ಪುಟ:ಬತ್ತೀಸಪುತ್ತಳಿ ಕಥೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 m m. ಕರ್ಣಾಟಕ ಕಾವ್ಯ ಕಲಾನಿಧಿ, ಚಿತ್ರಶರ್ಮನ ಕೈಲಾಗಿನಿಂದ ಮೂವತ್ತೆರಡು ಪುತಲೀಯುಕ್ತವಾದ ನಿಂಹಾ ಸಸದ ಬಳಿಗೆ ಬಂದು ಬಲದ ಕಾಲಂ ನೀಡುವ ಸಮಯದಲ್ಲಿ -ಆ ಹದಿನೆಂಟ ನೆಯ ಸೋಪಾನದ ರತ್ನ ಚಂಡಿಕೆಯೆಂಬ ಪುತ ಆಯು-ಹೊ ಹೋ ! ನಿಲ್ಲು ನಿಲ್ಲು ! ಎಂದು ಧಿಕ್ಕರಿಸಲಾಗಿ; ಭೋಜರಾಯನು ಖಿನ್ನನಾಗಿ ಬೇರೆ ನಿಂಹಾಸನದಲ್ಲಿ ಕುಳಿತು, ಚಿತ್ರಶರ್ಮನಿಂದ ಹೇಳಿಸಿದ ಕಥೆ :- ಎಲೆ ಪುತ್ತಳಿಯೆ, ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ ಯನು ಸುಖರಾಜ್ಯಂಗೆಯುತಿರುವಲ್ಲಿ ಕಾಶ್ಮೀರ ದೇಶದ ಸರ್ವತೋಭವ ವೆಂಬ ಪಟ್ಟಣದರಸು ತಲೆತುಂಗನಿಗೆ ನೀಮಂತಿನಿಯೆಂಬ ಮಗಳು, ಬುದ್ದಿಶಾಲಿಯೆಂಬ ಆತನ ಪ್ರಧಾನನಿಗೆ ಸುಮುಖನೆಂಬ ಮಗನು ಇದ್ದರು. ಆ ಅರಸಿನ ತನುಜೆ ಪ್ರಧಾನಿಯ ತನುಜ ಸಹ ವಿದ್ಯಾಪಾಲನೆಂಬ ಬ್ರಾಹ್ಮ ಈತನನ ಬಳಿಯಲ್ಲಿ ವಿದ್ಯಾಭ್ಯಾಸವಂ ಮಾಡುತ್ತಿರುವಲ್ಲಿ-ಆ ನೀ ಮಂತಿನಿ ಸುಮುಖನಮೇಲೆ ಮೋಹಿನಿ ಇರುವಳು, ಆ ಸುಮುಖನು ಅವಳ ಮೇಲೆ ಕಾವಿಸಿ ಇರುವನು. ಇಷ್ಟಲ್ಲಿ ಅರಸಾದ ಅವಳ ತಂದೆ ನಿಂಗ ಇಡೀಭದ ಅರಸನ ಮಗನಿಗೆ ತನ್ನ ಮಗಳ ಕೊಡಬೇಕೆಂದು ನಿಶ್ಚಯಿಸಲು, ಅದ ಮಗಳಾದ ಸೀಮಂತಿನಿ ತಿಳಿದು, (ಅದು ತನಗೆ ಇಷ್ಟವಿಲ್ಲದಿರಲು, ಒಂದು ದಿನ) ರಾತ್ರಿಯಲ್ಲಿ ಬೇಕಾದಷ್ಟು ವನ್ಯಮ ಒಡನೆ ಸಹ ತೆಗೆದುಕೊಂಡು, ಪ್ರಧಾನನ ಮಗ ಸುಮುಖನ ಬಳಿಗೆ ಬಂದು, ತನ್ನ ತಂದೆ ಮಾಡಿರುವ ಆಲೋಚನೆಯಂ ಹೇಳಿ, ತನ್ನ ವಿವರವಂ ತಿಳಿಸಿ, . ಅಸುಮುಖನ ಕರೆದು ಕೊಂಡು 1 ಉತ್ತರದಿಕ್ಕಿನಲ್ಲಿ 1 ಪೋಗಿ, ಪಯಣಗತಿಯಿಂ ಬಂದು ಫೆರಾ ರದಲ್ಲಿ ಬರುತಿಪ್ಪ ಸಮಯದಲ್ಲಿ ಬಾಯಾರ್, ನೀರಂ ಕಾಣದೆ, ಒಂದು ಚೂತವೃಕ್ಷದ ನೆಳಲಲ್ಲಿ ಕುಳಿತುಕೊಳ್ಳಲಾಗಿ; : ಆಕುಮಾರನು ಈಕೆಯ ಬಳಲಿಕೆಯಂ ನೋಡಿ ಕನಿಕರಪಟ್ಟು, ಬಳಲಿಕೆಯಂ ತಿರಿ ಸಬೇಕೆಂದು ಅಮಾವಿನ ಮರದಲ್ಲಿ ರುಚಿಕರವಾದ ಒಂದು ಹಣ್ಣನ್ನು ಕೊಟ್ಟು ಕೊಡಲು; ಅವಳು ಆ ಹಣ್ಣ ಮೆದ್ದರೂ ದಾಹ ತೀರದೆ ಇರ ಲು ನೋಡಿ, ಅವಳ 3 ದಾಹ ತೀರಿಸಬೇಕೆಂದು ನಾನು ನೀರು ತರುವ ಮಾ-1, ಉತ್ತರದೇಶಕ್ಕಂ. 2. ದಾಹ ಕಂಡು. 3. ಸುಸ್ತಿನಿಂದ ಬಳಲಿರುವವಳ. M s ಟ_m