ಪುಟ:ಪೊನ್ನಮ್ಮ-ಗೌರಮ್ಮ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಳ್ಳುಬೇಲಿ

ಇಂಗ್ಲಿಷ್ ಪ್ರಸಿದ್ಧ ಕಾದಂಬರಿಯೊಂದರ

ಅನುವಾದ

"ಚಾಲುಕ್ಯ"

ಪ್ರೇಮವು ಕುರುಡು ಎಂದು ಕಣ್ಣಿದ್ದ ಜಗವು ಕರೆಯಿತು. ಆದರೆ ಕುರುಡು ಪ್ರೇಮವು ಕಂಡ ಕಣಸನ್ನು ನನಸಾಗಿ ಕಾಣುವ ಜಗದ ಕಣ್ಣು ಇನ್ನೂ ತೆರೆದಿಲ್ಲ. ಪ್ರೇಮವು ಜಾತಿ– ಪಂಥಗಳ ಕಟ್ಟನ್ನು ಲೆಕ್ಕಿಸದು; ಆದರೂ ಜೀವನದ ಸಫಲತೆಯಾಗದುಳಿಗಯದು. ಎಂಬ ಕಥೆಯು ಇದರಲ್ಲಿ ಸರಸವಾಗಿ ವರ್ಣಿತವಾಗಿದೆ.

ಬೆಲೆ: ೧ ರೂ.

ಚಿಗುರು

ಮಿಸೆಸ್ ಬಿ. ಟಿ. ಜಿ. ಕೃಷ್ಣ ಅವರ ಇನ್ನೊಂದು ಕಥಾಸಂಗ್ರಹ

ಕಥಾ ಪಾತ್ರಗಳ ಮನದ ಏರಿಳಿತಗಳ ಉಯ್ಯಾಲೆಯಲ್ಲಿ ಒಂದೊಂದು ಮಾತುಗಳೂ ವೀಣೆಯ ತಂತಿಯನ್ನು ಮೀಟಿದಂತೆ ಓದುಗರ ಹೃದಯದಲ್ಲಿ ತರಂಗವನ್ನೆಬ್ಬಿಸುವವು, ಕಟುಕ ಜೀವಿಗೂ ಕರಣಿಯ ದರ್ಶನವಾಗುವದು. ಶೈಲಿಯ ಸೊಬಗೂ ಭಾಷೆಯ ಬೆಡಗೂ ಕತೆಗಳಿಗೆ ಮೆರಗುಕೊಟ್ಟಿವೆ! ಈಗಾಗಲೆ ಜನ ಪ್ರಿಯವಾದ 'ಕಂಬನಿ'ಗಿಂತ ವಿವಿಧ ಸನ್ನಿವೇಶಗಳು!

ಅಚ್ಚಿನಲ್ಲಿ