ಪುಟ:ಬತ್ತೀಸಪುತ್ತಳಿ ಕಥೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ, ಹೊತ್ತುಕೊಂಡು ಬರುವನ-ರಾಯ ಕಂಡು 1(ಯಥಾ ಬಾಧತಿ ಬಾಧತೇ ?” ಎನ್ನಲಾಗಿ ; ಎಲೈ ರಾಯನೆ ! ಈ ಸವುದೆ ಹೊಲತೆಯು ಬಾಧಿಸುವದಿಲ್ಲ ; ನೀನು “ ಬಾಧತಿ ” ಎಂದ ಮಾತು ಬಾಧಿಸುತ್ತಿದೆ. ಆದಾಗ್ಯೂ ನಿನ್ನಂಥ ಮಹಾರಾಯ ಈ ಕಷ್ಟವ ತಪ್ಪಿಸಬೇಕಲ್ಲದೆ ಈ ರೀತಿಯಾಡಬಹುದೇ ? ಎಂದು ಉತ್ತರವ ಕೊಡಲಾಗಿ ; ರಾಯನು ಮೆಚ್ಚಿ ಅವನಿಗೆ ಸವಾಲಕ್ಷದ ವ್ಯ ಕೊಟ್ಟು ಕಳುಹಿಸಿದನು ಎಂದ ಮಾತಿಗೆ ಕನಕಾವತಿಯೆಂಬ ಪುತ್ತಳಿ ನಗುತ್ತ ಹಾಸ್ಯಗೆಯ್ಯು ಪೇಳಿದ ಉಪಕಥೆ '- ಕೇಳ್ಳೆಯ ಚಿತ್ರಶರ್ಮನೆ' ' ನಮ್ಮ ರಾಯ ಈ ರಾಜ್ಯ ಪರಿಪಾಲಿಸುವ ವೇಳೆಯಲ್ಲಿ ಒಂದು ದಿನ ದಿಗ್ವಿಜಯಕ್ಕಾಗಿ ತನ್ನ ಚತುರಂಗಸೇನೆ ಸಹಿತ ಹೋಟು ವೈರಿಗಳ ಜಯಿಸಿ ಶರಣಾಗತರ ಪಾಲಿಸಿ ಬರುವ ದಾರಿಯಲ್ಲಿ ಒಂದು ಆಲದ ಮರದ ನೆಳಲಿನಲ್ಲಿ, 2 ಒಬ್ಬ ಭೀಮರೂಪ ಕುಳಿತಿರುವುದ? ಕಂಡು,-ನೀನು ಯಾವ ದೇಶದಿಂದ ಬಂದೆ ಎನ್ನಲಾಗಿ ; ಅವನು 3 ಸಿಂಧು ದೇಶದ ಕಾಂತಾವತಿಯೆಂಬ ಪಟ್ಟಣದಿಂದ ವ್ಯಾಪಾರನಿಮಿತ್ತವಾಗಿ ಬಂದೆನು, ಎಂದ ಮಾತ ರಾಯ ಕೇಳಿ, ದಂಡು ಯಾವತ್ತು ಮುಂದೆ ಹೋಗಲಿ ಎಂ ದು ಅಪ್ಪಣೆ ಕೊಡಿಸಿ, ಹಿಂದೆ ರಾಯ ವ್ಯಾಪಾರಿ ಸಹ ಬರುತ್ತಿರುವಲ್ಲಿ - ದೂರದಲ್ಲಿ ಒಂದು ಆನೆ ಬರುವುದ ಕಂಡು, ಒಂದು ಮರದ ಕೆಳಗಿರ್ನರು ನಿಂತು, ವ್ಯಾಪಾರಿಯಿಂತೆಂದನು :--ಕೇಳೋ ಮಹಾರಾಯನೆ: ಬರುವ ಆನೆಯ ಮೇಲೆ ಕುಳಿತಿರುವಳು ಹೆಂಗಸು, ಗರ್ಭಿಣಿ, ಆ ಆನೆಗೆ ಬಲಗಣ್ಣು ಕುರುಡು, ಎನ್ನು ತಿರುವಲ್ಲಿ ಒಬ್ಬ ರಾಜಕುಮಾರ ಅಲ್ಲಿಗೆ ಬಂದು ತಾಂಬೂಲವ ತೆಗೆದು ಯಾರಿಗೂ ಕೊಡದೆ ತಾನೇ ಸೇವಿಸುತ್ತ ಬರುವನ ನೋಡಿ-ಇವನು ಕೋಮಟಿಗೆ ಜನಿಸಿದನೆಂದು ಹೇಳಲು ; ಈ ಮಾತುಗಳೆಲ್ಲ ರಾಯ ಕೇಳಿ, ಅಪ್ಪ ರಪಟ್ಟು--ನೀನು ತಿಳಿದ ಬಗೆ ಹೇಗೆ ? ಎಂದು ಕೇಳೆಲಾಗಿ ; ಆವ್ಯಾಪಾರಿ ಪಾ-2. ಎತ್ತಬಾರದ ಬಾಧೆಯೆನ್ನಲಾಗಿ; ಈ ಸವದೆಹೋಟೆಯು ಬಾಧಕವಿಲ್ಲ. - ನೀನು ಬದುಕಿಯಾ. ಪಾ-3, ಅಭಿರೂಪನೆಂಬ ಮಾರ್ಗಸ್ತ ಕುಳಿತಿರಲು. ಪಾ-4. ಸಿಂಧೂರದ ಕಾಂತಿಮತಿ ಎಂಬ ಪಟ್ಟಣದ ವ್ಯವಹಾರಿಕ ದರಿದ್ರ ದೋ ಷದಿಂದ ನೊಂದು ನಿನ್ನ ಕೀರ್ತಿ ಪ್ರತಾಪನ ಕೇಳಿ ಬಂದೆನೆಂಬುದ.