ಪುಟ:ಬೃಹತ್ಕಥಾ ಮಂಜರಿ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ ಥಾ ನ ೦ 8 ರಿ. ೨೭ ಸೇ ಈ ದಿನದೊಳು ನಮ್ಮ ಮನೆಯೊಳು ಭೋಜನಮಂ ಮಾಡಿದಾತನು ಎಂದು ಒತ್ವನ ತೋರಲು, ಆ ಜೈಷ್ಟ ಚಿರಂಜೀವಿಯು ಸ್ವಾಮಿಾ ನಾನಿಂದು ಇವಳ ಮನೆಯಲ್ಲಿ ಭುಂಜಿಸಿದವನಲ್ಲವು. ಸತ್ಯ ಮರುತ್ತನ ಮನೆಯಲ್ಲಿ ಊಟಮಾಡಿದಿವೆನಲು ಆಮಾತಿಗೆ ಆ ಸತ್ಯ ಮರುಮನು ಹೌದು ಎಂದನುಮೋದಿಸಿದನು, ಬಿಂಬಾಧರೆಯಂ ಕರೆದು ಎಲ್ಲಿ ಬಿಂಬಾಧರೆಯೇ ಇವರೊಳು ನಿನ್ನ ಭಾವನಾರು, ಇವನಿಗೆ ನಿನಗೂ ನಡೆದ ಮಾತುಗಳೇನು, ಹೇಳೆಂದು ಆಜ್ಞಾಪಿಸಲು, ಸಾಮಾ ಈತನಂ ಕುರಿತು ನಮ್ಮೊಳು ಕುಪಿತನಾಗಿ ಇರುವದಕ್ಕೆ ಕಾರಣವೇನೆ ಭಾವನವರೇ ಎಂದು ನಾನಾ ಬಗೆಯಾದ ವಿನಯೋಕ್ತಿಗಳಿಂದ ಮನ್ನಿಸುತ್ತಾ ಬರಲು, ಈತಂ ನಾಂ ಮದುವೆಯಾದವನೇ ಅಲ್ಲ, ನಾನೀಕೆಯ ಪತಿಯೇ ಅಲ್ಲ, ನಾಂ ಪರದೇಶದಿಂದ ಈದಿನವೇ ಬಂದಿರುವೆನು ನೀನೆ ೩೦ ಮದುವೆಯಾಗು ಎಂದು ಹೇಳಿದನೆಂದು ಕನಿಷ್ಠ ಮದನಸುಂದರನಂ ತೋರಲು ಮಹಾರಾಜರೇ ನಾನಾಮಾತುಗಳ ಆಡಿದ್ದು ನಿಜವ, ಎಂದು ಆ ಕನಿಷ್ಠ ಮದನಸುಂ ದರಂ ಹೇಳಿದನು, ಅನಂತರ ಆ ಸ್ವರ್ಣ ಕಾರನನ್ನೂ , ಆ ಸತ್ಯ ಮರುತನನ್ನೂ , ಮದಯಾನಂ ತ್ರಿಯೇ ಮೊದಲಾದವರೆಲ್ಲರಂ ಕರೆಯಿಸಿ ನಾಲ್ವರನ್ನೂ ಮುಂಗಡೆಯೊಳು ನಿಲ್ಲಿಸಿ ನಿಮ ಗೂ ಈ ಮದನಸುಂದರರಿಗೂ ನಡೆದ ಮಾತುಗಳೇನು? ಯಾರಾರು ಇವರಿಗೆ ಯಾವ ಯಾವ ಪದಾರ್ಥಂಗಳಂ ಕೊಟ್ಟಿರುವಿರಿ ಏನೇನು ಮಾತುಗಳಂ ಆಡಿದಿರಿ ಅದನ್ನೆಲ್ಲ ಮಂ ಹೇಳಿ ದೃಷ್ಟಾಂತವಾಗಗೊಳಿಸಿರೆಂದು ಆ ರತ್ನಾ೦ಗದ ಮಹಾರಾಯನ್ನು ಪ್ರಶ್ನೆ ಮಾಡಲು, ಆ ಜನರೆಲ್ಲರೂ ಯಾರಿಗೆ ಯಾವ ಆಭರಣಮಂ ಕೊಟ್ಟಿದ್ದರೋ ಅವನ ನಲ್ಲದೆ ಅನನಂ ತೋರುತ್ತಾ ಒರಲು, ಅದಕ್ಕವಂ ನಿರಾಕರಿಸಿ ಮತ್ತೊರ್ವ೦ ಆದಂ ನಾಂ ತೆಗೆದುಕೊಂಡವನೆಂದು ಹೇಳುವನು, ಯಾರಸಂಗಡ ಯಾರು ಕಲಹಮಂ ಮಾಡಿ ದರೋ ಅವರನಲ್ಲದೆ ಅನ್ಯರಂ ತೋರಲು ನಾನಲ್ಲವೆಂದು ನಿರಾಕರಿಸುತ್ತಾ ಬರಲು ಅನ್ನು ನಾನವರಸಂಗಡ ವಾಗ್ವಾದವಿಂ ಗೈದವನೆಂದು ಹೇಳುತ್ತಾ ಬರುವಂ. ಹೀಗೆ ಸಂಬಂಧ ಮಿಲ್ಲದೆ ಭ್ರಾಂತರಂತೆ ನಟಿಸುತ್ತಾ ನುಡಿಯುತ್ತಾ ಬರುವ ಜನರಂನೋಡಿ ರಾಯಂ ಹೊಂದಿದ ಆಶ್ಚರಕ್ಕೆ ಪಾರವನ್ನ ರಿಯದವನಾಗಿ ಮಂದಹಾಸಂ ಗೈಯ್ಯು ನಿಂತಿರುವವನಂ ಕುರಿತಾ ಯೋಗಿನಿಯೆಂಬ ಹೆಸರನ್ನಿಟ್ಟು ಕೊಂಡಿರ್ದ ಮಂದಸ್ಮಿ ತೆಯು ಕೈಯ್ಯಳಂ ಜೋಡಿಸಿಕೊಂಡು, ಸ್ವಾಮಿ ರತ್ನಾ೦ಗದಮಹಾರಾಜರೇ ನಾನೀ ವರಿಗೂ ಭಾಗ್ಯಹೀನಳೆಂದು ನಿಜವಾಗಿ ನಂಬದ್ದೆನು ದೈವ ಯೋಗದಿಂದ ಬಹುಕಾಲದ ಹಿಂದೆ ಆಗಲಿದ್ದ ಪತಿಯನ್ನೂ ಪ್ರತ್ರರನ್ನೂ ಈ ದಿನದೊಳು ಹೊಂದಿದವಳಾದ್ದರಿಂದ ನನ್ನಂಥಾ ಭಾಗ್ಯಶಾಲಿನಿಯು ಈ ಭೂಮಂಡಲದೊಳಗಾಗಿಯೇ ಇಲ್ಲವೆಂದು ತಿಳಿದವ ಉಾಗಿದ್ದೇನೆ. ಭಗವದನುಗ್ರಹದಿಂದ ಸೇರಿದ ಈ ಬಾಂಧವರೊಂದಿಗೂ ತನ್ನೊಡನೆಯೂ ಸೇರಿ ಈ ರಾತ್ರೆಯೊಳು ಭೋಜನಾದಿಗಳಂ ಮಾಡಿ ವಿನೋದದಾಗಿ ಕಾಲಮಂ ಕಳೆ