂಗತಿಯೂ, ಇನ್ನೂ ಅನೇಕರು ದುರ್ವಿಕಾರವಾದ ಅತಿ ಸಂಕಟಗಳಿಗೆ ಭಾಗಿಗಳಾದರೆಂಬುದೂ, ನಿನಗೆ ತಿಳಿಯದ ಅಂಶವಲ್ಲ. ಈಗ ನಷ್ಟವಾದ ದ್ರವ್ಯವು ಹೋದರೂಹೋಗಲಿ ; ಅದನ್ನು ಬೇರೆಯಾದ ಮಾರ್ಗಗಳಿಂದ ಸಂಪಾದಿಸಬಹುದು ; ನೀನು ಖಂಡಿತವಾಗಿ ಈ ರಾತ್ರಿ, ಅವನೊಡನೆ ಜೂಜಾಡಬೇಡ.
ಮಾಧವ-ನನ್ನ ಸಂಕಲ್ಬವು ದುರ್ಸಿವಾರವಾದುದು. ಒಂದುವೇಳೆ ಸೂರ್ಯನಾದರೂ ತನ್ನ ಗತಿ ಯನ್ನು ಬದಲಾಯಿಸಬಹುದೇ ಹೊರತು, ನಾನೆಂದಿಗೂ ನನ್ನ ಸಂಕಲ್ಪವನ್ನು ವ್ಯತ್ಯಸ್ತವನ್ನಾಗಿ ಮಾಡುವನಲ್ಲ. ಪ್ರಿಯ ಮಿತ್ರನೇ ! ಕೇಳು:-ನಾನು ದ್ರವಾರ್ಜನೆಗೋಸ್ಕರ ಖಂಡಿತವಾಗಿ ಜೂಜಾಡತಕ್ಕವನಲ್ಲ. ಅನೇಕ ಜನಗಳನ್ನು ಮೋಸಪಡಿಸಿ ಕೆಡಿಸಿರುವ ಆ ದುರಾತ್ಮನಾದ ದುರ್ಬುದ್ಧಿಯ ಕೃತ್ರಿಮವನ್ನ ಉದ್ಘಾಟಿಸುವುದೇ ನನ್ನ ಮುಖ್ಯ ಸಂಕಲ್ಪವು. ಅವನ ಕೃತ್ರಿಮವನ್ನು ಬಹಿರಂಗಪಡಿಸಿ ಅವನಿಗೆ ತಕ್ಕೆ ಶಿಕ್ಷೆಯನ್ನು ಮಾಡಿಸಿದರೆ, ಈ ನಮ್ಮ ದೇಶವನ್ನು ನಿರ್ಮೂಲಮಾಡುವ ಒಂದು ಒಗೆಯ ಸಾಂಕ್ರಾಮಿಕ ರೋಗವನ್ನು ಅಡಗಿಸಿದಂತಾಗುವುದು. ಆದುದರಿಂದ, ಈ ದಿವಸರಾತ್ರಿ ನಾನು ಇವನ ಕಾಪಟ್ಯವನ್ನು ಹೊರಡಿಸಿ ಇವನನ್ನು ಯಮಾಲಯಕ್ಕೆ ಕಳುಹಿಸುವ ಪ್ರಯತ್ನವನ್ನೇ ಮಾಡುವೆನು. ಅಥವಾ, ಈ ಕಾರ್ಯಕ್ಕಾಗಿ ನನ್ನ ಪ್ರಾಣವನ್ನಾದರೂ ಒಪ್ಪಿಸುವೆನು. ಇದೂ ನನಗೆ ಅಭಿಮತವೇ ಸರಿ. ಈ ಪ್ರತಿಜ್ಞೆಯ ವಿಷಯದಲ್ಲಿ, ಆ ಕಾಮ ಮೋಹಿನಿಯೇ ಬಂದು ನನ್ನನ್ನು ತಾನಾಗಿ ವರಿಸುವುದಾಗಿ ಹೇಳಿ ಅಡ್ಡಿಮಾಡಿದರೂ, ನನ್ನ ಪ್ರತಿಜ್ಞಾಪರಿಪಾಲನಾರ್ಥವಾಗಿ ಅವಳ ಪ್ರಾರ್ಥನೆಯನ್ನೂ ನಿರಾಕರಿಸುವೆನು. ನೀನು ನನ್ನ ಈ ಸಂಕಲ್ಪಕ್ಕೆ ಅಡ್ಡಿಯಾಗಬೇಡ. ಲೋಕ