ಪುಟ:ಪರಂತಪ ವಿಜಯ ೨.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬

ಪರಂತಪ ವಿಜಯ


ಪರಂತಪ- ಇದು ಅಸಾಧ್ಯ. ಈ ಪಟ್ಟಣದಲ್ಲಿ ನಾನು ಬಂಧು ಮಿತ್ರರೊಬ್ಬರೂ ಇಲ್ಲದೆ ಒಬ್ಬನೇ ಬಂದಿರುತ್ತೇನೆ. ನಿಲ್ಲುವುದಕ್ಕೆ ಮನೆಯಿಲ್ಲ; ಬೇಕಾದ ಸಾಮಗ್ರಿಗಳಿಲ್ಲ. ಶತ್ರುಗಳ ಮಧ್ಯದಲ್ಲಿರುತ್ತೇನೆ. ಹೀಗೆ ದುಡುಕುವುದು ಸರಿಯಲ್ಲ.

ಸತ್ಯಶರ್ಮ- ವಿವಾಹಕ್ಕೆ ಇವುಗಳಾವುವೂ ಆವಶ್ಯಕವಿಲ್ಲ. ಸಂಕಲ್ಪವೇ ಮುಖ್ಯವಾದುದು, ಕಾಮಮೋಹಿನಿಯು, ದೈವಪ್ರೇರಣೆಯಿಂದ ನಿನ್ನನ್ನು ವರಿಸಿರುವಳು. ನೀನು ವಿವಾಹ ಮಾಡಿಕೊಳ್ಳದಿದ್ದರೆ, ಅವಿವಾಹಿತಳೆಂದು ಇತರರು ಇವಳನ್ನು ಪರಿಗ್ರಹಿಸುವುದಕ್ಕೆ ಅವಕಾಶವಾಗುವುದು ; ಒಂದು ವೇಳೆ ಸುಮಿತ್ರ ಶಂಬರರು ಈಕೆಯನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗಿ ಶಂಬರನಿಗೆ ವಿವಾಹಮಾಡಿಕೊಳ್ಳುವುದಕ್ಕೂ ಅವಕಾಶವಾಗುವುದು. ನಿನಗೆ ವಿವಾಹವಾಯಿತೆಂದು ತಿಳಿದರೆ, ಇವರು ಈ ರೀತಿಯಲ್ಲಿ ಮಾಡುವುದಕ್ಕೆ ಪ್ರತಿಬಂಧಕವಾಗುವುದು.

ಪರಂತಪ- ನೀನು ಹೇಳುವುದೆಲ್ಲ ಸತ್ಯವಾದಾಗ್ಗೂ, ಈಗ ವಿವಾಹಕ್ಕೆ ಸಮಯವಲ್ಲ. ಈ ಪ್ರಯತ್ನವನ್ನು ಮಾನಸಿಕ ಮಾಡಬೇಕು.
  ಹೀಗೆ ಹೇಳುತ್ತಿರುವಾಗ, ಸತ್ಯವತಿಯು ಅಲ್ಲಿಗೆ ಬಂದು “ಎಲೈ ಪರಂತಪನೆ! ನೀನು ವಿದ್ವಾಂಸನು ; ಪೂರ್ವಾಪರಜ್ಞನು ; ಊಹಾಪೋಹಗಳನ್ನು ತಿಳಿಯದವನಲ್ಲ. ನಮ್ಮ ಮಾತುಗಳನ್ನು ನೀನು ಈಗ ಉಲ್ಲಂಘಿಸಿದರೆ, ಕಾಮನೋಹಿನಿಯು ಶಂಬರನ ಪಾಲಾಗುವಳು; ಕೂಡಲೆ ಯಮನ ಪಾಲಾಗುವುದಕ್ಕೆ ಸಂದೇಹವಿಲ್ಲ. ಇದರಿಂದ ಉಂಟಾಗುವ ಅನರ್ಥಗಳಿಗೆ ನೀನೇ ಕಾರಣನಾಗುವೆ. ಸುಮಿತ್ರ ಶಂಬರರು, ಈಕೆಯನ್ನು ಪತ್ತೆಮಾಡುವುದಕ್ಕೆ ಜನರನ್ನು ಬಿಟ್ಟಿದ್ದಾರೆ. ನಾಳೆಯೋ-ನಾಡಿದ್ದೋ ಈಕೆಯನ್ನು ಪತ್ತೆಮಾಡುವರು. ವಿವಾಹವಾಗಿದ್ದ ಪಕ್ಷದಲ್ಲಿ ಭಯವೇನೂ ಇರುವುದಿಲ್ಲ ನಮ್ಮ ಮಾತುಗಳನ್ನು ಉಲ್ಲಂಘಿಸಬೇಡ. ಮಂಗಳ ಸ್ನಾನಕ್ಕೆ ಏಳು ” ಎಂದಳು.

ಅರ್ಯಕೀರ್ತಿ- ಎಲೈ ಪರಂತಪನೆ! ನನ್ನ ತಾಯಿ ಹೇಳತಕ್ಕುದನ್ನು ಕೇಳು. ಈ ಅನಾಥಳಾದ ನನ್ನ ಸಖಿಗೆ ನಾಥನಾಗು. ಈಗ ನೀನು ಉದಾಸೀನ ಮಾಡಿದರೆ, ನನ್ನ ಸಖಿಯು ಶಂಬರನ ಕೈವಶವಾಗುವುದನ್ನು