ಪುಟ:ಪ್ರಜ್ಞಾ ಸ್ವಯಂವರಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸನ್ಮಾನಗ್ರಂಥಾವಳಿ [ಪ್ರಧ JMN - A /

  • * * */* fy v\\ A * *

ಮಾಡುವೆನು, ನನ್ನಿ ಸಾಹಸ, ಪರಾಕ್ರಮಗಳಿಂದ ಇಂದ್ರ, ಚಂದ್ರ, ಚಂದ್ರ ಮೌಳಿಗಳೇ ಮೊದಲಾದವರು ಕೂಡ ಜಿತರಾಗಿರುವರು. ಇನ್ನು ವಿಷ್ಣು ಭಕ್ತನ ಪಾಡೇನು ? - ರತಿ-ಆರ್ಯಪುತ್ರನೆ ! ಇಂತಹ ಅಸೀಮಪಾಂಡಿತ್ಯವೂ ಅದ್ಭುತಶಕ್ತಿ ಯೂ ನಿನ್ನಲ್ಲಿರುವುದರಿಂದಲೇ ನೀನು ಅಜೇಯನೆಂದೂ ದರ್ಜಿಯನೆಂದೂ ಜಗಜೇತನೆಂದೂ ಪ್ರಖ್ಯಾತಿ ಪಡೆದಿರುವೆ, ಹಾಗಿಲ್ಲದಿದ್ದರೆ, ನಿಶ್ಚಲಚಿತ್ತದಿಂದ ಉಗ್ರವಾದ ತಪಸ್ಸಿನಲ್ಲಿ ಶಿವನನ್ನು ಕ್ಷಣಮಾತ್ರದಲ್ಲಿ ವಿಕಾರವಶನಾಗಿ, ಅರ್ಧ ನಾರೀಶ್ವರನೆಂಬ ಪ್ರಸಿದ್ದಿಗೆ ಬರುವಂತೆ ಆತನನ್ನು ದಾಕ್ಷಾಯಣಿಯ ದಾಸನಾ ಗುವಂತೆ ಮಾಡುತ್ತಿದ್ದೆಯೋ ? ಆದರೂ, ಪ್ರಜ್ಞೆಯ ವಿಷಯದಲ್ಲಿ ನಿನ್ನಿ ಪ್ರಯತ್ನ ವೆಲ್ಲವೂ ಎಷ್ಟು ಭಕ್ತನ ಪುಣಯಕ್ಕೆ ಅನುಕೂಲವಾಗಬಹುದೆಂದು ತೋರುವುದು, ಕಾಮ-(ಗರ್ವದಿಂದ) ರಾಗಾ | ( ವಿವಿಮಾಯಮು ಚೇಸಿಪೋತಿವೊ ) ನಾರೀಮಣಿಯೆ ಕೆಳುದೆನ್ನ ಘೋರವಿಕ್ರಮಂ || ಪ || ಧಿರನಾದೆನೆಗೆ ಮರುಲೋಕವೆದುರೆಪೇಳ || ಅ || ಈಶನನ್ನು ನಾಶ ದಿಂದ ಕಟ್ಟಕೆಡದೆ ! ಜಗಧಿಕನೆದುರೆ ಮುನಿ ಗಳೆದುರೆಯನಗೆ ಯಾರ್ ಸಮರ್ || ೧ || ಪ್ರಿಯೆ ! ನಿಜವಾಗಿ ವಿಷ್ಣು ಭಕ್ತನು ಜೀವಿಸಿದ್ದರಲ್ಲದೇ-ಪ್ರಜ್ಞೆಗೆ ಅವನ ಪರಿಣಯವಾಗುವುದು ? ಅವನನ್ನು ಅರಣ್ಯವಾಸ್ಯನಾಗಿ ಮಾಡಲು ನಮ್ಮ ಮಹಾರಾಜನು ನನಗಿಂತಲೂ ಸಾಹಸಿಗಳಾದ ಡಂಭಾದಿಗಳನ್ನೂ ಮೊದಲೇ ಕಳುಹಿರುವನು, ಅವರು ಕಾರ್ಯವನ್ನು ಸಾಧಿಸಿಯೇ ಇರಬಹುದು,