ಪುಟ:ಪ್ರತಾಪರುದ್ರದೇವ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿ ಶ್ರೀ ಕೆ. 'ಚನೆಡಿಸುವಲ್ಲೂ ರ್ಪಸಿದ್ದಕ್ಕೆ ಕೂಲ ಈರೀತಿ ಇರುವುದು ಮಾತ್ರವಲ್ಲದೆ ಭಾಷಾನುಕೂಲದಿಂದ ಸಂಸ್ಕೃತ ಶಬ್ದಗಳನ್ನು ಸ್ಟೇಷಾರ್ಥಗಳಲ್ಲಿ ಪ್ರಯೋಗಿಸಿ ವಾಕ್ಯವನ್ನು ರಚನೆಪಡಿಸಿದ್ದರೆ, ಅದೇ ಶಬ್ಬವನ್ನು ಅದೇ ಗೋವಾರ್ಥಗಳಲ್ಲಿ ಕನ್ನಡದಲ್ಲೂ ಪ್ರಯೋಗಿಸಿ ಕನ್ನಡ ಕಾವ್ಯವನ್ನೂ ಅದೇ ರೀತಿ ರಚನಹಡಿಸುವರು. ಸಂಸ್ಕೃತದ ಶಬ್ಬಗಳ ಸಹಾಯ ಕನ್ನಡಕ್ಕೆ ಈ ರೀತಿ ಇದ್ದು, ಮೇಲೆ ಹೇಳಿದ ರೀತಿ ಸಂಸ್ಕೃತಗ್ರಂಥಗಳನ್ನು ಕನ್ನಡಿಸಲು ಮತ್ಯಾವ ಪ್ರತಿ ಬಂಧಕಗಳೂ ಇಲ್ಲದೆ ಇರುವಲ್ಲಿ ಆ ಇಟಾಲಿರ್ಯ ಸಾಮತಿಯನ್ನು ಹೇಳಲು ಅವಕಾಶವಿರುವದೆ ? ಅದನ್ನು ಹೇಳಿದರೆ ಭಾಷಾಂತರಿಸತಕ್ಕವನು ಹೇಳಿದ ವನ ಬಾಯಿಮೇಲೆ ಬಡಿದು ಮುಚ್ಚಿ ಸುವನು. ಸಂಸ್ಕೃತಾಭಿಮಾನಿಗಳಲ್ಲಿ ಕುಹಕಿಗಳಾದವರು ಯಾರಾದರೂ ಇದನ್ನು ನೋಡಿ, ಈತನಿಗೆ ಸಂಸ್ಕೃತಬರದೆ ಇರುವದರಿಂದ ಕುರುಡನಿಗೆ ಬೆಳಕಿನ ಸೊಗಸು ತಿಳಿಯದೆ ದೀವಿಗೆಯನ್ನು ಹಿಯ್ಯಾಳಿಸುವಂತೆ ಕನ್ನಡದಲ್ಲಿ ಸಂಸ್ಕೃತಶಬ್ದಗಳನ್ನು ಪ್ರಯೋಗಿಸುತ್ತಿರುವದನ್ನು ವ್ಯಂಗ್ಯಾರ್ಥದಲ್ಲಿ ನಿಂದಿ ಸುತ್ತಿರುವನೆಂದು ಆಕ್ಷೇಪಿಸಲುಪಕ್ರಮಿಸಿ, ಸಂಪದ್ಯುಕ್ತನಾದ ಸಂಸ್ಕೃತ ಸಹಾಯವಿಲ್ಲದೆ ಬಡಕನ್ನಡವನ್ನು ಬರೆಯುದಕ್ಕಾಗುವದೆ ? ಹಾಗೆ ಬರೆಯ ಲುಪಕ್ರಮಿಸಿ ಅದು ಅಸಾಧ್ಯವಾಗಿ ಕಂಡು ಸಂಸ್ಕೃತಶಬ್ದಗಳನ್ನು ಇರು ವಂತೆಯೇ ತೆಗೆದುಕೊಳ್ಳದೆ, ಅಣ್ಣಯ್ಯನಂತೆ ಅವುಗಳ ಕಿವಿ ಮೂಗುಗಳನ್ನು ಕುಯಿದು ಅವಕ್ಕೆ ಕೊಂಬು ಕೋಡುಗಳನ್ನು ಹುಟ್ಟಿಸುತ್ತ ತದ್ಭವವೆಂದು ಶಬ್ಬಗಳನ್ನು ತಬ್ಬಿಬ ಮಾಡಿ ಉಪಯೋಗಿಸುವದರಲ್ಲಿ ಗುಣವೇನಿರುವ ದೆನ್ನಬಹುದು. ಆದರೆ ಕನ್ನಡದಲ್ಲಿ ಸಂಸ್ಕೃತಶಬ್ದಗಳನ್ನು ಪ್ರಯೋಗಿಸು ತಿರುವದನ್ನು ಆಕ್ಷೇಪಿಸುವದು ನನ್ನ ಉದ್ದೇಶವಲ್ಲವೆಂದರೆ ಅದು ಸಾಕಾದ ಅತ್ತರವಲ್ಲವೆಂದವರನ್ನ ಬಹುದು. ಸಾಮಾನ್ಯವಾಗಿ ಪ್ರಶ್ನೆಗೆ ಪ್ರಶ್ನೆ ಉತ್ತರ ವಲ್ಲದಿದ್ದರೂ, ಕೆಲವು ಸಂದರ್ಭದಲ್ಲಿ ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾಗಿರುವ ದಲ್ಲದೆ, ಮತ್ತೆ ಪ್ರಶ್ನಿಸಲು ಅವಕಾಶ ಕೊಡದೆ ಇರುವದು. ಬರಿ ಅನ್ನದಲ್ಲೇ ಸಾಕಾದಷ್ಟು ರುಚಿಯಿಲ್ಲದಕಾರಣ ತಿನ್ನುವದಕ್ಕಾಗದು. ಅದರ ಜೊತೆಗೆ ರಸ ವತ್ತಾಗುವಂತೆ ಸಾರು ತುಪ್ಪವನ್ನು ಸೇರಿಸಿ ಭೋಜನವಖಡುವ ರೀತಿ ಬ