ಪುಟ:ಬತ್ತೀಸಪುತ್ತಳಿ ಕಥೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ಬಸಪುತ್ತಳಿ ಕಥೆ. ೧೬ ನೆಯ ಕಥೆ. M m ಹದಿನಾ೦ನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ ಭೋಜನ ತಾಂಬೂಲವಂ ತೀರಿಸಿ, ಸೋಡಶ ಮಹಾದಾನಂಗಳಂ ಮಾಡಿ, ಗಂಧಮಾಲ್ಯಾಭರಣಾಲಂಕೃತನಾಗಿ, ರತ್ನಖಚಿತವಾದ ಮಾವುಗೆಗಳ ಮೆಟ್ಟ ಕೊಂಡು, ಎಂದಿನಂತೆ ಚಿತ್ರಶರ್ಮನ ಕೈಲಾಗಿನಲ್ಲಿ ಓಲಗಸಾಲೆಗೆ, ಬಂದು, ನಿಂಹಾಸನದೆಡೆಗೆ ನಡೆತಂದು, ಬಲದ ಕಾಲಂ ನಿಡುವ ಸಮಯದಲ್ಲಿ ಆ ಸೋಪಾನದ ಕುರಂಗಲೋಚನೆಯೆಂಬ ಪುತ್ತಳಿಯು-ಹೋಹೋ ! ನಿಲ್ಲು ನಿಲ್ಲು! ಈ ನಿಂಹಾಸನವನ್ನೇಅದಿರು ಭೋಜರಾಯನೇ ? ನನ್ನೊಡೆಯನಾದ ವಿಕ್ರಮಾದಿತ್ಯರಾಯನಂತೆ ವೀರವಿತರಣಗಳುಳ್ಳಡೆ ಈ ಸಿಂಹಾಸನವನ್ನೇ ಕು, ಇಲ್ಲವಾದರೆ ಕೆಲಸ ರು. ಮಿಯ ಕುಳಿತೆಯಾದರೆ ನಿನ್ನ ತಲೆ ಸಹಸ್ರ ಹೋಳಾಗುವುದು ? ಎಂದು ಧಿಕ್ಕರಿಸಲಾಗಿ ; ಭೋಜರಾಯನು ಖಿನ್ನನಾಗಿ ಬೇರೊಂದು ನಿಂಹಾಸನದಲ್ಲಿ ಕುಳಿತು, ಜಿತ ಕರ್ಮನಿಂದ ಹೇಳಿಸಿದ ಕಥೆ:- ಎಲೆ ಪುತ್ತಳಿಯೆ ! ಕೇಳು, ಧಾರಾಪುರದಲ್ಲಿ ನಮ್ಮಿ ಭೋಜರಾಯ ನು ಸುಖಾಜ್ಯಂಗೆಯ್ಯುವಲ್ಲಿ ಒಂದು ದಿನ ಒಬ್ಬ ಬೇಡನ ಸತಿ ರುಬ್ಬಿಕಯಂ ಬವಳು ಒಂದು ಹುಲ್ಯಂ ತಂದು 1 ಕೈಗಾಣಿಕೆಯೊಪ್ಪಿಸಲಾಗಿ ; (ರಾಯ ಜಿಂಕೆಯಂ ನೋಡಿ-ಇದು ಇಷ್ಟು ಕಂಗೆಟ್ಟಿರುವ ಕಾರಣವೇನೆಂದು ಕೇಳ ಲಾಗಿ; ಅವಳಾನಾತಿಗೆ-ಎಲೈ ರಾಜನೇ ! ನಿನ್ನ ಕೀರ್ತಿಪತಾಪವನ್ನು ದೇ ವಕನ್ನೆಯರು ಹಾಡುತ್ತಿರಲದನ್ನು ಕೇಳುತ್ತ ಮನಸೋತು ಈ ಹುಲ್ಲೆ ಹುಲ್ಲು ಮೆಯ್ಯುವುದನ್ನೂ ಮೆಲುಕು ಹಾಕುವುದನ್ನೂ ಸಹ ಮರೆತು ಹೀಗೆ ಬಡ ವಾಯಿತೆಂದು ಹೇಳಲಾಗಿ ;) 1 ರಾಯನು ಮೆಚ್ಚಿ ಅವಳಿಗೆ ಸವಾಲಕ್ಷ ದ್ರವ್ಯವನ್ನು ಕೊಟ್ಟು ಕಳುಹಿಸಿದನು ಕಣಾ !-ವಿಂದ ಮಾತಿಗೆ ಕುರಂ ಗಲೋಚನೆಯೆಂಬ ಪುತ್ತಳಿಯು ನಗುತ್ತ ಹಾಸ್ಯಂಗೆಯ್ದು ಹೇಳಿದ ಉಪಕಥೆ:- ಕೇಳ್ಳೆಯ ಚಿತ್ರಶರ್ಮನೆ! ನಮ್ಮ ಒಡೆಯನಾದ ವಿಕ್ರಮದಿತ್ಯರು ಪಾ-1, ಕೈ ಕಾಣಿಕೆಯೊಪ್ಪಿಸಿ, ಎರಲೆಯ ಮರಿಯಮುಖದಿಂದ ನಿಮ್ಮ ಯಂ ಕಾಣಬೇಕೆಂದು ಒಂದೆನೆಂದು ಹೇಳಲು; ಅದಂಕೇಳಿ.