ಪುಟ:ಬತ್ತೀಸಪುತ್ತಳಿ ಕಥೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಕಿ ಇತ್ತೀಸರyಳಿ-ಕಥೆ. ಅರಸನ ಕಾಣಿಸಿಕೊಳ್ಳಲಾಗಿ; ರಾತ್ರಿಯ ವಿವರವೇನು' ಎಂದು ಆರಸು ಕೇಳಲಾಗಿ; ಆ ವಿಕ್ರಮ'ಅವಳು ಮಾಯಾಂಗನೆ,” ಎಂದು ಅವಳ ವೃತ್ತಾಂ ತವ ಹೇಳಿ, ಅವಳದೊಂದು ಕಾಲ ಕತ್ತರಿಸಿ ತಂದು ನನ್ನ ಮನೆಯ ಚಳಿಯಲ್ಲಿ ಇರಿಸಿ ಇದ್ದೆನೆ. ತರಿಸಿ ಪರಾಂಬರಿಸ ಬಹುದು' ಎನ್ನಲಾಗಿ; ಅರಸು ನಾಲ್ಕು ಜನ ಕಾಮಾಟದವರಂ ಕರೆದು, ಆ-ಕಾಲ ತುಂಡಂ ತರಹೇಳಿ ಕಳುಹಿಸಲಾಗಿ; ಆ ಜನ ಬಂದು ನೋಡಿ ಜೋಧ್ಯಂಬಟ್ಟು, ಅರಸಿನ ಬಳಿಗೆ ಬಂದು, ಆಕಾಲ ಶುಂಡ ತರುವುದಕ್ಕೆ ಒಂಬತ್ತು ಬಂಡಿ ನೂಯಿ ಎತ್ತು ನೂಲು ಜಜನವಾದರೆ ತರಬಹುದು' ಎಂದು ಹೇಳಿದುದಕ್ಕೆ, ಅದೆ ಮರಿಗೆ ಅರಸಿನ ಅಪ್ಪಣೆಯಾಗ ಲಾಗಿ; ಆ ಜನ ಎತ್ತು ಬಂಡಿ ಸಹಿತ ತೆಗೆದುಕೊಂಡು ಬಂದು, ಸನ್ನೆಯಿಂದ ಬಂಡಿಯಮೇಲೆ ಹೇ' ಎತ್ತುಗಳ ಕಟ್ಟಿ ಹೊಡೆತರುವಲ್ಲಿ, ಊರ ಬಾಗಿಲು ಹಿಡಿಯದಿರಲಾಗಿ, ಅರಸಿಗೆ ಬಂದು ಬಿನ್ನಿಸಿದರು. ಅರಸು ಊರ ಬಾಗಿಲ ಕೆಡಹಿ ತರಹೇಳಿದುದwಿಂದ ಅದೇ ಪ್ರಕಾರಕ್ಕೆ ಭಾಗಿಲ ಕಡಹಿ ಅರಮನೆಯ ಬಳಗೆ ತಂದು ನಿಲ್ಲಿಸಲಾಗಿ, ಆ ಜನ ಯಾವತ್ತೂ ತಲೆಬಾಗಿದವರಾದರು. ಕೋಟಿಸೂರಪ್ರಕಾಶಮಾನವಾಗಿ ಆ ಕಾಲಿನಲ್ಲಿ ಇರುವ ಅಂದುಗೆಯನ್ನು ಅರಸು ಕಂಡು, ಕಳತರಿಸಿ ನೋಡಿ, ಅತಿಸಂತೋಷದಿಂದ ತೆಗೆದುಕೊಂಡು ಹೋಗಿ, ತನ್ನ ಪಟ್ಟದ ಸತಿಗೆ ಕೊಡಲಾಗಿ; ಪಟ್ಟದರಸಿ ತನ್ನ ಕಾಲಿಗಿಟ್ಟು ನೋಡಲಾಗಿ, ಇನ್ನೊಂದು ಕಾಲಿಗೆ ಇಂಥ ಅಂದುಗೆ ಆಗಬೇಕೆಂದು ಅರಸಿನ ಕೂಡೆ ಹೇಳಲಾಗಿ, “ಒಳ್ಳೆಯದು' ಎಂದು ಅರಸು ತನ್ನ ಬೊಕ್ಕಸದಲ್ಲಿದ್ದ ರಂಗಳು ಯಾವತ್ತೂ ತೆಗೆಸಿ ಅಕ್ಕಸಾಲಿಗರಂ ಕರೆಸಿ, ಅಂದುಗೆಯ ತರಿಸಿ ಇದರ ಮೇರೆಗೆ ಇನ್ನೊಂದು ಮಾಡ ಹೇಳಲಾಗಿ; ಅಕ್ಕಸಾಲಿಗರು ಈ ಅಂದುಗೆಯಂ ನೋಡಿ ಇಂತೆಂದರು :-'ಎಲೈ ಸ್ವಾಮಿಯೇ ! ಇದ ಅಲ್ಲಿ ಕೆತ್ತಿರುವುದಕ್ಕೆ ಸಮನಾದ ರತ್ನವ ಕೊಟ್ಟರೆ ಕೆತ್ತಿ ಇದು ಜತೆ ಮಾ ಡೇವು. ನಿಮ್ಮ ಭಂಡಾರದಲ್ಲಿರುವ ರತ್ನಗಳಲ್ಲಿ ಈ ಅಂದುಗೆಯ ತುದಿಗೆ ಕತಿ ಇರುವ ರತ್ನದ ಸಮಾನವಿಲ್ಲ” ಎಂದ ಮಾತು ಅರಸಿ ಕೇಳಿ, ಆತಿ ವ್ಯಾಕುಲದಿಂದ ಇಂತೆಂದಳು :-ಇದು ಜತೆಗೆ ಇನ್ನೊಂದು ನೀವು ಮಾಡಿಸಿ ಕೊಟ್ಟರೆ ಸರಿ, ಇಲ್ಲದೇ ಇದ್ದರೆ ಪ್ರಾಣಬಿಡುವೆನು” ಎಂದು ನಿಶ್ಚಯದ ಮಾಡ ನಾಡಲಾಗಿ; ಆರಸು ಅನೇಕ ಯೋಜನೆ ಪ್ರತಾಡಿ ಹರಿಯದೆ, ಇದಕ್ಕೆನಾಡ