ಪುಟ:ಬತ್ತೀಸಪುತ್ತಳಿ ಕಥೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ) 3. ಬತ್ತೀಸಪುಳಿ ಕಥೆ. v೧ ಸಲಾಗಿ; ಅದಕ್ಕೆ ಅದೇವಿಯು ಮೆಚ್ಚಿ ಯಥಾಪ್ರಕಾರ ಶಿರವನಿತ್ತು ಪ್ರಸ ನ್ಯಳಾಗಿ--ನಿನಗೆ ಬೇಕಾದ ವರನಂ ಬೇಡಿಕೆ ಕೊಡುತ್ತೇನೆ ಎನ್ನಲಾಗಿ ; ಅರಸು-ವಿಕ್ರಮಾದಿತ್ಯರಾಯನಂತೆ ದಾತನಾಗಬೇಕು. ನನಗೆ ಧನಧಾನ್ಯಂ ಗಳಾದಿಯಾಗಿ ನನ್ನ ಭಂಡಾರದಲ್ಲಿ ತುಂಬಿರಬೇಕು, ಎಂದು ಕೇಳಲಾಗಿ, ಆ ಮಾತಿಗಾದೇವಿ- ಎಲೈ ಅರಸೆ' ನೀನು ಕೇಳಿದುದು ಬೇಕಾದರೆ ದಿನಚರಿ ನಿನ್ನ ತಿರಸ್ಸ ಪೂಜೆಯಂ ಮಾಡಿ ಸಮರ್ಪಿಸಿದರೆ ನಿನ್ನ ಭಂಡಾರದಲ್ಲಿ ತುಂಬಿ ರುವುದು. ಇಲ್ಲದಿದ್ದರೆ ಇಲ್ಲವು-ಎಂದ ವಾಕೃವಂ ಕೇಳಿ, ಅರಸು-ನಿನ್ನ ಅಪ್ಪಣೆಯಮೇಲೆ ನಡೆಯುವೆನೆಂದು ಹೇಳಿದುದಕ್ಕೆ, ಅದೇವಿಯು ವರವನ್ನಿತ್ತು ಮಾಯವಾದಳು. ಬಳಿಕ ಅರಸು ದಿನಚರಿ ತನ್ನ ಶಿರವ ಪೂಜೆಗೆಯುವುದಕ್ಕೆ ಭಂಡಾರದಲ್ಲಿ ದ್ರವ್ಯ ಆದಿಯಾಗಿ ಸಕಲವನ್ನೂ ದಾನವ ಮಾಡಿ ಮಧ್ಯಾಹ್ನ ದರಿದ್ರನಾಗಿರುವನು ಎಂದು ಅಭಟ್ಟ ಹೇಳಲಾಗಿ; ರಾಯ ಕೇಳಿ ವಿಸ್ಮಿತ ನಾಗಿ, ಅದ ನೋಡಬೇಕೆಂದು, ಆಭಟ್ಟನ ಕರೆದುಕೊಂಡು, ಆಕಾಶವಾ ರ್ಗದಲ್ಲಿ ಆಚಂಡಿಕಾದೇವಿಯ ಗುಡಿಯ ಬಳಿಗೆ ಹೋಗಿ, ಕಾದಿರಲಾಗಿ; ಎಂದಿನಂತೆ ರುದ್ರಕೀರ್ತಿ ಬಂದು ದೇವಿಗೆ ತಿರಸ ಪೂಜೆಯಂ ಮಾಡಿದು ದಿಂದ ಅಕ್ಷಣವೇ ದೇವಿಯ ಕಟಾಕ್ಷದಿಂದ ಯಥಾಪ್ರಕಾರಕ್ಕೆ ತಿರಸ್ಸು ಉಂಟಾಗಿ, ಅರಸು ಎದ್ದು ಅರಮನೆಗೆ ಹೋಗಲಾಗಿ; ಭಂಡಾರದಲ್ಲಿರುವುದ ನೈಲ್ಲಾ ದಾನವಂ ಮಾಡಿ, ಸತ್ಯನಾಶವಣದಿಂದಿರುತ್ತಿರಲು ; ಇತ್ತಲಾಬಳಕೆ ನಮ್ಮ ರಾಯ ಆದೇವಿಯನ್ನು ರುದ್ರಕೀರ್ತಿಯೋಪಾದಿ ಪೂಜಿಸಿ ತನ್ನ ತಿರವಂ ಛೇದಿಸಿ ಸಮರ್ಪಿಸಲಾಗಿ ; ಆದೇವಿಯು ನೋಡಿ ಮೆಚ್ಚಿ ರಾಯುಸಿಗೆ ಮುನ್ನಿನಂತೆ ತಿರನಂ ಕೊಟ್ಟು,ನಿನಗೆ ಬೇಕಾದ ವರವ ಬೇಡೆನ್ನಲಾಗಿ ; ರಾಯನಿಂತೆಂದನು -ರುವ ಕೀರ್ತಿ ನಿರಂತರ ತಿರವ ಕೊಡುವ ಪೂಜೆಗೆ. ಅವನ ಭಂಡಾರದಲ್ಲಿ ಎಲ್ಲಿ ತುಂಬಿರುವಂತೆ ನೀ ವರವನಿತೆಯಷ್ಟೆ. ನಾನು ಬೇಡುವುದೇನೆಂದರೆ-ರುದ್ರತೀರ್ತಿ ನಿತ್ಯ ನಿನಗೆ ತಿರಸ್ಸ ಪೂಜೆ ಮಾಡದಿ ದರೂ ಅವನ ಭಂಡಾರದಲ್ಲಿದೆ ಅಷ್ಟು ತುಂಬಿರುವಂತೆ ನನಗೆ ವರವ ಪಾಲಿಸೆನ್ನಲಾಗಿ , ಆದೇವಿಯು-ಹಾಗೇ ಆಗಲೆಂದು ವರವ ಕೊಟ್ಟು ಕಳು ಹಿಸುವಲ್ಲಿ, ರಾಯಂಗೆ ಕೇಳಿದುದ ಕೊಡುವ ಒಂದು ರತ್ನನ ಕೊದಲಾಗಿ ; ರಾಯ ಆದಂ ತೆಗೆದುಕೊಂಡು, ಭಟ್ಟನ ಕರೆದುಕೊಂಡು, ಇಲ್ಲಿಗೆ ಬಂದು, ಆ 11