ಪುಟ:ಬೃಹತ್ಕಥಾ ಮಂಜರಿ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಹ ತ ಥಾ ನ ೦ 8 ರಿ . ೨೬೧ ಗಾರನಂ ಕರತರುವಂತೆ ಬರುತ್ತಿರ್ದ ಆನಂದವಲ್ಲಿಯೂ, ಈ ಪರಿಯನೆಲ್ಲಮಂ ದೂರ ಮಾಗಿಯೇ ನೋಡಿ, ಆಹಾ ಇದೇನು ನನ್ನ ಪತಿಯನ್ನು ಬಂಧಿಸಿ, ಈಗತಾನೇ ಮನೆಗೆ ಕರೆದುಕೊಂಡು ಹೋದರಲ್ಲಾ, ಅವರನ್ನೆ ರಂ ಮೋಸಗೊಳಿಸಿ, ತನ್ನ ಕಿಂಕರನೊ೦ ದಿಗೆ ಇಲ್ಲಿಗೆ ಬಂದಿರುವನು, ಈಗ ಕೈಯೊಳೊಂದು ಖಡಮಿರುವದು, ಈ ಮಹದ ವಸ್ಥೆಯೊಳು ಇದ್ದಲ್ಲಿ ದೊರೆತುದು, ಈಗ ನಾಂ ಸಾಸಕ್ಕೆ ಹೋದರೆ ತಲೆಯಂ ಕತ್ತ ರಿಸಿ ಹಾಕುವದರಲ್ಲಿ ಸಂದೇಹವೇ ಇಲ್ಲವ, ದಟ್ಟ ಹಡುವದೆಂತು, ಸುಮ್ಮನಿರುವದು ತಾನೇ ಹೇಗೆಯೆಂದು ತನ್ನ ತಂಗಿಯಾದ ಬಿಂಬಾಧರೆಯೊಳು ಹೇಳುತ್ತಿರುವಾಗ್ಯ. ದಾರಿಯಲ್ಲಿ ಹೋಗಿ ಬರುತ್ತಿರುವರೆಲ್ಲರೂ ಗುಂಪಾಗಿ ನಿಂತು ನೋಡುತ್ತಿರಲು, ಮೆಲ್ಲನೆ ತಮಗೆದುರಾಗಿ ಜನಸಮೂಹದೊಂದಿಗೆ ಬರುತ್ತಿರುವ ತರುಣಿ ಮಣಿಯರಿಲ್ವರಂ ನೋಡಿದಾ ಬ್ರಹ್ಮದೇಶದ ಕುಶಲತಂತ್ರನು, ಸ್ನಾತಾ ! ಇತ್ತ ನೋಳ್ಳುದು ಮೊದಲು ಬಂದು, ನಮ್ಮ ಬಲಾತ್ಕಾರವಾಗಿ ಹಿಡಿದು, ತನ್ನ ಮನೆಗೆ ಕರೆದುಕೊಂಡು ಹೋಗಿ ಭೋಜನಮಂ ಮಾಡಿಸಿ ತನ್ನ ಗಂಡನೆಂದು ನಮ್ಮ ಬಲಾತ್ಕರಿಸಿದ ಪಿಶಾಚಿಯೂ ಅವಳ ತಂಗಿಯ ಜನಂಗಳಂ ಗುಂಪ ಸೇರಿಸಿಕೊಂಡು ಬರುತ್ತಿರುವದು ನೋಡಿದರೆ ನಮ್ಮನ್ನು ಬಲವದ್ಭಂಧದಿ ಹಿಡಿದುಕೊಂಡು ಹೋಗದೆ ಬಿಡಲಾರರೆಂದು ತೋರುತ್ತದೆ. ಮುಂದೇನು ಮಾಳ್ಳುದೊ ಯೋಚಿಸಿರೆಂದು ಹೇಳಲು, ಆ ಕನಿಷ್ಟ ಮದನಸುಂದರಂ ಅವರಂ ನೋಡುತ್ತಲೇ, ಎಲೈ ಪ್ರೀತಿಪಾತ್ರನೇ ಈ ಊರೊಳಿರಬಾರದೆಂದು ನಾಂ ಹೇಳಿದರೆ ನೀಂ ಪಾಸ್ಯ ಮಾಡಿದೆಯೇ ಆಗ ಬಂದಿರ್ದ ಪಿಶಾಚಿನಿಯು ತೊಲಗಿದಕೂಡಲೆ ಈ ಪಿಶಾಚಗಳು ಬಂದವು, ಇವರಂ ತೊಲಗಿಸುವದು ಪರದದುರ್ಘಟನಾಗಿಹುದು, ಇವರು ಬರುವದರೊಳಗಾಗಿ ನಾವು ಓಡಿಹೋಗದಿದ್ದರೆ ನಮ್ಮ ಗತಿಯು ನೀರು ಪಾಲಾದಂತೆಯ ನಿಶ್ಚಯವೆಂದು ಅಲ್ಲಿಂದ ಓಡಲಾರಂಭಿಸಿ, ದಾರಿಯ ಸವಿತಾಪದೊಳು ಒಂದಾನೊಂದು ಆಶ್ರಮವಂ ಹೊಕ್ಕು ಅದರಲ್ಲಿನ ಮಪಮಂ ಸಾರಿ, ಅಲ್ಲಿ ನೆಲೆಯಂ ಮಾಡಿಕೊಂಡಿರ್ದ ತಪಸ್ವಿನಿಯಂ ಕಂಡು ಆಮಾ ಮಹನೀಯರೇ ಭಯಗ್ರಸ್ತರಾಗಿ ರುವ ನಮ್ಮ ಕಾಪಾಡಬೇಕೆಂದು ಪ್ರಾರ್ಥಿಸಲಾ ವೃದ್ದ ತಾಪಸಿಯು ಎಲೈ ಸುಕುಮಾ ರಾಂಗರೇ ! ಭಯವಂಡಿ, ನನ್ನ ಆಶ್ರಮದಲ್ಲಿರುವವರಿಗೂ, ನಿಮಗಾವ ಅಪಾಯವೂ ಸಂಭವಿಸಲಾರದೆನಲು, ಸಂತೋಷಚಿತ್ತರಾಗಿ, ಆವಾ ನಮಗುಂಟಾದ ಭಯಕಾರ ಣಮಂ ಸಾವಕಾಶವಾಗಿ ತಿಳಿಸುವೆವೆಂದೊರೆಯೆ ಅವರಿರರು ಒಂದೆಡೆಯೊಳು ಹೊಗಿಸಿ ಬಾಗಿಲು ಭದ್ರಪಡಿಸಿರುವ ಸಮಯಕ್ಕೆ ಅನಂದವಲ್ಲಿಯೂ ತನ್ನ ತಂr Lಂ ದಿಗೆ ಬಂದು, ಆಶ್ರಮದ ಬಾಗಿಲೊಳು ನಿಂದಿರುವ ತಪಸ್ವಿನಿಯಂ ಕುರಿತು, .ಅವಾ ನನ್ನ ಪತಿಗೆ ಹುಚ್ಚು ಹಿಡಿದು ತನ್ನ ಸೇವಕನೊಂದಿಗೆ ಮನಸ್ವಿಯಾಡುತ್ತ ತಮ್ಮಾ ಮವಂ ಈಗ ತಾನೇ ಒಳಹೊಕ್ಕರು, ಅವರಂ ದಯಮಾಡಿ ನನ್ನ ಸ್ವಾಧೀನರಂಮಾಡಿ ಪ್ರಣ್ಯ ಧರಂಗಳಂ ತಾವು ಹೊಂದಬೇಕೆಂದು ಪ್ರಾರ್ಥಿಸುವ ಕಾಲಕ್ಕೆ ಸೂಕ್ಯಾಸ