ಪುಟ:ಬತ್ತೀಸಪುತ್ತಳಿ ಕಥೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M. • ಬತ್ತೀಸ ಪುತ್ಥಳಿ ಕಥೆ. ಸಿಯಿಲ್ಲದೆ ಇರುವುದರಿಂದ ಯೋಗ್ಯತೆ, ಗತಿಯಿಲ್ಲವೆಂದು ತನ್ನಲ್ಲಿ ತಾನೇ ತಿಳಿದುಕೊಂಡವನಾಗಿ, ಆ ಪಟ್ಟಣದ ಹೇಮವರ್ಮನೆಂಬ ಬ್ರಾಹ್ಮ ಣನ ಮಂದಿರಕ್ಕೆ ಹೋಗಲಾಗಿ, ಆ ಮನೆಯ ವಿಸನು ಕಂಡೆದ್ದು ನನ್ನ ಣೆಯಿಂದ ಕುಳ್ಳಿರಿಸಿಕೊಂಡು ಇಂತೆಂದನು --ನೀವು ಸರ್ವಶಾಸ್ತ್ರಜ್ಞರು. ರಾಯನ ಅಳಿಯಂದಿರು, ಏನು ಕಾರಣಾರ್ಥವಾಗಿ ದಯೆಮಾಡಿದಿರಿ ? - ಎಂಬುದಾಗಿ ಬೆಸಕೊಳ್ಳಲಾಗಿ, ಆ ಗೋವಿಂದಭಗವಾನನು ಇಂತೆಂದನು : ಕೇಳಿರೈಯ್ಯಾ, ಕನ್ಯಾರ್ಥಿಯಾಗಿ ನಾನು ನಿವಾಲಯಕ್ಕೆ ಬಂದೆನು-ಎಂದು ಸೇಳಿದ ಮಾತ ಕೇಳಿ, ತನ್ನಲ್ಲಿ ತಾನೆ:-ಈತನಿಗೆ ತನ್ನ ತನುಜೆ ಹೇಮವರ್ಣಿ ನಿಯನ್ನು ಕೊಟ್ಟರೆ ಇಹದಲ್ಲಿ ಸುಖ, ಪರದಲ್ಲಿ ಮೋಕ್ಷವಾಗುವುದೆಂದು ಅಂತವನಾಗಿ, ಆ ಕ್ಷಣವೇ ಆ ಮನೆಯ ವಿಸ್ತನು ಗೋವಿಂದಭಗವಾನನ ಪಾದಾರ್ಚನೆಯಂಗೆಯು ತನ್ನ ಪುತ್ರಿಹೇಮರ್ವಣಿ್ರನಿಯ ಧಾರೆಯನೆಂದನು. ಚತುರ್ಥದಿನವಾದ ಬಳಿಕ ಆ ಹೇಮವರ್ಸಿನಿಯನ್ನು ಕರೆದುಕೊಂ ಡು ಗೊವಿಂದಭಗವಾನನು ತನ್ನದು ಗೃಹಕ್ಕೆ ಹೋಗಿ ನಿತ್ಯದಲ್ಲೂ ಕೈ ತನಂ ನಡೆಸಿಕೊಂಡು ಸುಖವಾಗಿ ಇರುತ್ತಿರುವ ಕಾಲದಲ್ಲಿ - ಆ ಪಟ್ಟಣದ ಲೊರ್ವ ರತ್ನಪಾಲನೆಂಬ ವೈಶ್ಯನು ದ್ರವ್ಯಸಂಪನ್ನನಾಗಿ ತನ್ನ ವೃತ್ತಿವಾಣಿ ಪದಲ್ಲಿ ಇರುತ್ತಿಹನು. 4 ಸೆಟ್ಟಗೆ ಒಬ್ಬಳು ರತ್ನ ಡಳಿಕೆಯೆಂಬ ಸುತೆ ಯಿಹಳು. ಮದುವೆಗೆ ಒದಗಿದವಳಂ ಕಂಡು ಆ ವೈಶ್ಯನು ತನ್ನ ಮನದಲ್ಲಿ ಯೋಚಿಸಿಕೊಂಡು-ಈ ಮಗಳನ್ನು ಒಬ್ಬ ಬ್ರಾಹ್ಮಣೋತ್ತಮಂಗೆ ಕೊ ಟ್ಟರೆ ಆತನ ಸುಚರಿತೆಯಿಂದ ನನಗೆ ಮೋಕ್ಷವುಂಟಾಗುವುದು ಎಂದು ತಿಳಿ ದು, ಗೋವಿಂದಭಗವಾನನು ವಿಶಿಷ್ಟನೆಂಬುವಂ ಕೇಳಿದ್ದ ಕಾರಣ, ಆತನ ಮನೆಗೆ ಹೋಗಿ, ಆತನಿಗೆ ನಮಸ್ಕರಿಸಿ, ಇಂತೆಂದನು --ಸಾವಿರಾ ? ನನ ಗೊಬ್ಬಳು ಸುತೆಯಿರುವಳು. ಅವಳ ನೀವು ಅಂಗೀಕರಿಸಿಕೊಂಡು ನನಗೆ ಮುಕ್ತಿಸಾಧನವಂ ಮಾಡಬೇಕೆಂಬುದಾಗಿ, ನಾನಾಬಗೆಯಲ್ಲಿ ಹೇಳಿ ಬೇಡಿ, ಶರಣಾಗತನಾಗಲಾಗಿ, ಒಪ್ಪಿಕೊಂಡನು. ಆ ಬಳಿಕ ವೈಶ್ಯನು ತನ್ನ ಮನೆಗೆ ಹೋದನು. ಈತನು ತನ್ನ ಅನುಷ್ಟಾನವಂ ಮಾಡಿಕೊಂಡು ಇರುವಲ್ಲಿ, ಒಂದು ದಿನ ಪುರಾಣಾಗಮನ ನೋಡುತಿರುವಲ್ಲಿ, ನಾಲ್ಕು ಜಾತಿ ನಾರಿಯರ ಮದು ಟ | ಆ ಅ ಆ ಬ