ಪುಟ:ಪ್ರತಾಪ ರುದ್ರದೇವ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿ ಶ್ರೀ ಕೆ . 21 ಆಕ್ಷೇಪಣೆಗೆ ಕಾರಣವಾಗಿರುವದು. ನಮ್ಮ ದೇಶದಲ್ಲಿ ಅಂತಹ ಸ್ತ್ರೀಯರು ಅತಃಪುರವನ್ನು ಬಿಟ್ಟು ಹೊರಕ್ಕೆ ಬರುವದಿಲ್ಲ. ಅವಳು ಈ ರೀತಿ ಬಂದದ್ದು ಸ್ವಭಾವಕ್ಕೆ ವಿರುದ್ಧವಾದ ಗಂಡುಬೀರಿತನದಂತೆ ಕಾಣುವದೆಂದು ಕೆಲ ವರು ಆಕ್ಷೇಪಿಸಬಹುದು. ಆದರೆ ಸ್ಥಳಸಂಕೋಚವಾದ್ದರಿಂದ ಇದಕ್ಕೆ ಸಮಾಧಾನವನ್ನು ಹೇಳಲು ನಮ್ಮ ಬಾಲಿಕಾಸಾಠಶಾಲೆಯ ಸರಸ್ವತಿಯ ರಿಗೂ, ಅವರಬಂಹರಿಗೂ, ಈ ವಿಷಯವನ್ನು ಬಿಟ್ಟಿರುತ್ತೆ. ಮೂರನೆ ಅಂಕದಲ್ಲಿ ರಾಜಮಂಡಲಿಯ ಔತಣವನ್ನು ಪ್ರತ್ಯಕ್ಷ ಹೇಳಿದೆ ; ಆದರೆ ಅದನ್ನು ತೋರಿಸುವಾಗ ಜನರೆದುರಿಗೆ ಅರ್ಧಮೈ ಬಿಟ್ಟು ಕೊಂಡು ಅಂಗಕ್ಕೆಲ್ಲ ಉಂಡಿಗೆ ಅಥವ ಪಟ್ಟೆಗಳನ್ನು ಹಾಕಿಕೊಂಡು ಪದ್ಮಾಸನದಲ್ಲಿ ಎಲೆಮುಂದೆ ರಾಜರುಗಳು ಕೂತುಕೊಳ್ಳಬೇಕೊ ? ಅಲ್ಲದ ಶರಾಯ ಮೋಜ ಹಾಕಿಕೊಂಡು ಠಿಯಾಗಿ ಮೇಜಿನಸುತ್ತ ಕಂತು ಕೊಳ್ಳಬೇಕೆ ಹೇಳಿಲ್ಲ. ಆದರೂ ಚಿಂತೆ ಇಲ್ಲ. ಇನ್ನೊಂದಾವರ್ತಿ ಪಾನ ವಾಗಲಿ ಎಂದು ಎತ್ತಕೊಳುತ ಸುರಾಸಾನವನ್ನು ಕೇಳಿದೆ. ಚಂಡಾಲ ಮುಂತಾದ ಜನಗಳಲ್ಲಿ ಅಥವ ಶೂರಸೇನ ನಾಟಕದಲ್ಲಿ ಹೇಳಿರುವಂತೆ ಸಿಪಾಯಿ ಮುಂತಾದ ಜನಗಳಲ್ಲಿ ಇದನ್ನು ಕೇಳಿದ್ದರೆ ಒಂದುವೇಳೆ ಚಿಂತೆ ಯಿಲ್ಲ. ಅದನ್ನು ಇಂತಾ ಉತ್ತಮ ಪಾತ್ರಗಳಲ್ಲಿ ಹೇಳಿರುವದು ಹಿಂದು ನಡವಳಿಕೆಗೆ ಯದ್ದವೆಂದು ಕೆಲವು ಆಚಾರಶೀಲರು ಆಕ್ಷೇಪಿಸಬಹುದು. ಆದರೆಅದನ್ನು ಹೇಳಿರುವದು ರಾತ್ರಿಕಾಲದಲ್ಲಿ ಮತ್ತೆ ಅದು ನಡಿಯುವದು ರಾತ್ರಿಕಾಲದಲ್ಲಿ ಸುರಾಪಾನವನ್ನು ರಾತ್ರೆಕಾಲದಲ್ಲಿ ಹೇಳಿದರೆ ನಮ್ಮ ಆಚಾರಶೀಲರಲ್ಲ ಅನೇಕರು ಆಕ್ಷೇಪಿಸುವಂತೆ ಕಾಣುವ ನಟನೆಗೆ ಅನುಕೂಲವಾಗಲೆಂದು ಪ್ರಕೃತಾನುಸಾರ, 'ನೋಡಿ' “ನಿಟ್ಟು ಸುರುಬಿಟ್ಟು,' 'ನಗುತ್ತ', 'ಲಜ್ಜೆಯಿಂದ' ಮುಂತಾದ ನಟನಾ ಸೂಚಕಗಳನ್ನು ಈಗಿರುವ ಕರ್ಣಾಟಕ ನಾಟಕಗಳಲ್ಲಿ ಹೇಳಿರುವದುಂಟು. ಆದರೆ ಇವುಗಳನ್ನು ಸಂದರ್ಭಾನುಸಾರ ನಟಕರೆ ತಿಳದುಕೊಳ್ಳಬಹುದಾದ ವಿಧಯಗಳಾದ್ದರಿಂದ ಇಂಗ್ಲೀಷು ನಾಟಕಗಳಂತೆ ಇಂತಾ ವಿಷಯಕ ಇನ್ನು ಈ ನಾಟಕದಲ್ಲಿ ಹೇಳಿಲ್ಲ.